ಹಾವೇರಿ | ಮಹಿಳೆಯರ ಆರೋಗ್ಯ ಕಾಪಾಡಲು ಆಹಾರ ಮುಖ್ಯ: ಡಾಕ್ಟರ್ ಉಮಾ ಬಳಿಗಾರ

Date:

Advertisements

“ಮಹಿಳೆಯರು ಇಂದಿನ ದಿನದಲ್ಲಿ ಆರೋಗ್ಯ ಕಾಪಾಡಲು ಆಹಾರ ಬಹಳ ಮುಖ್ಯ. ಮನೆಯ ಆಹಾರ, ತಾಜಾ ಆಹಾರ, ಬಹಳ ಆವಶ್ಯಕವಾಗಿದೆ. ಪರಿವಾರದ ಎಲ್ಲರ ಯೋಗ ಕ್ಷೇಮ ಮಹಿಳೆಯದೆ ಆಗಿರುತ್ತದೆ” ಎಂದು ಆಪ್ತ ಸಮಾಲೋಚಕ ತಜ್ಞ ವೈದ್ಯೆ ಡಾಕ್ಟರ್ ಉಮಾ ಬಳಿಗಾರ ಹೇಳಿದರು.

ಹಾವೇರಿ ಪಟ್ಟಣದ ಶ್ರೀ ಬೀರೇಶ್ವರ ಸಮುದಾಯ ಭವನದಲ್ಲಿ ಆರೋಗ್ಯ ಭಾರತಿ ಹಾಗೂ ಕನಕ ಮಹಿಳಾ ಬಳಗ ಸಹಯೋಗದಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ‘ಮಹಿಳೆಯರ ಆರೋಗ್ಯ ಹಾಗೂ ಮನೆ ಮದ್ದಿನ ಮಾಹಿತಿ ಕುರಿತು ಅವರು ಮಾತನಾಡಿದರು.

“ಮಹಿಳೆ ತನ್ನ ಆರೋಗ್ಯವನ್ನು ಗಮನಿಸದೆ, ಬೆಳಗಿನಿಂದ ರಾತ್ರಿಯವರಿಗೆ ಸದಾ ಕ್ರಿಯಾಶೀಲಳಾಗಿ ಎಲ್ಲರ ಆರೋಗ್ಯದ ಬಗ್ಗೆ ಗಮನವಿಟ್ಟು ದಿನ ಕಳೆಯುವುದು ಸರ್ವೇಸಾಮಾನ್ಯವಾಗಿದೆ. ತನ್ನ ಶರೀರದ ಸಹಜ ಕ್ರಿಯೆಗಳನ್ನು ಗಮನಿಸದೇ, ವಿಶ್ರಾಂತಿಯನ್ನು ಪಡೆಯದೆ ಕೆಲಸ ಮಾಡುತ್ತಾರೆ. ಇದರಿಂದ ಅನಾರೋಗ್ಯ, ಕಾಯಿಲೆಗಳಿಗೆ ತುತ್ತಾಗುತ್ತಾರೆ” ಎಂದರು.

“ಮಹಿಳೆಯರು ನಿತ್ಯ ಸ್ವಚ್ಛತೆ, ಆಹಾರ, ಯೋಗ, ಧ್ಯಾನ,ರೂಡಿಸಿಕೊಂಡರೆ ಆರೋಗ್ಯ ಸುಧಾರಿಸುತ್ತದೆ. ಅದಕ್ಕಾಗಿ ಪ್ರತಿನಿತ್ಯ ಆರೋಗ್ಯಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲೀಡಬೇಕು” ಎಂದು ಮಹಿಳೆಯರಿಗೆ ಸಲಹೆ ನೀಡಿದರು.

ಮನೆ ಮದ್ದಿನ ಕುರಿತು ಆರೋಗ್ಯ ಭಾರತೀಯ ನಾಗೇಶ್ ಅವರು, “ನಮ್ಮ ಮನೆ, ರಸ್ತೆ ಬದಿಯಲ್ಲಿ ಇರುವಂತ ಅನೇಕ ಔಷಧಿ ಸಸ್ಯಗಳ ಕುರಿತು, ಮನೆಯ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಭಾರತೀಯ ಗೌರವಾಧ್ಯಕ್ಷರು ಪ್ರಭಾಕರ ಮಂಗಳೂರು, ಆರೋಗ್ಯ ಭಾರತಿಯ ಮಹಿಳಾ ಪ್ರಮುಖರಾದ ಚಂಪಾ ಹುಣಸೆ ಮರದ, ಕನಕ ಮಹಿಳಾ ಬಳಗದ ಅಧ್ಯಕ್ಷರು ಕವಿತಾ ಮುದುಕಣ್ಣನವರ ಸ್ವಾಗತಿಸಿದರು. ಕನಕ ಮಹಿಳಾ ಬಳಗದ ಕೋಶಾಧ್ಯಕ್ಷರು ರೇಣುಕಾ ಅಂಗಡಿ ಕಾರ್ಯಕ್ರಮದ ಪ್ರಾರ್ಥನೆ ಹಾಗೂ ನಿರೂಪಣೆಯನ್ನು ಕನಕ ಮಹಿಳಾ ಬಳಗದ ಕಾರ್ಯದರ್ಶಿಯಾದ ಶ್ರೀಮತಿ ಶಿಲ್ಪಾ ಚುರ್ಚಿಹಾಳ ನಡೆಸಿಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X