ಧಾರವಾಡ | ನಾವಿಬ್ಬರು ಇಷ್ಟಪಟ್ಟು ಮದುವೆ ಆಗಿದ್ದೇವೆ; ಲವ್ ಜಿಹಾದ್ ಸುಳ್ಳು ಎಂದ ಮುಕಳೆಪ್ಪ ಪತ್ನಿ

Date:

Advertisements

ಮುಕಳೆಪ್ಪ ಲವ್ ಜಿಹಾದ್ ಎಂದು ನನ್ನ ಪತಿ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿಬರುತ್ತಿದ್ದು, ಅದೆಲ್ಲ ಸುಳ್ಳು ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದೇವೆ ಎಂದು ಖ್ವಾಜಾ ಅಲಿಯಾಸ್ ಮುಕಳೆಪ್ಪ ಪತ್ನಿ ಗಾಯತ್ರಿ ಜಾಲಿಹಾಳ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಅವರು, ನಮ್ಮಿಬ್ಬರ ಮದುವೆ ಆದಮೇಲೂ ನನ್ನ ತಾಯಿ ಬಗಳಷ್ಟು ಸಪೋರ್ಟ್ ಮಾಡಿದ್ದರು.‌ ಆ ಬಗ್ಗೆ ಎಲ್ಲ ದಾಖಲೆಗಳೂ ನನ್ನ ಹತ್ತಿರ ಇದ್ದಾವೆ. ಇದೀಗ ನನ್ನ ತಾಯಿ ಮಾಧ್ಯಮಗಳ ಎದುರಿಗೆ ಹೇಳುತ್ತಿರುವ ಹೇಳಿಕೆಗಳೆಲ್ಲ ಸುಳ್ಳಾಗಿದ್ದು, ಇದೆಲ್ಲ ಯಾರು ನನ್ನ ತಾಯಿಯ ತಲೆಕೆಡಿಸುತ್ತಿದ್ದಾರೊ ಗೊತ್ತಾಗುತ್ತಿಲ್ಲ.

ಗಾಯತ್ರಿ ಹಂಚಿಕೊಂಡ ವಿಡಿಯೋ ಲಿಂಕ್ ಹೀಗಿದೆ.. https://www.instagram.com/reel/DO2vwUaExOa/?igsh=aWgyaHFtaGFvOWw3

ಇನ್ನು ಮುಕಳೆಪ್ಪ ಹಿಂದೂ ಹುಡುಗಿ ಮೈಂಡ್ ವಾಸ್ ಮಾಡಿ‌ ಮದುವೆ ಆಗಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅವೆಲ್ಲ ಸುಳ್ಳಾಗಿವೆ. ನನ್ನ ಮೈಂಡ್ ಯಾರೂ ವಾಸ್ ಮಾಡಿಲ್ಲ. ನಾನೇ ಸ್ವ ಇಚ್ಛೆಯಿಂದ ಅವರ ಬಳಿ ಬಂದಿದ್ದೇನೆ. ಮತ್ತು ನಾವಿಬ್ಬರು ಪ್ರೀತಿಸಿ ಒಪ್ಪಿಗೆಯಿಂದ ರಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ಒಂದು ವೇಳೆ ನನ್ನ ಪತಿಗಾಗಲಿ, ನನ್ನ ಪತಿಯ ಕುಟುಂಬದವರಿಗಾಗಲಿ ಯಾವುದೇ ಅಪಾವಾದಲ್ಲಿ ಕಾನೂನಿನಿಂದ ನನಗೆ ನ್ಯಾಯ ಸಿಗಬೇಕು. ಮತ್ತು ಸುಳ್ಳು ಸುದ್ಧಿಗಳನ್ನು ದಯವಿಟ್ಟು ಯಾರೂ ನಂಬಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

Download Eedina App Android / iOS

X