ಮುಂಡಗೋಡ | ಪೌರಕಾರ್ಮಿಕ ದಿನಾಚರಣೆ ಮುನ್ನಾ ದಿನವೇ  ವಿವಾದ – ರಾತ್ರಿ ಹೊತ್ತು ಸ್ವಚ್ಛತೆಗೆ ಪೌರಕಾರ್ಮಿಕರ ಬಳಕೆ

Date:

Advertisements

ಮುಂಡಗೋಡ: ನಾಳೆ ರಾಜ್ಯಾದ್ಯಂತ ಪೌರಕಾರ್ಮಿಕ ದಿನಾಚರಣೆ ನಡೆಯಲಿರುವ ಸಂದರ್ಭದಲ್ಲಿ, ಮುಂಡಗೋಡ ಪಟ್ಟಣ ಪಂಚಾಯಿತಿಯಲ್ಲಿ ವಿವಾದ ಎದ್ದಿದೆ. ಪೌರಕಾರ್ಮಿಕರಿಗಾಗಿ ವಿಶೇಷ ದಿನವನ್ನು ಆಚರಿಸಬೇಕು ಎಂಬ ಸರ್ಕಾರದ ನಿಯಮವಿದ್ದರೂ, ಮುಂಡಗೋಡ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಪೌರಕಾರ್ಮಿಕರನ್ನು ರಾತ್ರಿ ಪೂರ್ತಿ ಸ್ವಚ್ಛತಾ ಕಾರ್ಯಕ್ಕೆ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ತೀವ್ರ ಟೀಕೆಗೆ ಕಾರಣವಾಗಿದೆ.

ಇಂದು ಮುಂಡಗೋಡ ಪಟ್ಟಣದಲ್ಲಿ ಸಂತೆ ನಡೆದ ಹಿನ್ನೆಲೆ, ಪಟ್ಟಣದಲ್ಲಿ ಹೆಚ್ಚಿನ ಕಸದ ಬಾಕಿ ಉಳಿದಿದ್ದು, ನಾಳೆ ಪೌರಕಾರ್ಮಿಕರಿಗೆ ರಜೆ ಇರುವುದರಿಂದ ಇಂದು ರಾತ್ರಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಾದ ಅರ್ಜುನ ಬೆಂಡ್ಲಗಟ್ಟಿ, ವಿವೇಕ ಪಾಟೀಲ್ ಅವರು ಸೂಚಿಸಿರುವುದಾಗಿ ತಿಳಿದುಬಂದಿದೆ.

ಆದರೆ, “ಪೌರಕಾರ್ಮಿಕ ದಿನದಂದು ಅವರಿಗೆ ಸೂಕ್ತ ವಿಶ್ರಾಂತಿ ಸಿಗಬೇಕಿತ್ತು. ಬದಲಿಗೆ ರಾತ್ರಿಯೆಲ್ಲಾ ಅವರನ್ನು ದುಡಿಸಿಕೊಂಡು ಹೋಗುತ್ತಿದ್ದಾರೆ. ಇದು ಕಾರ್ಮಿಕರಿಗೆ ಆಗುತ್ತಿರುವ ನೇರ ಅನ್ಯಾಯ,” ಎಂದು ಪೌರಕಾರ್ಮಿಕರು ಹಾಗೂ ದಲಿತಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಸ್ವಚ್ಛತಾ ಕಾರ್ಯಕ್ಕಾಗಿ ಅಧಿಕಾರಿಗಳು ಅತಿಯಾದ ಒತ್ತಡ ಹೇರುತ್ತಿರುವುದರಿಂದ ಕಾರ್ಮಿಕರ ಮನೋಭಾವ ಕುಗ್ಗುತ್ತಿದೆ. ಶ್ರಮ ಕಾಯಿದೆ ಪ್ರಕಾರ ರಾತ್ರಿ ಹೊತ್ತು ಬಲವಂತದ ಕೆಲಸ ಮಾಡಿಸುವುದು ಕಾನೂನು ಬಾಹಿರವಾಗಿದ್ದು, ಪಟ್ಟಣ ಪಂಚಾಯಿತಿ ಪ್ರಕ್ರಿಯೆಯೇ ಪ್ರಶ್ನಾರ್ಥಕವಾಗಿದೆ ಎಂದು ವಲಯದಲ್ಲಿ ಚರ್ಚೆ ನಡೆಯುತ್ತಿದೆ.“ಪೌರಕಾರ್ಮಿಕರಿಲ್ಲದಿದ್ದರೆ ನಗರ ಸ್ವಚ್ಛತೆ ಅಸಾಧ್ಯ. ಆದರೆ ಅವರ ಹಕ್ಕನ್ನು ಕಿತ್ತುಕೊಂಡು ಪೌರಕಾರ್ಮಿಕ ದಿನವೇ ಅವರ ದುಡಿಮೆಗಾಗಿ ಬಳಸುತ್ತಿದ್ದೀರೆಂದರೆ ಇದು ದೊಡ್ಡ ಅಸಮಾನತೆ,” ಎಂದು ದಲಿತ ಮುಖಂಡ ಬಸವರಾಜ ಹಳ್ಳಮ್ಮನ್ನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಏಕಕಾಲಕ್ಕೆ ಹೊನ್ನಾವರ-ಅಂಕೋಲಾ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹೊನ್ನಾವರ ಮತ್ತು ಅಂಕೋಲಾ ಉಪನೊಂದಾಣಿಧಿಕಾರಿಗಳ ಕಚೇರಿಯಲ್ಲಿ ಸ್ವತ್ತು ನೋಂದಣಿ, ಋಣಭಾರ ಪತ್ರ...

ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ; ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ

ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಅರಣ್ಯೇತರ ಚಟುವಟಿಕೆಗೆ ಬಳಸಿಕೊಂಡಿರುವ ಭೂಮಿಯನ್ನು...

ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್‌ ಹಸ್ತಾಂತರ

ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ...

ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ – ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ.

ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಅರಣ್ಯೇತರ ಚಟುವಟಿಕೆಗೆ ಬಳಸಿಕೊಂಡಿರುವ ಭೂಮಿಯನ್ನು...

Download Eedina App Android / iOS

X