ಹಾವೇರಿ | ಪ್ರವಾದಿ ಮುಹಮ್ಮದ್; ನ್ಯಾಯ, ಕರುಣೆಯ ಸಂದೇಶ: ಜೇಬ್ರಾನ್ ಖಾನ್

Date:

Advertisements

“ಪ್ರವಾದಿ ಮುಹಮ್ಮದ್ (ಸ) ಅವರ ಶಾಶ್ವತ ಬೋಧನೆಗಳನ್ನು ಸಮಾಜದಲ್ಲಿ ನ್ಯಾಯ ಮತ್ತು ಕರುಣೆ ಆಧಾರಿತ ಬದುಕು ಕಟ್ಟಲು ಹಂಚಿಕೊಳ್ಳುವ ಕಾರ್ಯವನ್ನು ಮುಂದುವರಿಸುತ್ತಿದೆ” ಸಾಲಿಡಾರಿಟಿ ಯುವ ಚಳವಳ ಜೇಬ್ರಾನ್ ಖಾನ್ ಹೇಳಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರ್ ಪಟ್ಟಣದಲ್ಲಿ ಪಿಎಸ್ಐ ಶ್ರೀ ಗಡಪ್ಪ ಅವರನ್ನು ಭೇಟಿಯಾಗಿ ಅಕ್ಟೋಬರ್ 3 ರಂದು ನಡೆಯಲಿರುವ ಡಿಜಿಟಲ್ ಫ್ರೀಡಂ ಕ್ಯಾಂಪೇನ್‌ಗೆ ಅನುಮತಿ ನೀಡುವಂತೆ ಮನವಿ ಮಾಡಿದರು.

ಸಂಭಾಷಣೆಯಲ್ಲಿ “ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶ ಸ್ವಭಾವ, ಸಮಾನತೆ, ನ್ಯಾಯ ಮತ್ತು ಕರುಣೆಯ ಸಂದೇಶವನ್ನು ಒತ್ತಿ ಹೇಳಲಾಯಿತು. ಇವುಗಳೇ ಶಾಂತಿ ಮತ್ತು ಸೌಹಾರ್ದತೆಗೆ ಬುನಾದಿಯಾಗಿವೆ” ಎಂಬುದನ್ನು ವಿವರಿಸಲಾಯಿತು.

“ಪ್ರವಾದಿ ಮುಹಮ್ಮದ್ (ಸ) ಅವರು ಕೇವಲ ಪೂಜೆ ಮತ್ತು ಭಕ್ತಿಯನ್ನು ಮಾತ್ರವಲ್ಲದೆ, ನ್ಯಾಯ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಜೀವನದಲ್ಲಿ ಪಾಲಿಸಬೇಕೆಂದು ಒತ್ತಿಹೇಳಿದ್ದರು. ಯಾವುದೇ ಭೇದಾಭೇದವಿಲ್ಲದೆ ನ್ಯಾಯ, ದುರ್ಬಲರತ್ತ ಕರುಣೆ ಮತ್ತು ಸತ್ಯದ ಬದ್ಧತೆಯ ಮೇಲೆ ಅವರ ಕರೆ ಇಂದಿನ ಸಮಾಜದ ಸವಾಲುಗಳನ್ನು ಎದುರಿಸಲು ಸೂಕ್ತವಾಗಿದೆ” ಎಂದು ಹೇಳಿದರು.

“ರಾಣೆಬೆನ್ನೂರಿನಲ್ಲಿ ಅಕ್ಟೋಬರ್ 3 ರಂದು ನಡೆಯಲಿರುವ ಡಿಜಿಟಲ್ ಫ್ರೀಡಂ ಕ್ಯಾಂಪೇನ್‌ಗೆ ಅನುಮತಿ ಯನ್ನು ಸಹ ವಿನಂತಿಸಿದರು. ಇದಲ್ಲದೆ, ಅವರು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಬೋಧನೆಗಳನ್ನು ಒಳಗೊಂಡ ಕೆಲವು ಪುಸ್ತಕಗಳನ್ನು ಕೊಂಡೊಯ್ದು ಹಂಚಿಕೊಂಡರು. ಇವುಗಳು ಇಂದಿನ ಜಗತ್ತಿನಲ್ಲಿ ನ್ಯಾಯ, ಕರುಣೆ ಮತ್ತು ಮಾನವೀಯ ಮೌಲ್ಯಗಳ ದಾರಿದೀಪವೆಂದು ಒತ್ತಿ ಹೇಳಿದರು.

ಜೇಬ್ರಾನ್ ಖಾನ್ ಅವರ ನೇತೃತ್ವದ ಸಾಲಿಡಾರಿಟಿ ಯುವ ಚಳವಳಿ, ರಾಣೆಬೆನ್ನೂರು ಘಟಕ, ತಮ್ಮ ಅಮೂಲ್ಯವಾದ ಸಮಯ ನೀಡಿ ಸಂಭಾಷಣೆಯಲ್ಲಿ ಭಾಗವಹಿಸಿದ ಪಿಎಸ್ಐ ಶ್ರೀ ಗಡಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿತು. ಈ ಭೇಟಿಯು ಸಮುದಾಯಗಳನ್ನು ಹತ್ತಿರಕ್ಕೆ ತರುವಲ್ಲಿ, ಮಾನವೀಯ ಮೌಲ್ಯಗಳನ್ನು ಉಳಿಸುವಲ್ಲಿ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶದ ಆಧಾರದ ಮೇಲೆ ಸಮೂಹಿಕ ಹೊಣೆಗಾರಿಕೆಯ ದೃಷ್ಟಿಕೋಣವನ್ನು ಉತ್ತೇಜಿಸುವಲ್ಲಿ ಚಳವಳಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X