ಮಂಗಳೂರು | ಬಹರೈನ್‌ನಲ್ಲಿ ಏಷ್ಯನ್ ಯೂತ್ ಗೇಮ್ಸ್: ಹಿರಾ ಕಾಲೇಜಿನ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆ

Date:

Advertisements

ಬಹರೈನ್‌ನಲ್ಲಿ ನಡೆಯಲಿರುವ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಪೆಂಕಾಕ್ ಸಿಲಾತ್ ಕ್ರೀಡೆಯಲ್ಲಿನ ಆಯ್ಕೆಗಾಗಿ ನಡೆದ ಟ್ರಯಲ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆಯಾಗಿದ್ದಾರೆ.

ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಆಯಿಶಾ ಹೈಫಾ ಏಷ್ಯನ್ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಪ್ರತಿಭಾನ್ವಿತೆ.

ಸೆ.30ರಂದು ಜಮ್ಮು- ಕಾಶ್ಮೀರದ ಶ್ರೀನಗರದ ಎಸ್.ಕೆ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಆಯ್ಕೆ ಟ್ರಯಲ್‌ನಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಬಹರೈನ್‌ನಲ್ಲಿ ನಡೆಯಲಿರುವ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

1002554582

ಮಂಜನಾಡಿ ಸಮೀಪದ ಕಿನ್ಯ ಗ್ರಾಮದ ಮೊಯ್ದಿನ್ ಹನೀಫ್ ಹಾಗೂ ಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಷಾ ಹೈಫಾ, ಈ ಹಿಂದೆ ಪೆಂಕಾಕ್ ಸಿಲಾತ್ ಯೂತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು.

1002554694

ಇವರಿಗೆ ಟೀಂ ಎಂ. ಟೈಗರ್ಸ್‌ನ ಮಾಸ್ಟರ್ ಆಶಿಫ್, ಮಾಸ್ಟರ್ ಅಯಾಝ್ ಬರುವಾ ತರಬೇತಿ ನೀಡುತ್ತಾ ಬಂದಿದ್ದಾರೆ.

ಪೆಂಕಾಕ್ ಸಿಲಾತ್ ಕ್ರೀಡೆ ಅಂದರೆ ಏನು?

ಪೆಂಕಾಕ್ ಸಿಲಾತ್ (Pencak Silat) ಎಂದರೆ ಇಂಡೋನೇಷಿಯಾದ ಮೂಲದ ಕರಾಟೆ ಶೈಲಿಗಳ ಸಮೂಹವಾಗಿದೆ. ಇದು ದಕ್ಷಿಣ ಪೂರ್ವ ಏಷ್ಯಾದ ಮಲಯ್ ಆರ್ಚಿಪೆಲಾಗೋದಿಂದ ಬಂದಿದೆ. ಈ ಕ್ರೀಡೆ ಸಂಪೂರ್ಣ ದೇಹದ ಹೋರಾಟದ ರೂಪವಾಗಿದ್ದು, ಹೊಡೆತಗಳು, ಹಿಡಿತಗಳು, ಎಸೆತಗಳು ಮತ್ತು ಆಯುಧಗಳನ್ನು ಕೂಡ ಬಳಸಲಾಗುತ್ತದೆ. ಪ್ರತಿ ಭಾಗವನ್ನೂ ದಾಳಿ ಮಾಡಲು ಬಳಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳನ್ನು ಉಪಯೋಗಿಸಲಾಗುತ್ತದೆ.

ಇದು ಕೇವಲ ದೈಹಿಕ ರಕ್ಷಣೆಗಾಗಿಯೇ ಮಾತ್ರವಲ್ಲದೆ, ಕಲೆ, ಸ್ವ-ರಕ್ಷಣೆಯಾಗಿಯೂ ಬಳಸಬಹುದು‌.

ಯುನೆಸ್ಕೋ ಪೆಂಕಾಕ್ ಸಿಲಾತ್ ಕ್ರೀಡೆಯನ್ನು 2019ರಲ್ಲಿ ‘ಮಾನವತೆಯ ಅಗೋಚರ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ ಸೇರಿಸಿದೆ. ಕ್ರೀಡೆಯಾಗಿ, ಇದು SEA ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದು ಇಂಡೋನೇಷಿಯಾ, ಮಲೇಷಿಯಾ, ಬ್ರುನೈ, ಸಿಂಗಾಪುರ್ ಮತ್ತು ಇತರ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಸಾಮಾನ್ಯವಾಗಿದೆ. ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ‌. ಈ ಕ್ರೀಡೆಯನ್ನು ಇಂಡೋನೇಶಿಯಾದ ಶಾಲೆಗಳಲ್ಲಿ ಸ್ವ-ರಕ್ಷಣೆ ಕಾರ್ಯಕ್ರಮವಾಗಿ ತರಬೇತಿ ನೀಡಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X