ಉಡುಪಿ | ಧರ್ಮಗಳ ಆಚಾರ ವಿಚಾರಗಳಿಗಿಂತ, ಮೌಲ್ಯಗಳು ಹೆಚ್ಚು ಪ್ರಚಾರವಾಗಬೇಕು : ಮೌಲಾನ ಅಬ್ದುಲ್ ಅಝೀಝ್ ದಾರಿಮಿ

Date:

Advertisements

ನಮ್ಮ ಹೃದಯಗಳು ಬೇರೆ ಬೇರೆಯಾದಾಗ ನಮ್ಮೊಳಗೆ ಪ್ರೀತಿ ಕಡಿಮೆಯಾಗಿ ದ್ವೇಷ ಹೆಚ್ಚಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಉತ್ತಮ ಮಾತುಗಳಿಂದ ಸಂಪರ್ಕ ಸಾಧಿಸಿ ಎಂದು ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟಿದ್ದಾರೆ. ನಾವು ಹಸಿದಿದ್ದರೂ ಇತರರಿಗೆ ಉಣಿಸುವವರಾಗಬೇಕು. ಧರ್ಮಗಳ ಆಚಾರ ವಿಚಾರಗಳಿಗಿಂತ, ಮೌಲ್ಯಗಳು ನಮ್ಮ ನಡುವೆ ಅತಿ ಹೆಚ್ಚು ಪ್ರಚಾರವಾಗಬೇಕು ಎಂದು ಚೊಕ್ಕಬೆಟ್ಟು ಮಸೀದಿಯ ಧರ್ಮಗುರುಗಳಾದ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

WhatsApp Image 2025 09 21 at 9.26.35 PM 1

ಅವರು, ಕುಂದಾಪುರ ನಗರದ ಯುನಿಟಿ ಹಾಲ್ ನಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ ವತಿಯಿಂದ “ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ” ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ, ಧರ್ಮಗಳು ಪರಸ್ಪರ ಅರಿಯಲು ಮತ್ತು ಬೆರೆಯಲು ಇರುವಂತಹದು. ಯಾರು ನ್ಯಾಯವನ್ನು ಪಾಲಿಸುತ್ತಾನೆ ಅವನು ದೇವನ ಸಮೀಪ ಇರುವವನು ಎಂದು ಪ್ರವಾದಿ ಮುಹಮ್ಮದರು ಕಲಿಸಿದ್ದಾರೆ. ನ್ಯಾಯ ನಿಮ್ಮ ಮಾತಾಪಿತರ ಅಥವಾ ನಿಮ್ಮ ವಿರುದ್ದವೇ ಆಗಿದ್ದರು ನೀವು ನ್ಯಾಯ ಪಾಲಿಸಿ ಎಂಬ ಚಿಂತನೆ ಇಸ್ಲಾಮಿನದ್ದು ಎಂದು ಹೇಳಿದರು.

WhatsApp Image 2025 09 21 at 9.26.34 PM 1

ಸಹಬಾಳ್ವೆ ಕುಂದಾಪುರ ಅಧ್ಯಕ್ಷರಾದ ರಾಮಕೃಷ್ಣ ಹೇರ್ಳೆ ಮಾತನಾಡಿ, ನಾನು ಶ್ರೇಷ್ಠ ಇತರರು ಕನೀಷ್ಠ ಎಂಬ ಅಶಯವನ್ನು ಇಟ್ಟುಕೊಂಡರೆ ಅಂತಹ ಆಶಯಗಳನ್ನು ದೇವನು ಮೆಚ್ಚುವುದಿಲ್ಲ. ನಾವು ಸಂವಿಧಾನವನ್ನು ರಚಿಸಿಕೊಂಡು ಇಲ್ಲಿ ಭ್ರಾತೃತ್ವದ ದೇಶ, ಜಾತ್ಯಾತೀತವಾಗಿ ಇರಬೇಕು, ಧರ್ಮಾತೀತವಾಗಿ ಇರಬೇಕು, ಧರ್ಮನಿರಪೇಕ್ಷವಾಗಿ ಇರಬೇಕು ಎನ್ನುವಂತಹ ಘೋಷವಾಕ್ಯಗಳನ್ನು ಹಾಕಿಕೊಂಡರೂ ಸಹ ಇಂದು ನಮ್ಮನ್ನು ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ಒಡೆಯಲಾಗುತ್ತಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆದಿದ್ದರೂ ನಮ್ಮನ್ನು ತುಳಿಯುವಂತಹ ಪರಿಸ್ಥಿತಿ ಎದುರಾಗಿದೆ ಈ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

WhatsApp Image 2025 09 21 at 9.26.34 PM 2

ಹೋಲಿ ರೋಸರಿ ಚರ್ಚ್ ನ ಧರ್ಮಗುರುಗಳಾದ ವಂದನೀಯ ರೆ.ಫಾ. ಪಾವ್ ರೇಗೊ, ಕಾಂಗ್ರೇಸ್‌ ಮುಖಂಡ ದಿನೇಶ್‌ ಮಳವಳ್ಳಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಜ| ಮುಹಮ್ಮದ್ ಮೌಲಾ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪರ ತಾಲೂಕು ಅಧ್ಯಕ್ಷರಾದ ಎಸ್. ದಸ್ತಗೀರ್ ಕಂಡ್ಲರ್‌ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಮೌಲಾನ ಝಮೀರ್‌ ಅಹ್ಮದ್‌ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಮಹಮ್ಮದ್‌ ರಪೀಕ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಕಟಪಾಡಿ, ಜಿಲ್ಲಾ ಉಪಾಧ್ಯಕ್ಷರಾದ ಶಾಬಾನ್‌ ಹಂಗಳೂರು, ಜಿಲ್ಲಾ ಸಂಚಾಲಕರಾದ ಸಯ್ಯದ್‌ ಫರೀದ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ರಿಯಾಝ್‌ ಕೋಡಿ ಸ್ವಾಗತಿಸಿದರು. ಮುನೀರ್‌ ಅಹ್ಮದ್‌ ಕಂಡೂರ್‌ ನಿರೂಪಿಸಿದರು. ಮುಜಾವರ್‌ ಅಬು ಮುಹಮ್ಮದ್‌ ಧನ್ಯವಾದವಿತ್ತರು.

WhatsApp Image 2025 09 21 at 9.26.34 PM

ಈ ಸಂದರ್ಭದಲ್ಲಿ ರಾಮ್ಸನ್‌ ಸರಕಾರಿ ಪೌಢ ಶಾಲೆ ಕಂಡ್ಲೂರ್‌ ನ ಸಹ ಶಿಕ್ಷಕ ಸಂತೋಷ್‌, ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯ ಜಿ ಮುಹಮ್ಮದ್‌ ರಫೀಕ್‌ ಹಾಗೂ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಪಿಯುಶ್‌ ಡಿಸೋಜರಿಗೆ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

WhatsApp Image 2025 09 21 at 9.26.33 PM
ಉಉ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X