ಬೀದರ್‌ | ಮುಂದುವರೆದ ಮಳೆ : ಮುಳುಗಡೆಯಾದ ಸೇತುವೆಗಳು; ಜಲಾವೃತವಾದ ಬೆಳೆ

Date:

Advertisements

ಬೀದರ್ ಜಿಲ್ಲೆಯಾದ್ಯಂತ‌ ವರುಣನ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ಬೆಳಿಗ್ಗೆಯಿಂದಲೇ ಆರಂಭವಾಗಿದೆ. ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ನಡು ನಡುವೆ ಜೋರಾಗಿ ಬೀಳುತ್ತಿದೆ. ಜಿಲ್ಲೆಯ ಜಲಾಶಯ, ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

WhatsApp Image 2025 09 27 at 10.53.41 AM
ಬೆಳೆದು ನಿಂತ ತೊಗರಿ, ಸೋಯಾ ಸೇರಿದಂತೆ ಇತರೆ ಬೆಳೆ ನೀರಿನಲ್ಲಿ ಜಲಾವೃತ

ಸತತ ಮಳೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ತಗ್ಗು ಪ್ರದೇಶ, ಜಲಾಶಯ, ನದಿ ಪಾತ್ರದಲ್ಲಿ ಇರುವ ಜಮೀನುಗಳಲ್ಲಿ ಬೆಳೆದ ತೊಗರಿ, ಹತ್ತಿ, ಸೋಯಾಬಿನ್‌, ಕಬ್ಬು ಸೇರಿದಂತೆ ನಾನಾ ಬೆಳೆಗಳ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಬೆಳೆ ನಾಶವಾಗಿದೆ. ಮಳೆಯಿಂದ ದೈನಂದಿನ ಕೆಲಸ, ಶಾಲಾ–ಕಾಲೇಜುಗಳಿಗೆ ಹೋಗುವವರು ತೊಂದರೆ ಅನುಭವಿಸುವಂತಾಗಿದೆ.

Advertisements

ಸೇತುವೆ ಮುಳುಗಡೆ ಸಂಪರ್ಕ ಕಡಿತ:

ಸತತ ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಮಾಂಜ್ರಾ ನದಿ ತೀರದಲ್ಲಿರುವ ಗ್ರಾಮಗಳ ಸೇತುವೆ ಮುಳುಗಡೆಯಾಗಿವೆ.

ಕಮಲನಗರ ತಾಲ್ಲೂಕಿನ ಬಳತ(ಕೆ) ಗ್ರಾಮ ಸಮೀಪದ ಸೇತುವೆ ಎರಡ್ಮೂರು ದಿನಗಳಿಂದ ಮುಳುಗಡೆಯಾಗಿದೆ. ಸಂತಪೂರ-ಸಂಗಮ-ಭಾಲ್ಕಿಗೆ ಸಂಪರ್ಕಿಸುವ ರಸ್ತೆ ಸ್ಥಗಿತವಾಗಿದೆ. ಭಾಲ್ಕಿ-ಹುಲಸೂರ ಮುಖ್ಯರಸ್ತೆಯ ಇಂಚೂರ ಸಮೀಪದ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಇದರಿಂದ ತಾಲ್ಲೂಕು ಹಾಗೂ ಮಹಾರಾಷ್ಟ್ರದ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

WhatsApp Image 2025 09 27 at 10.53.43 AM
ಸಂತಪೂರ-ಸಂಗಮ ಮುಖ್ಯ ರಸ್ತೆಯ ಬಳತ(ಕೆ) ಗ್ರಾಮ ಸಮೀಪದ ಸೇತುವೆ ಮಾಂಜ್ರಾ ನದಿ ಪ್ರವಾಹದಿಂದ ಮುಳುಗಡೆಯಾಗಿದೆ.

ಮಾಂಜ್ರಾ ನದಿ ಭೋರ್ಗರಿಯುತ್ತಿದ್ದು, ನದಿ ತೀರದಲ್ಲಿರುವ ಕೌಠಾ(ಬಿ)-ಇಸ್ಲಾಂಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಎರಡ್ಮೂರು ದಿನಗಳಿಂದ ಬಂದ್‌ ಆಗಿದೆ. ಕಾರಂಜಾ ಜಲಾಶಯ ಹರಿವು, ಮಾಂಜ್ರಾ ನದಿ ಪ್ರವಾಹದಿಂದ ಜಿಲ್ಲೆಯ ನಾನಾ ಕಡೆ ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡ ಪರಿಣಾಮ ಜನರು ಪರದಾಡುವಂತಾಗಿದೆ.

