ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ಸೆ.13ರಂದು ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ದತ್ ಯಾದವ್ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ್ನು ಏರ್ಪಡಿಸಲಾಗಿತ್ತು. ಈ ಅದಾಲತನಲ್ಲಿ ಒಟ್ಟು 1,189 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಪೈಕಿ ಒಟ್ಟು 203 ಪ್ರಕರಣಗಳನ್ನು ರೂ.3,43,18,820 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಆದಾಲತನಲ್ಲಿ ನ್ಯಾಯಮೂರ್ತಿ ಎಸ್. ಸುನಿಲ್ದತ್ ಯಾದವ್, ಎಸ್. ಆರ್. ಕೃಷ್ಣಕುಮಾರ್, ಸಿ.ಎಮ್. ಪೂನಚ್ಚ ಮತ್ತು ವಿಜಯಕುಮಾರ್ ಎ. ಪಾಟೀಲ್ ಹಾಗೂ ಅವರೊಂದಿಗೆ ಲೋಕ ಅದಾಲತ್ನ ಸದಸ್ಯರುಗಳಾದ ಎಸ್. ಎಸ್. ಬಾದವಡಗಿ, ಹರ್ಷ ದೇಸಾಯಿ, ಪಿ.ಜಿ. ನಾಯ್ಕ್ ಮತ್ತು ಎಮ್. ಎಸ್. ಹಳ್ಳಿಕೇರಿ ವಕೀಲರು ಈ ರೀತಿಯಾಗಿ ಒಟ್ಟು 4 ಪೀಠಗಳನ್ನು ಆಯೋಜಿಸಲಾಗಿತ್ತು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ತಂಬೂರ-ಮುಕ್ಕಲ ಗ್ರಾಮ ಪಂಚಾಯತ ಪಿಡಿಓ ನಾಗರಾಜಕುಮಾರ ಅಮಾನತ್ತು
ಈ ಲೋಕ ಅದಾಲತಿನಲ್ಲಿ ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ಸಿವಿಲ್ ಪ್ರಕರಣಗಳು, ರಿಟ್ ಅರ್ಜಿಗಳು ಮತ್ತು ಕೌಟುಂಬಿಕ ವಿವಾದಗಳ ಪ್ರಕಾರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಉಭಯ ಪಕ್ಷಗಾರರ ಪರಸ್ಪರ ಸಂಬಂಧಗಳನ್ನು ಉತ್ತಮವಾಗಿ. ಸೌಹಾರ್ದಯುತವಾಗಿ ಎಲ್ಲರಿಗೂ ನ್ಯಾಯ ಎಂಬ ಧೈಯ ವಾಕ್ಯದಂತೆ ಅತ್ಯಂತ ಸರಳ ರೀತಿಯಲ್ಲಿ ನ್ಯಾಯಾಲಯದ ಅಂಗಳಕ್ಕೆ ಬಂದ ಕಕ್ಷಿದಾರರಿಗೆ ನ್ಯಾಯವು ದೊರಕುವಂತೆ ಈ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಕಾಣಬಹುದಾಗಿತ್ತು ಎಂದು ಧಾರವಾಡ ಪೀಠ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಮತ್ತು (ನ್ಯಾಯಾಂಗ) ಅಧೀಕ ವಿಲೇಖನಾಧಿಕಾರಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.