ಸಿದ್ದರಾಮಯ್ಯನವರೇ, ಸಾಮಾಜಿಕ ನ್ಯಾಯ ನಿಮ್ಮ ನುಡಿಯಲ್ಲಿದೆ, ಅದು ನಡೆಯಲ್ಲೂ ಇರಲಿ- ಪ್ರಕಾಶ್‌ ರಾಜ್‌

Date:

Advertisements

“ಸಾಮಾಜಿಕ ನ್ಯಾಯ ನಿಮ್ಮ ನುಡಿಯಲ್ಲಿದೆ, ಅದು ನಡೆಯಲ್ಲೂ ಇರಲಿ. ನಾಳೆ ರೈತರೊಂದಿಗೆ ನಡೆಸುವ ಸಭೆ ರೈತರ ಜಮೀನು ನೋಟಿಫಿಕೇಷನ್‌ ರದ್ದು ಪಡಿಸುವ ನಿಟ್ಟಿನಲ್ಲಿ ಮಾತ್ರ ಇರಲಿ. ಕಾನೂನಿನ ತೊಡಕು ನಿವಾರಿಸುವ ಬಗ್ಗೆ ಮಾತ್ರ ಇರಲಿ” ಎಂದು ಪ್ರಕಾಶ್‌ ರಾಜ್‌ ಹೇಳಿದರು.

ಸೋಮವಾರ ಎದ್ದೇಳು ಕರ್ನಾಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದೇ ಜುಲೈ ನಾಲ್ಕರಂದು ರೈತ ಮುಖಂಡರೊಂದಿಗೆ ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ನಡೆಸಿದ ಸಭೆಯಲ್ಲಿ ಕಾನೂನು ತೊಡಕು ನಿವಾರಣೆಗೆ ಯತ್ನಿಸುವ ಭರವಸೆ ನೀಡಿ, ಹತ್ತು ದಿನಗಳ ಸಮಯ ಕೇಳಿದ್ದರು. ಅದಕ್ಕೆ ಒಪ್ಪಿದ್ದೆವು. ಆದರೆ ಇದರ ಮಧ್ಯೆ ಕಾನೂನು ತೊಡಕು ನಿವಾರಿಸುವ ಬಗ್ಗೆ ಸರ್ಕಾರ ಕೆಲಸ ಮಾಡುವ ಬದಲು ರೈತರಲ್ಲಿ ಒಡಕು ಮೂಡಿಸಲು ಯತ್ನಿಸಿದೆ. ನಾಲ್ಕು ದಿನ ಬಾಕಿ ಇರುವಾಗಿ ನಾವು ಜಮೀನು ಕೊಡಲು ರೆಡಿ ಇದ್ದೇವೆ ಎಂದು ಹೇಳುತ್ತ ಬಂದ ಕೆಲವು ರೈತರಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಇದು ಅನುಮಾನ ಮೂಡಿಸಿದ ಕಾರಣ ಪತ್ರಿಕಾಗೋಷ್ಠಿ ಮಾಡಬೇಕಾಯಿತು” ಎಂದರು.