ಹೆಸರು, ಉದ್ದು ಬೆಳೆದಿದ್ದ ರೈತರು ಪ್ರವಾಹದಿಂದ ಬೆಳೆ ಕಳೆದುಕೊಂಡು ತತ್ತರಿಸಿದರು. ಮುಂದೆ ಸೋಯಾಬಿನ್‌, ತೊಗರಿ, ಹತ್ತಿ ಬೆಳೆ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಮತ್ತೆ ಶುರುವಾದ ಮಳೆ, ಪ್ರವಾಹ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

WhatsApp Image 2025 09 27 at 12.10.07 PM
ಕಾರಂಜಾ ಜಲಾಶಯ ನೀರು ಬಿಡುಗಡೆಯಾದ ಹಿನ್ನೆಲೆ ಭಾಲ್ಕಿ ತಾಲ್ಲೂಕಿನ ಗೋಧಿ ಹಿಪ್ಪರಗಾ-ಮಾಸಿಮಾಡ ಗ್ರಾಮಗಳ ಮಧ್ಯೆದ ಸೇತುವೆ ಮುಳುಗಡೆಯಾಗಿ ಸಂಚಾರ ಕಡಿತವಾಗಿದೆ.

ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ನೀರು ಸಂಪೂರ್ಣ ನೀರುಪಾಲಾಗಿದೆ. ಜಿಲ್ಲೆಯ ರೈತರಿಗೆ ಅತಿವೃಷ್ಟಿ-ಅನಾವೃಷ್ಟಿ ಪದೇ ಪದೇ ಬಾಧಿಸುತ್ತಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ನೆಲಮಟ್ಟದಲ್ಲಿರುವ ಸೇತುವೆಗಳು ಪ್ರವಾಹದಿಂದ ಮುಳುಗಡೆಯಾಗುತ್ತಿವೆ. ನೆಲ ಮಟ್ಟದ ಸೇತುವೆಗಳನ್ನು ಮೇಲ್ದರ್ಜೆಗೇರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ. 

WhatsApp Image 2025 09 27 at 8.23.14 AM
ಭಾಲ್ಕಿ-ಹುಲಸೂರ ರಸ್ತೆಯ ಇಂಚೂರ ಸಮೀಪದ ಸೇತುವೆ ಮುಳುಗಡೆ, ಸಂಪರ್ಕ ಕಡಿತ

ಮಾಂಜ್ರಾ ನದಿ ಪ್ರವಾಹದಿಂದ ನದಿ ತೀರದ ಗ್ರಾಮಗಳಾದ ಚಿಲ್ಲರ್ಗಿ, ಬಾಬಳಿ ಸೇರಿದಂತೆ ಹಲವು ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದ್ದು, ಚಿಲ್ಲರ್ಗಿ ಗ್ರಾಮದ ಪ್ರಕಾಶ ನಾಟಿಕರ್‌ ಎಂಬುವವರ ದನದ ಕೊಟ್ಟಿಗೆಯೊಳಗೆ ನೀರು ನುಗ್ಗಿದ್ದು, ನದಿ ಪ್ರವಾಹ ಏರಿಕೆಯಾಗುವ ಸಾಧ್ಯತೆಯಿದ್ದು, ಗ್ರಾಮದೊಳಗೆ ನೀರು ನುಗ್ಗುವ ಆತಂಕ ಕಾಡುತ್ತಿದೆ ಎಂದು ಹೇಳಿದರು.

WhatsApp Image 2025 09 27 at 10.53.39 AM
ಭೋರ್ಗರೆದು ಹರಿಯುತ್ತಿರುವ ಮಾಂಜ್ರಾ ಮಾಂಜ್ರಾ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಂಚ ಗ್ಯಾರಂಟಿ ಮೂಲಕ ದೇಶದಲ್ಲಿ ಮಹಿಳಾ ಕ್ರಾಂತಿ : ಸೌಮ್ಯಾ ರೆಡ್ಡಿ ಹೇಳಿಕೆ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ದೇಶದಲ್ಲಿ ಮಹಿಳೆಯರಿಂದ...

ತುಮುಲ್ ಖುರ್ಚಿ ಪ್ರಕರಣ | ಕೊನೆಗೂ ದಲಿತ ಅಧಿಕಾರಿಗೆ ಚೇರ್ ವ್ಯವಸ್ಥೆ

ತುಮಕೂರು ಹಾಲು ಒಕ್ಕೂಟದಲ್ಲಿ ಹಣಕಾಸು ವಿಭಾಗದ ಅಧಿಕಾರಿ ವಿನಯ್ ಎಂಬುವವರಿಗೆ  ಚೇರ್...

ಬೀದರ್‌ | ಭಾರಿ ಮಳೆ : ಒಡೆದ ಐತಿಹಾಸಿಕ ತ್ರಿಪುರಾಂತ ಕೆರೆ

ಜಿಲ್ಲಾದ್ಯಂತ ಎರಡ್ಮೂರು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಬಸವಕಲ್ಯಾಣ ನಗರದಲ್ಲಿರುವ ಐತಿಹಾಸಿಕ ತ್ರಿಪುರಾಂತ...

ವಿಜಯಪುರ | ಭೀಮಾನದಿ ಪ್ರವಾಹ: ಗರ್ಭಿಣಿಯರು ಸೇರಿ 10 ಮಂದಿ ರಕ್ಷಣೆ; 600ಕ್ಕೂ ಹೆಚ್ಚು ಮಂದಿಗೆ ಆಶ್ರಯ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ...

Download Eedina App Android / iOS

X