ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಗರಸಭಾ ಕಾರ್ಯಾಲಯದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆಂದು, ಸುಲ್ತಾನ್ ಉಲ್ ಹಿಂದ್ ಟ್ರಸ್ಟ್ ವತಿಯಿಂದ ಅಧ್ಯಕ್ಷರಿಗೆ ಶುಕ್ರವಾರದಂದು ಸನ್ಮಾನಿಸಲಾಯಿತು.
ನಗರಸಭಾ ಅಧ್ಯಕ್ಷ ಎಂ ಸಮಿಉಲ್ಲಾ ಮತ್ತು ಉಪಾಧ್ಯಕ್ಷ ಮನೋಹರ್ ಅಧಿಕಾರವಹಿಸಿ ಒಂದು ವರ್ಷ ಮುಗಿದಿದೆ. ಹಾಗೆಯೇ, ಹಾಸನ ರಸ್ತೆ ಎಡ ಭಾಗದಲ್ಲಿ ಉತ್ತಮವಾದ ಕೆಲಸವನ್ನು ಅಧ್ಯಕ್ಷರು ಮಾಡುವುದರ ಮೂಲಕ ಸಾಮಾಜಿಕ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ವ್ಯವಸ್ಥೆಗಳನ್ನು ಸೂಕ್ತವಾದ ರೀತಿಯಲ್ಲಿ ಮಾಡಿಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮಂಜು ಸಂತೋಷ ತಿಳಿಸಿದರು.
ಇದನ್ನೂ ಓದಿದ್ದೀರಾ?ತರೀಕೆರೆ l ಸರ್ಕಾರಿ ಜಾಗದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಆರೋಪ; ದಸಂಸ ಪ್ರತಿಭಟನೆ
ನಮ್ಮ ತಾಲೂಕಿನಲ್ಲಿ ಮೊದಲು ನಮಗೆ ವಾರ್ಡ್ ಗಳಲ್ಲಿ ಮರ್ಯಾದೆ ಇರಲಿಲ್ಲ, ಈ ಅಧ್ಯಕ್ಷರು ಬಂದ ನಂತರ ನಮ್ಮ ವಾರ್ಡ್ ಗಳು ಅಭಿವೃದ್ಧಿ ಕೆಲಸಗಳು ಸುಲಭ ರೀತಿಯಲ್ಲಿ ಆಗುತ್ತಿದೆ ಹಾಗೂ ನಮ್ಮ ಅರಸೀಕೆರೆಗೆ ಹೆಮ್ಮೆ ತರುವ ರೀತಿ ಅಂಬೇಡ್ಕರ್ ರವರ ಪುತ್ಥಳಿ ಹತ್ತಿರ ರಾಷ್ಟ್ರಧ್ವಜ ನಿರ್ಮಾಣ ಮಾಡಿದ್ದಾರೆ. ನಗರದ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ ನಗರ ಸಭೆಯ ನಮ್ಮ ಎಲ್ಲಾ ಸದಸ್ಯರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ನಗರ ಸಭೆ ಸದಸ್ಯರಾದ ಹರೀಶ್ ಮಾತಾಡಿದರು.