ಜುಲೈ ನಾಲ್ಕರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿುಗಳು, ನನಗೆ ಅರ್ಥವಾಗಿದೆ. ನಮ್ಮದು ರೈತವಿರೋಧಿ ಸರ್ಕಾರ ಅಲ್ಲ. ರೈತ ಪರವಾದ ನಿರ್ಧಾರ ತೆಗೆದುಕೊಳ್ಳಲು, ಕಾನೂನಿನ ತೊಡಕು ನಿವಾರಣೆಗೆ ಏನು ಮಾಡಬೇಕು ಎಂದು ಯೋಚಿಸಬೇಕಿದೆ. ಹತ್ತು ದಿನಗಳ ಸಮಯಾವಕಾಶ ಬೇಕು ಎಂದು ಕೇಳಿದಾಗ ರೈತರು ಒಪ್ಪಿದ್ದರು. ನಾವೂ ಕಾನೂನು ತೊಡಕಿನ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದೆವು. ಆದರೆ ಈ ಹತ್ತು ದಿನಗಳಲ್ಲಿ ಸಚಿವ ಎಂ ಬಿ ಪಾಟೀಲರು ದೆಹಲಿಗೆ ಹೋಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ರಕ್ಷಣಾ ಕಾರಿಡಾರ್‌, ಏರೋಸ್ಪೇಸ್‌ಗೆ ಅನುಮತಿ ಕೇಳುತ್ತಾರೆ. ಮೂರು ವರ್ಷಗಳಿಂದ ಇಲ್ಲದ ಭೂಮಿಕೊಡುವ ರೈತರು ಹತ್ತು ದಿನದಲ್ಲಿ ಎಲ್ಲಿಂದ ಬಂದರು? ಮೂರು ವರ್ಷಗಳಿಂದ ರೈತರ ಸಮಸ್ಯೆ ಕೇಳಲು ಸಮಯ ಇರಲಿಲ್ಲ. ದಿಢೀರ್‌ ಬಂದ ರೈತರಿಗೆ ಕೊಡಲು ಸಮಯ ಇದೆ. ಎಕರೆಗೆ ಮೂರೂವರೆ ಕೋಟಿ ಎಲ್ಲಿಂದ ಕೊಡುತ್ತೀರಿ? ಅದು ನಮ್ಮ ದುಡ್ಡಲ್ಲವೇ? ಅದನ್ನು ಯಾರು ನಿರ್ಧಾರ ಮಾಡೋದು. ಅದರ ಮಧ್ಯೆ ಒಡಕು ಉಂಟು ಮಾಡುವ ಕೆಲಸ ಹೋರಾಟಗಾರರು ಮಾಡುತ್ತಿದ್ದಾರೆ, ಅವರ ಹಿಂದೆ ಯಾರು ಯಾರು ಇದ್ದಾರೆ ಎಂದು ಗೊತ್ತು ಎಂದು ಪಾಟೀಲರು ಹೇಳುತ್ತಾರೆ. ನಮ್ಮ ಹಿಂದೆ ಯಾರಿದ್ದಾರೆ ಎಂದು ನಾವು ಹೇಳುತ್ತೇವೆ. ನಿಮ್ಮ ಹಿಂದೆ ಯಾರಿದ್ದಾರೆ ಎಂದು ನೀವು ಹೇಳಿ ಎಂದು ಸವಾಲು ಹಾಕಿದರು.

ಹಸಿರು ವಲಯವನ್ನು ಕೈಗಾರಿಕಾ ವಲಯ ಮಾಡುವ ಪಾಲಿಸಿ ಎಲ್ಲಿದೆ? ಅಂತಹ ಪಾಲಿಸಿಯೇ ಇಲ್ಲ. ಹಸಿರು ವಲಯ ತೆಗೆದು ಹಾಕುವ ಪವರ್‌ ನಿಮಗೆ ಇಲ್ಲ. ಬಿಜಾಪುರದಲ್ಲಿ ಏನು ಮಾಡಿದ್ರೋ ಅದಕ್ಕೆ ಈಗ ಹೋರಾಟ ನಡೆಯುತ್ತಿದೆ. ಹೋರಾಟಗಾರರ ದಾರಿ ತಪ್ಪಿಸುವ ಕುತಂತ್ರ ಬಿಟ್ಬಿಡಿ. ನಾಳೆಯ ಸಭೆ ನೋಟಿಫಿಕೇಷನ್‌ ರದ್ದುಪಡಿಸುವ ಬಗ್ಗೆ ಮಾತ್ರ ಇರಲಿ. ಪರಿಹಾರ ಬೇಡ, ಭೂಮಿ ಕೊಡಲ್ಲ ಅಂದ ಮೇಲೆ ಪರಿಹಾರದ ಚರ್ಚೆ ಯಾಕೆ? ಎಂದರು.

ರೈತ ಮುಖಂಡ ವೀರಸಂಗಯ್ಯ, ʼಎದ್ದೇಳು ಕರ್ನಾಟಕʼದ ಸಂಚಾಲಕ ಕೆ ಎಲ್‌ ಅಶೋಕ್‌, ತಾರಾ ರಾವ್‌ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

Download Eedina App Android / iOS

X