ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕ ನಿಷೇಧವಾಗಲಿ: ನ್ಯಾ. ರೋಹಿಂಟನ್ ನಾರಿಮನ್ ಅಭಿಮತ

Date:

Advertisements

ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 1 ರಂದು ತಿರುವನಂತಪುರದಲ್ಲಿ ಕೆ.ಎಂ. ಬಶೀರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, “ಧಾರ್ಮಿಕ ಉದ್ದೇಶಗಳಿಗಾಗಿ ಬಳಸುವ ಧ್ವನಿವರ್ಧಕಗಳು ನಾಗರಿಕರ ಆರೋಗ್ಯ ಮತ್ತು ಶಾಂತಿಯುತ ಜೀವನದ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತವೆ. ದೇಶಾದ್ಯಂತ ಇದಕ್ಕೆಲ್ಲ ನಿಷೇಧ ಹೇರಬೇಕು ಎಂದು ನಾರಿಮನ್ ಪ್ರತಿಪಾದಿಸಿದ್ದಾರೆ.

“ಇಂದು ಪ್ರತಿಯೊಂದು ಧರ್ಮವೂ ತನ್ನ ಪ್ರತಿಭಟನೆ ವಿಚಾರಕ್ಕೆ ಬಂದರೆ ಜೋರುಧ್ವನಿಯಲ್ಲಿ ಕಿರುಚಾಡುತ್ತವೆ. ಭಗವಂತ ಗೌಣವಾಗಿದ್ದಾನೆ. ಒಬ್ಬ ವ್ಯಕ್ತಿಯು ಮಸೀದಿಯಿಂದ ಜೋರಾಗಿ ಕಿರುಚುತ್ತಾನೆ. ಇನ್ನೊಬ್ಬ ದೇವಾಲಯದ ಗಂಟೆಗಳನ್ನು ಬಡಿಯುತ್ತಾನೆ. ಇದೆಲ್ಲವೂ ನಿಲ್ಲಬೇಕು. ಇದು ಶಬ್ದ ಮಾಲಿನ್ಯವನ್ನು ಸೃಷ್ಟಿಸುತ್ತದೆ. ಜೊತೆಗೆ ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ” ಎಂದು ನಾರಿಮನ್ ಹೇಳಿರುವುದಾಗಿ ‘ಲಾ ಚಕ್ರ’ ವೆಬ್‌ಸೈಟ್‌ ವರದಿ ಮಾಡಿದೆ.

“ನನ್ನ ಪ್ರಕಾರ ಪ್ರತಿಯೊಂದು ರಾಜ್ಯದಲ್ಲೂ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳ ನಿಷೇಧವಾಬೇಕು. ‘ನಾವು ಭಾರತದ ಜನರು’ ಎಂಬ ಪದಗುಚ್ಛದೊಂದಿಗೆ ಪೀಠಿಕೆ ಪ್ರಾರಂಭವಾಗುತ್ತದೆ. ಭಾರತದ ಬಹುಪಾಲು ಜನರು ಅಥವಾ ಭಾರತದ ವಯಸ್ಕ ಪುರುಷ ಜನಸಂಖ್ಯೆ ಎಂದಲ್ಲ. ಅದು ನಾವು ಜನರು. ಆದ್ದರಿಂದ ನಾವೆಲ್ಲರೂ ಭಾರತದ ಜನರು. ಅದು ಎಂದಿಗೂ ಮರೆಯಬಾರದು. ಜಾತ್ಯತೀತತೆಯು ಸಂವಿಧಾನದ ಕೇಂದ್ರಬಿಂದುವಾಗಿದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X