“ಗಾಂಧಿಜೀಯವರನ್ನು ಅಪಮೌಲ್ಯ ಮಾಡುತ್ತಿರುವ ಈ ಕಾಲದಲ್ಲಿ ಗಾಂಧಿಯವರ ಮೌಲ್ಯಗಳನ್ನು, ವಿಚಾರಧಾರೆಗಳನ್ನು ಮತ್ತೆ ಮತ್ತೆ ಜನರಡೆಗೆ ಒಯುತ್ತೇವೆ” ಎಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಹೇಳಿದರು.
ಹಾವೇರಿ ಪಟ್ಟಣದ ಎಸ್ಎಫ್ಐ, ಡಿವೈಎಫ್ಐ, ಬಾಲ ಸಂಘಂ, ಸಾಹಿತ್ಯ ಕಲಾವಿದರು ಬಳಗ, ಪ್ರಗತಿಪರ ಸಂಘಟನೆಗಳ ವತಿಯಿಂದ ಗಾಂಧಿ ವೃತ್ತದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧಿಜೀ ಜಯಂತಿಯನ್ನು ಅವರ ಪ್ರತಿಮೆಗೆ ಪುಷ್ಪ ನಮನ ಗೌರವ ಸಲ್ಲಿಸಿ ಮಾತನಾಡಿದರು.
“ವಿದ್ಯಾರ್ಥಿ- ಯುವಜನರಿಗೆ, ನಾಡಿನ ಜನರಿಗೆ ಗಾಂಧಿಜೀಯವರ ವಿಚಾರಗಳನ್ನು ತಿಳಿಸಬೇಕಾಗಿದೆ. ಆ ಕೆಲಸವನ್ನು ಕಾರ್ಯಕ್ರಮ ಆಯೋಜನೆ ಸಂಘಟನೆಗಳು ಮಾಡುತ್ತಿವೆ. ಜಯಂತಿಯನ್ನು ಕೇವಲ ಆಚರಣೆಯಾಗಿ ಮಾಡುವುದಲ್ಲದೆ ಒಂದು ಮೌಲ್ಯ, ಶಾಂತಿ ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಗುತ್ತದೆ” ಎಂದರು.
ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ್ ಮಾತನಾಡಿ, “ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಪಣಕಿಟ್ಟು ಹೋರಾಡಿದ ಮಹಾನ್ ತ್ಯಾಗಿ ಗಾಂಧಿ, ಅವರ ಅಹಿಂಸೆ ತತ್ವಗಳು ಬೇಕಾಗಿದೆ. ಸತ್ಯದ ದಾರಿ ಬೇಕಾಗಿದೆ. ನಮ್ಮಲ್ಲಿ ಯಾವುದೇ ಜಾತಿ, ಧರ್ಮ, ಮತ ಬೇದವಿಲ್ಲದೆ ನಾವೇಲ್ಲ ಒಂದೇ ಎಂಬ ತತ್ವದಡಿ ಬದುಕುಬೇಕಾಗಿದೆ. ಈ ನಿಟ್ಟಿನಲ್ಲಿ ಗಾಂಧಿ ಎಂದಿಗೂ ಅಜರಾಮರವಾಗಿರುತ್ತಾರೆ” ಎಂದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಗಾಂಧಿಯವರ ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಸಮಾಜಕ್ಕೆ ಹಲವು ಮೌಲ್ಯಗಳನ್ನು ನೀಡಿದ್ದಾರೆ. ಮಾನವೀಯತೆಯ ಮೌಲ್ಯಗಳೆಡೆಗೆ ಸಾಗಬೇಕು” ಎಂದು ಕರೆ ನೀಡಿದರು.
“ಯುಗಪುರುಷ ಗಾಂಧಿಯವರ ವಿಚಾರಧಾರೆಗೆ ವಿರುದ್ಧವಾಗಿರುವ ವಿಭಿನ್ನ ಶಕ್ತಿಗಳು ಬಹಳಷ್ಟು ವಿಜೃಂಭಿಸುತ್ತಿರುವ ಕಾಲದ ಮಧ್ಯೆಯು ನಾವು ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇವೆ. ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಮಾತ್ರ ಗಾಂಧಿ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುವ ಸರ್ಕಾರ ಅವರನ್ನು ಗುಂಡಿಟ್ಟು ಕೊಂದ ದಿನವನ್ನು ಯಾಕೆ? ಮರೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಲ ಸಂಘಂನ ಧನುಷ್ ದೊಡ್ಡಮನಿ ಗಾಂಧಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಸ್ವಾಗತಸಿ ನಿರೂಪಿಸಿದರು, ಶ್ರೀಶಕ್ತಿ ತೆರದ ತಂಗುದಾಣ ಮುಖ್ಯಸ್ಥ ಪುಟ್ಟಪ್ಪ ಹರವಿ ವಂದಿಸಿದರು.
ಈ ಸಂದರ್ಭದಲ್ಲಿ ವಕೀಲರು ನಾರಾಯಣ ಕಾಳೆ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಡಿಎಸ್ಎಸ್ ಮುಖಂಡರು ಉಡಚಪ್ಪ ಮಾಳಗಿ, ಸಾಹಿತಿ ರಾಜೇಂದ್ರ ಹೆಗಡೆ, ಎಸ್ಎಫ್ಐ ಮುಖಂಡರು ಅರುಣ್ ನಾಗವತ್, ಚೈತ್ರ ಕೊರವರ, ಬಾಲ ಸಂಘಂನ ತೇಜಸ್ ದೊಡ್ಡಮನಿ, ಪ್ರಜ್ವಲ್, ಮೈನುದೀನ್ ಇಲಿಬುಡ್ಡಿ, ಆಧ್ಯಾ ಎನ್ ಆರ್, ಆರ್ಯ್ಯ ಎನ್ ಆರ್, ಪ್ರೇಮ್, ಅಭಿ ಬಂಡಿವಡ್ಡರ, ಮಣಿಕಂಠ ಪಾಟೀಲ, ಸಂದೀಪ್ ಓಲೆಕಾರ, ಗೌಸಿಯಾ ಅಗಡಿ, ತಸ್ಮೀಯಾ ಅಗಡಿ ಸೇರದಂತೆ ಇತರರು ಪಾಲ್ಗೊಂಡಿದ್ದರು.