ಕರ್ನಾಟಕದಲ್ಲಿ ಈ ಬಾರಿಯ ಮುಂಗಾರು ತನ್ನ ಆರ್ಭಟವನ್ನು ಕಡಿಮೆ ಮಾಡುವ ಯಾವ ಲಕ್ಷಣವನ್ನೂ ತೋರಿಲ್ಲ. ಒಂದು ದಿನ ಮಳೆ ಕಡಿಮೆಯಾದಂತೆ ಕಂಡರೂ, ಮತ್ತೊಂದು ದಿನ ಹೆಚ್ಚಿನ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 11ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಗೋಪಾಲನಗರ, ಎಂಎಂ ಹಿಲ್ಸ್, ಭಾಗಮಂಡಲ, ಕುಂದಾಪುರ, ಮಾಗಡಿ, ಶಕ್ತಿನಗರ ಮತ್ತು ಉಡುಪಿಯಂತಹ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಮಳೆಯಾಗಿದೆ.
ಕೆಲವು ಕಡೆ ಮಳೆ ಕಡಿಮೆಯಾದರೂ, ಮೋಡಕವಿದ ವಾತಾವರಣವು ರಾಜ್ಯಾದ್ಯಂತ ಮುಂದುವರಿಯಲಿದೆ. ತಾಪಮಾನದ ವಿವರಗಳ ಪ್ರಕಾರ, ಮೈಸೂರಿನಲ್ಲಿ ಗರಿಷ್ಠ 32.4 ಡಿಗ್ರಿ ಸೆಲ್ಸಿಯಸ್ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನ ಎಚ್ಎಎಲ್ನಲ್ಲಿ ಗರಿಷ್ಠ 30.4°C, ಕನಿಷ್ಠ 21°C, ನಗರ ಕೇಂದ್ರದಲ್ಲಿ 30.2°C ಮತ್ತು 21.4°C, ಕೆಐಎಎಲ್ನಲ್ಲಿ 30.6°C ಹಾಗೂ 21.1°C, ಜಿಕೆವಿಕೆಯಲ್ಲಿ 29°C ಮತ್ತು 19°C ಉಷ್ಣಾಂಶ ದಾಖಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಕರಾವಳಿಯ ಹವಾಮಾನವೂ ತಂಪು ಮತ್ತು ತೇವದಿಂದ ಕೂಡಿದೆ. ಹೊನ್ನಾವರದಲ್ಲಿ ಗರಿಷ್ಠ 31.3°C, ಕಾರವಾರದಲ್ಲಿ 30.8°C, ಮಂಗಳೂರು ಏರ್ಪೋರ್ಟ್ನಲ್ಲಿ 30.8°C ಹಾಗೂ ಶಕ್ತಿನಗರದಲ್ಲಿ 32.1°C ಉಷ್ಣಾಂಶ ದಾಖಲಾಗಿದೆ.
ಉತ್ತರ ಕರ್ನಾಟಕದ ಭಾಗಗಳಲ್ಲಿ ಬೆಳಗಾವಿಯಲ್ಲಿ ಗರಿಷ್ಠ 28.4°C, ಬೀದರ್ನಲ್ಲಿ 29.4°C, ವಿಜಯಪುರದಲ್ಲಿ 30.5°C, ಧಾರವಾಡದಲ್ಲಿ 29°C, ಗದಗದಲ್ಲಿ 30.8°C, ಕಲಬುರಗಿಯಲ್ಲಿ 32°C, ಹಾವೇರಿಯಲ್ಲಿ 28.2°C ಹಾಗೂ ಕೊಪ್ಪಳದಲ್ಲಿ 30.8°C ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಇದರ ನಡುವೆ, ಶಕ್ತಿ ಚಂಡಮಾರುತವು ಹಂತಹಂತವಾಗಿ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಮುಂಬೈ ಹಾಗೂ ಪಕ್ಕದ ಕರಾವಳಿ ಪ್ರದೇಶಗಳಲ್ಲಿ ಅಕ್ಟೋಬರ್ 8ರವರೆಗೆ ತುಂತುರು ಅಥವಾ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಸನ್ನಿವೇಶ ಮುಂದುವರಿಯುವ ಹಿನ್ನೆಲೆಯಲ್ಲಿ ನಾಗರಿಕರು ಎಚ್ಚರದಿಂದ ಇರಲು ಸಲಹೆ ನೀಡಲಾಗಿದೆ