ಕಾಡುಗಳಲ್ಲಿ ಮೇಯಿಸುವಿಕೆ ನಿಷೇಧ ಸರಿ.. ಆದರೆ ಸಂಪೂರ್ಣ ನ್ಯಾಯೋಚಿತವೆ?

Date:

Advertisements

ಕಾಡುಗಳಲ್ಲಿ ಜಾನುವಾರುಗಳು, ಆಡು-ಮೇಕೆಗಳನ್ನು ಮೇಯಿಸಲು ನಿಷೇಧಿಸುವ ಸರಕಾರದ ತೀರ್ಮಾನವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದ ಕ್ರಮವಾಗಿದೆ. ವನ್ಯಜೀವಿಗಳ ಆಹಾರ ಸರಪಳಿಗೆ ಧಕ್ಕೆ ಉಂಟುಮಾಡುವ ಹಾಗೂ ಕಾಡಿನ ಪುನರುತ್ಪತ್ತಿಗೆ ಅಡ್ಡಿಯಾಗುವ ಮೇಯಿಸುವ ಚಟುವಟಿಕೆಗಳನ್ನು ತಡೆಯಬೇಕೆಂಬುದು ಹಿತಾಸಕ್ತಿಯ ನಿಲುವು ಸರಿ! ಆದರೆ, ಈ ನಿಷೇಧ ಪೂರ್ಣವಾಗಿ ನ್ಯಾಯಸಮ್ಮತ ಆಗಬೇಕಾದರೆ, ಸರಕಾರವು ಕೆಲ ಕ್ರಮಗಳನ್ನು ಕೂಡಾ ತಕ್ಷಣ ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ನಿಲುವು.

ದಶಕಗಳಿಂದ ಸಾವಿರಾರು ಎಕರೆಗಳ ಸರ್ಕಾರಿ ಗೋಮಾಳ ಭೂಮಿಗಳು, ಸಾಮೂಹಿಕ ಗ್ರಾಮಭೂಮಿ, ದರಕಾಸ್ತು ಭೂಮಿ, ಮತ್ತು ‘ಖರಾಬು’ ಭೂಮಿಗಳನ್ನು ವಿವಿಧ ಲಾಬಿಗಳಿಂದ ಹಬ್ಬಿಸಲಾದ ಅಕ್ರಮ ಮಂಜೂರಾತಿಗಳ ಮೂಲಕ ಕಬಳಿಸಲಾಗಿದೆ. ಈ ಭೂಮಿಗಳನ್ನು ನಿಯಮಾನುಸಾರ ಜಾನುವಾರುಗಳನ್ನು ಮೇಯಿಸಲು ಬಳಸಬೇಕಾಗಿತ್ತು. ಆದರೆ ಅನೇಕ ರಾಜಕೀಯ ಶಕ್ತಿ ಕೇಂದ್ರಗಳು ಹಾಗೂ ರಿಯಲ್ ಎಸ್ಟೇಟ್ ಹಕ್ಕುಬಾಧಿತ ಲಾಬಿಗಳು ಈ ಭೂಮಿಗಳನ್ನು ದಂಡೆ ಕಟ್ಟಿ ಒತ್ತುವರಿ ಮಾಡಿಕೊಂಡಿರುವುದು ದಾಖಲೆಗಳಿಂದಲೇ ದೃಢವಾಗುತ್ತಿದೆ.

WhatsApp Image 2025 07 25 at 6.03.47 PM

2019ರಿಂದ 2022ರವರೆಗೆ ಸುಮಾರು 252.36 ಎಕರೆ ಗೋಮಾಳ ಭೂಮಿಗಳನ್ನು ಮಠಗಳು, ಶಿಕ್ಷಣ ಸಂಸ್ಥೆಗಳು, ಟ್ರಸ್ಟ್‌ಗಳು ಹಾಗೂ ಇತರ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ 35.33 ಎಕರೆ ಭೂಮಿಯನ್ನು ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿರುವುದೂ ದಾಖಲಾಗಿರುವುದರಿಂದ, ಇದೊಂದು ನಿರಂತರ ನಡೆದುಬರುವ ಪ್ರಕ್ರಿಯೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಂಜೂರಾತಿಗಳು ಯಾವ ರೀತಿಯ ನಿಯಮಾವಳಿಗಳನ್ನು ಮೀರಿ ನಡೆದಿವೆ ಎಂಬುದರ ಬಗ್ಗೆ ನಿರ್ದಿಷ್ಟ ತನಿಖೆಗಳ ಅಗತ್ಯವಿದೆ. “ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ” ಎಂಬ ನಾನಾ ರೀತಿಯ ಅವ್ಯವಹಾರಿಕ ಕಾರಣಗಳನ್ನು ನೀಡಿಕೊಂಡು ಗೋಮಾಳದ ಜಮೀನುಗಳನ್ನು ಬೇರೆಯವರಿಗೆ ನೀಡಿ ಬಿಡುತ್ತಿರುವುದೇ ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ವಿಚಾರ.

