ಬೀದರ್‌ | ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ ಧಮ್ಮ ಒಂದೇ ಮಾರ್ಗ: ವೈಜಿನಾಥ ಸೂರ್ಯವಂಶಿ

Date:

Advertisements

ಭಾರತವನ್ನು ಪ್ರಬುದ್ಧ ಭಾರತವನ್ನಾಗಿ ನಿರ್ಮಿಸಲು ಬುದ್ಧ ಧಮ್ಮ ಒಂದೆ ಮಾರ್ಗ. ಇಂದಿನ ಸಮಾಜದ ಪರಿಸ್ಥಿತಿ ತುಂಬಾ ಕಲುಷಿತಗೊಂಡಿದೆ. ಸುಳ್ಳು, ಮೋಸ, ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ  ನೋಡಿದರೆ ಮನುಷ್ಯ ಜನಾಂಗ ದುರ್ಗತಿ ಕಡೆ ಸಾಗುತ್ತಿದೆ ಎನಿಸುತ್ತದೆ ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ವೈಜಿನಾಥ ಸೂರ್ಯವಂಶಿ ಹೇಳಿದರು.

ಔರಾದ ಪಟ್ಟಣದ ಕನ್ನಡ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಶಾಖೆ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, “ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಿಬೇಕಾದರೆ ಬುದ್ಧ ಗುರುವಿನ ಸಂದೇಶ ತುಂಬಾ ಅವಶ್ಯಕತೆವಿದೆ. ಆದ್ದರಿಂದ ಧಮ್ಮ ರಥವನ್ನು ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ನಡೆಯಬೇಕಿದೆ” ಎಂದರು.

ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಕಂಟೆ ಮಾತನಾಡಿ, “ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಬೌದ್ಧಮಯ ನಿರ್ಮಾಣಕ್ಕಾಗಿ ಈ ಸಂಘಟನೆ ಸ್ಥಾಪಿಸಿದರು. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಬಾಬಾ ಸಾಹೇಬರ ಆಶಯ ಈಡೇರಿಸಲು ಶ್ರಮಿಸುವ ಮುಖಾಂತರ ಸಮತೆಯ ಭಾರತ ಕಟ್ಟಲು ಮುಂದಾಗಬೇಕು” ಎಂದು ಹೇಳಿದರು.

ನೂತನ ಪದಾಧಿಕಾರಿಗಳ ನೇಮಕ:

ಭಾರತೀಯ ಬೌದ್ಧ ಮಹಾಸಭಾ ಬೀದರ್‌ ಜಿಲ್ಲಾ ಸಮಿತಿಯ ನಿಯಮಾವಳಿ ಅನುಸಾರವಾಗಿ ಔರಾದ ತಾಲೂಕಾ ನೂತನ ಅಧ್ಯಕ್ಷರಾಗಿ ಗಣಪತಿ ವಾಸುದೇವ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ (ಸಮತಾ ಸೈನಿಕದಳ ವಿಭಾಗ), ಸುಭಾಷ ಲಾಧಾ, ಪಂಡರಿ ಕಸ್ತೂರೆ (ಸಂಸ್ಕಾರ ವಿಭಾಗ), ವೈಜಿನಾಥ ಗಲಗಲೇ, (ಪ್ರಧಾನ ಕಾರ್ಯದರ್ಶಿ), ಡಾ.ಮಿಲಿಂದ್ ಸೋಮವಂಶಿ (ಖಜಾಂಚಿ) ಅವರನ್ನು ನೇಮಕ ಮಾಡಲಾಯಿತು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರವೆಸಗಿ, ತುಂಡುತುಂಡಾಗಿ ಕತ್ತರಿಸಿ ಭೀಕರ ಹತ್ಯೆ

ಕಾರ್ಯಕ್ರಮದಲ್ಲಿ ಭೀಮಣ್ಣಾ ಭಾವಿಕಟ್ಟಿ, ದಯಾನಂದ ನವಲೇ, ಯಶವಂತರಾವ ಬಿಗಾಂವಕರ್, ಮೊಘಲಪ್ಪಾ ಸುಂದಾಳ, ನೌನಾಥ್ ಚಟ್ನಾಳ, ಸಂಜುಕುಮಾರ ಲಕ್ಕೆ, ಶಿವಕುಮಾರ ಕಾಂಬ್ಳೆ, ಭೀಮರಾವ ಜೋನ್ನೆಕೆರೆ, ನಂದಾದೀಪ ಬೋರಳೆ, ರಾಮ ಗೋಡಬೊಲೆ, ಮುನ್ನಾ ಗೊಡಬೋಲೆ, ಸಿದ್ಧಾರ್ಥ ಕಾಂಬ್ಳೆ ರಾಹುಲ್ ಖಂದಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X