ಶಿವಮೊಗ್ಗ: ಪೂರ್ವ ವಲಯ ವ್ಯಾಪ್ತಿಯ ೩೫ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐಗಳನ್ನು ವರ್ಗಾಯಿಸಲಾಗಿದೆ.
ಟಿ.ಎಂ.ನಾಗರಾಜು : ಸಾಗರ ಟೌನ್ ಠಾಣೆಯಿಂದ ಹಾವೇರಿ ಟೌನ್ ಪೊಲೀಸ್ ಠಾಣೆಗೆ ವರ್ಗಾವಣೆ,ಆರ್.ಹೆಚ್.ಸಂಗೊಳ್ಳಿ : ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆಯಿಂದ ಭದ್ರಾವತಿ ಟ್ರಾಫಿಕ್ ಠಾಣೆಗೆ ವರ್ಗಾವಣೆ, ಅಕ್ಬರ್ ಮುಲ್ಲಾ : ಶಿಕಾರಿಪುರ ಠಾಣೆಯಿಂದ ಶಿವಮೊಗ್ಗದ ಪೂರ್ವ ಟ್ರಾಫಿಕ್ ಠಾಣೆ, ಸ್ವಪ್ನ.ಎಲ್ : ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆ.
ಸಿದ್ದಪ್ಪ, ಶಿವಮೊಗ್ಗದ ತುಂಗಾನಗರ ಠಾಣೆಯಿಂದ ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಠಾಣೆಕೃಷ್ಣಕುಮಾರ್ ಮಾನೆ : ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆಯಿಂದ ಭದ್ರಾವತಿ ಪೇಪರ್ ಟೌನ್ ಠಾಣೆ ಈ.ಕವಿತ : ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಿಂದ ಭದ್ರಾವತಿ ನ್ಯೂಟೌನ್ ಠಾಣೆಶಿವಾನಂದ ಧರೇನವರ್ : ಮಾಳೂರು ಪೊಲೀಸ್ ಠಾಣೆಯಿಂದ ದಾವಣಗೆರೆಯ ಕೆಟಿಜೆ ನಗರ ಠಾಣೆ ಸುನಿಲ್.ಬಿ.ಸಿ : ತೀರ್ಥಹಳ್ಳಿ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದವರು.
ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಗೆ ವರ್ಗಶೋಭಾರಾಣಿ.ಕೆ.ಎಸ್ : ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ದಾವಣಗೆರೆಯ ನ್ಯಾಮತಿ ಪೊಲೀಸ್ ಠಾಣೆಗೆಮಲ್ಲಾರೆಪ್ಪ ಜಿ ವಗ್ಗಣ್ಣವರ : ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಹಾವೇರಿ ಟೌನ್ ಪೊಲೀಸ್ ಠಾಣೆ.
ಟ್ರಾಫಿಕ್ನ ಮೂವರು PSIಗಳು ವಲಯ ಕಚೇರಿಗೆ
ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಸಬ್ಇನ್ಸ್ಪೆಕ್ಟರ್ಗಳಿಗೆ ಸ್ಥಳ ನಿರೀಕ್ಷಣೆಯಲ್ಲಿರಿಸಿ ವಲಯ ಕಚೇರಿಗೆ ಕರೆಯಿಸಿಕೊಳ್ಳಲಾಗಿದೆ. ಶಿವಮೊಗ್ಗದ ಪೂರ್ವ ಸಂಚಾರ ಠಾಣೆ ಪಿಎಸ್ಐ ನವೀನ್.ವಿ.ಮಠಪತಿ, ಪಶ್ಚಿಮ ಸಂಚಾರ ಠಾಣೆಯ ಪಿಎಸ್ಐ ತಿರುಮಲೇಶ್, ಭದ್ರಾವತಿ ನ್ಯೂಟೌನ್ ಠಾಣೆ ಪಿಎಸ್ಐ ಭಾರತಿ ಎಸ್.ಎನ್ ಅವರನ್ನು ವಲಯ ಕಚೇರಿಗೆ ಕರೆಯಿಸಿಕೊಳ್ಳಲಾಗುತ್ತಿದೆ.