ಹಳ್ಳಿಗಳಲ್ಲಿ ಕಳೆದ ಕೆಲವರ್ಷಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಸೂಕ್ತ ಸ್ಥಳಗಳ ಕೊರತೆಯಿಂದ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಿನಲ್ಲಿ ಮೇಯಿಸುವಿಕೆ ನಿಷೇಧಿಸಿದರೂ, ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬಿಟ್ಟುಬಿಡುವುದು, ಸರಕಾರದ ದ್ವಿತೀಯಮಟ್ಟದ ವೈಫಲ್ಯವಾಗಿದೆ. ಹಾಗಾಗಿ ಅನಧಿಕೃತವಾಗಿ ಜಮೀನು ಹಂಚಿಕೆ ಮಾಡಿರುವ ಪ್ರಕರಣಗಳನ್ನು ಗುರುತಿಸಬೇಕು. ರೈತರನ್ನು ಹಾಗೂ ಸ್ಥಳೀಯ ಆಡಳಿತವನ್ನು ಒಳಗೊಂಡು ಸಮಿತಿಗಳನ್ನು ರಚಿಸಿ, ಒತ್ತುವರಿ ಭೂಮಿಯ ಪಟ್ಟಿ, ಪರಿಶೀಲನೆ ಮತ್ತು ತೆರವು ಕಾರ್ಯಾಚರಣೆ ನಡೆಯಬೇಕಾಗಿದೆ.

ಪರಿಸರದ ಹಿತಾಸಕ್ತಿಯ ನಿಲುವುಗಳಿಗೆ ಗ್ರಾಮೀಣ ಬದುಕಿನ ಸ್ಪಂದನೆ ಇರಬೇಕು. ಕಾಡಿನಲ್ಲಿ ಜಾನುವಾರಗಳಿಗೆ ಮೇಯಲು ತಡೆಯೊಡ್ಡುವ ಮುನ್ನ, ಹಳ್ಳಿಗಳಲ್ಲಿ ಅವುಗಳ ಬದುಕೂ ಸಾಗಲು ಜಾಗ ನೀಡಬೇಕಾಗಿದೆ. ಇಲ್ಲದಿದ್ದರೆ, ಈ ಪರಿಸರ ನೀತಿಗಳ ಹಿಂದೆಯೂ ರಾಜಕೀಯ ಮತ್ತು ಆರ್ಥಿಕ ಲಾಭದ ಅಜಾಗರೂಕ ಆಟ ನಡೆಯುತ್ತಿದೆ ಎಂಬ ಅನುಮಾನ ಇನ್ನಷ್ಟು ಬಲಗೊಳ್ಳಲಿದೆ.

ಪರಿಸರ ಸಂರಕ್ಷಣೆ ದೇಶದ ಪ್ರಜಾಪ್ರಭುತ್ವದ ಬಹುಮುಖ್ಯ ಕರ್ತವ್ಯವಾಗಿದ್ದರೂ, ಆ ಕರ್ತವ್ಯದ ಹೆಸರಿನಲ್ಲಿ ಗ್ರಾಮೀಣ ಜನರ ಹಕ್ಕುಗಳನ್ನು ಬಲಿಕೊಡಲಾಗದು. ಜಾನುವಾರುಗಳನ್ನು ಕಾಡಿನಿಂದ ದೂರವಿಡುವ ನಿರ್ಧಾರವು ಹಿತಾಸಕ್ತಿಯ ನಿಲುವಾಗಿದ್ದರೂ, ಅದನ್ನು ನ್ಯಾಯಪೂರಿತವಾಗಿ ಜಾರಿಗೆ ತರಲು ಸರ್ಕಾರದ ನಿರ್ಧಾರಗಳು ಸಮತೋಲನ ಹಾಗೂ ಪ್ರಾಮಾಣಿಕತೆಯ ಆಧಾರದ ಮೇಲೆ ಇರಬೇಕಾಗುತ್ತದೆ.

