ಭಾರತರತ್ನ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ ರವರ 165ನೇ ಜಯಂತಿ ಕಾರ್ಯಕ್ರಮವನ್ನು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹಳೇ ಮೈಸೂರು ಅಭಿವೃದ್ಧಿಗೆ ಸರ್. ಎಂ. ವಿ ಕೊಡುಗೆಯಿದೆ ಎಂದರು.
ಆಧುನಿಕ ಮೈಸೂರನ್ನು ವಿಶ್ವಮಟ್ಟದಲ್ಲಿ ಜನಪ್ರಿಯವಾಗಲೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ನೇತೃತ್ವದಲ್ಲಿ ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ, ಸಹಕಾರಿ, ತಂತ್ರಾಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಯೋಜನೆಗಳನ್ನು ಜಾರಿಗೆ ತರಲು ಶ್ರಮವಹಿಸಿದರು.
ಸರ್. ಎಂ. ವಿ. ಜನ್ಮ ದಿನವನ್ನು ವಿಶ್ವ ಅಭಿಯಂತರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಆದರೆ, ಮೈಸೂರಿನಲ್ಲಿ ಜಿಲ್ಲಾಡಳಿತ ನಗರಪಾಲಿಕೆ ವತಿಯಿಂದ ಆಚರಿಸಲು ಮುಂದಾಗದಿರುವುದು ದುರಾದೃಷ್ಟಕರ. ಇನ್ನೇನು ದಸರಾ ಆಗಮಿಸುತ್ತಿರುವ ಸಂಧರ್ಭದಲ್ಲಿ ಜಂಬೂಸವಾರಿ ಹಾದುಹೋಗುವ ಮಾರ್ಗದಲ್ಲಿ ಸರ್.ಎಂ.ವಿ ವೃತ್ತವಿದ್ದು ಚೆಸ್ಕಾಂ ದೀಪಾಲಂಕಾರ ಸಮಿತಿ ಆಕರ್ಷಕವಾಗಿ ಲೈಟಿಂಗ್ಸ್ ಮೂಲಕ ಸರ್.ಎಂ ವಿ ರವರನ್ನ ಬಿಂಬಿಸಲಿ ಎಂದರು.
ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ ಶಾಲಾ ಮಟ್ಟದಲ್ಲಿ ಸರ್. ಎಂ. ವಿ ರವರ ಕೊಡುಗೆ ಸೇವಾ ಯೋಜನೆಗಳನ್ನ ಸ್ಮರಿಸಲು ಸರ್ಕಾರ ಮುಂದಾಗಬೇಕು. ಬ್ರಿಟೀಷ್ ಸರ್ಕಾರ ಸರ್ ಎಂದು ಪದವಿ ನೀಡಿತು. ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಯನ್ನ ಉದ್ಘಾಟಿಸಲು ವಿಶ್ರಾಂತಿ ಗೃಹದಿಂದ ಕಾರಿನಲ್ಲಿ ಬರದೆ, ಸ್ವತಃ ಕಾಲ್ನಡಿಗೆಯಲ್ಲೇ ನಡೆದುಕೊಂಡು ಬಂದರು. ಅವರ ಸರಳತೆ ಸಮಯ ಪರಿಪಾಲನೆ ಇಂದಿನ ಯುವಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು ದಸರಾ | ರಾಜಮನೆತನಕ್ಕೆ ಅಧಿಕೃತ ಆಹ್ವಾನ ನೀಡಿದ ಸಚಿವ ಮಹದೇವಪ್ಪ
ಕಾರ್ಯಕ್ರಮದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಮ. ವಿ. ರಾಮಪ್ರಸಾದ್, ಅನಂತು, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ನಿರೂಪಕ ಅಜಯ್ ಶಾಸ್ತ್ರಿ, ಸುಬ್ಬಯ್ಯ, ಸುಚೇಂದ್ರ, ಸೂರಜ್, ಸದಾಶಿವ್, ಸೇರಿದಂತೆ ಇನ್ನಿತರರು ಇದ್ದರು.