ವರ್ಷಗಳ ಹಿಂದಿನಿಂದ ಅರಣ್ಯ ಪ್ರದೇಶಗಳಿಗೆ ಆಧಾರವಾಗಿರುವ ತಮ್ಮ ಬದುಕು, ಸಂಸ್ಕೃತಿ, ಮತ್ತು ಜೀವರಿತಗಳೊಂದಿಗೆ ತೊಡಗಿಸಿಕೊಂಡಿರುವ ಆದಿವಾಸಿ ಹಾಗೂ ಅರಣ್ಯವಾಸಿಗಳು ತಮ್ಮ ಪಾರಂಪರಿಕ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ವಿನಾಯಿತಿ ಪಡೆದಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿರುವುದು ಸ್ವಾಗತಾರ್ಹ. ಇದೊಂದು ಮೊದಲ ಹೆಜ್ಜೆ ಮಾತ್ರ. ಮುಂದಿನ ಹಂತದಲ್ಲಿ ಸರ್ಕಾರವು ಗೋಮಾಳ ಭೂಮಿಗಳ ಮೇಲೆ ನಡೆದಿರುವ ಅಕ್ರಮಗಳನ್ನು ಶುದ್ಧೀಕರಿಸಿ, ಗ್ರಾಮೀಣ ಹಸಿವನ್ನು ತಣಿಸುವ ನೈತಿಕ ಬದ್ಧತೆಯನ್ನು ಮೆರೆದಾಗ ಮಾತ್ರ ಪರಿಸರ ಸಂರಕ್ಷಣೆಯ ಶಕ್ತಿ ಹಾಗೂ ಸಾಮಾಜಿಕ ನ್ಯಾಯದ ಅರ್ಥ ಸಂಪೂರ್ಣವಾಗುತ್ತದೆ.

WhatsApp Image 2025 07 25 at 6.09.24 PM

ಇದನ್ನೂ ಓದಿ: ಶಿವಮೊಗ್ಗ | ಜುಲೈ 26 ರಂದು : ಕಾರ್ಗಿಲ್ ವಿಜಯೋತ್ಸವ ಆಚರಣೆ

ಸರ್ಕಾರಿ ಗೋಮಾಳಗಳ ಭೂಮಿಯ ಮೇಲಿನ ಅಕ್ರಮ ಮಂಜೂರಾತಿ, ರಾಜಕೀಯ ಲಾಬಿ ಮತ್ತು ಭ್ರಷ್ಟಾಚಾರದ ಬೃಹತ್ ನೆಲೆಗಳನ್ನು ಮುರಿಯದೆ ಪರಿಸರ ಸಂರಕ್ಷಣೆ ಎಂಬ ಆಶಯವು ಕೇವಲ ಸ್ತೋತ್ರದ ಪದಗಳಾಗಿ ಉಳಿಯುತ್ತದೆ. ಹೀಗಾಗಿ, ವನ್ಯಜೀವಿಗಳ ಕಾಪಾಡುವಿಕೆಯಷ್ಟೆ, ಗ್ರಾಮೀಣ ಬದುಕಿನ ಸಮರಕ್ಷಣೆಗೂ ಸರ್ಕಾರ ಸಮಾನ ಆದ್ಯತೆ ನೀಡಬೇಕು. ಪ್ರತಿ ಹಳ್ಳಿ, ಪ್ರತಿಯೊಂದು ಪಂಚಾಯತ್ ಮಟ್ಟದಲ್ಲಿ ಭೂಮಿ ಪರಿಶುದ್ಧವಾಗಬೇಕು. ರೈತರಿಗೆ ದನ-ಕರುಗಳಿಗೆ ಮೇಯುವ ಹಕ್ಕುಸಮ್ಮತ ಅವಕಾಶ ಕಲ್ಪಿಸಬೇಕು. ಕಾನೂನು ಬಲವು, ಪರಿಸರ ತಾತ್ವಿಕತೆ ಮತ್ತು ಮಾನವೀಯ ನೀತಿ – ಇವೆಲ್ಲವೂ ಒಂದೇ ಸಮತಲದಲ್ಲಿ ನಡೆಯಬೇಕಾದ ಹೊಣೆಗಾರಿಕೆ ಇಂದಿನ ಆಡಳಿತದ ಮೌಲ್ಯಾಧಾರಿತ ಪರೀಕ್ಷೆಯಾಗಿದೆ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X