ಸಾಗರ | ರೈತ ವಿರೋಧಿ ಆದೇಶ ಹಿಂಪಡೆಯಿರಿ ; ಜನ, ಜಾನುವಾರುಗಳ ಸಹಿತ ಪ್ರತಿಭಟನೆ

Date:

Advertisements

ಸಾಗರ, ಕಾಡಿಗೆ ನಾಡಿನ ಜಾನುವಾರುಗಳಿಗೆ ನಿರ್ಬಂದ ಹೇರಿ ಆದೇಶ ಹೊರಡಿಸಿರುವ ಕರ್ನಾಟಕ ರಾಜ್ಯ ಅರಣ್ಯ ಸಚಿವರ ರೈತ ವಿರೋಧಿ ಆದೇಶದ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ ಜನ ಜಾನುವಾರುಗಳ ಸಹಿತ ಪ್ರತಿಭಟನೆ ನಡೆಸಿದರು.

ಅವರು ಸಾಗರ ಪಟ್ಟಣಕ್ಕೆ ಸಮೀಪದ ಕೆಳದಿ ರಸ್ತೆಯಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳು ಮತ್ತು ಎಮ್ಮೆ-ಕೋಣಗಳ ಸಹಿತ ಜಮಾಯಿಸಿ ಜಾನುವಾರುಗಳಿಗೆ ಹಸಿರು ಹುಲ್ಲೆ ಹಾಗೂ ಬತ್ತದ ಬಿಳಿ ಹುಲ್ಲು ತಿನ್ನಲು ಹಾಕಿ ಅರಣ್ಯ ಸಚಿವರ ರೈತ ವಿರೋಧಿ ಆದೇಶವನ್ನು ಖಂಡಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಅರಣ್ಯ ಸಚಿವರಿಂದ ಕಾಡು ಮತ್ತು ನಾಡನ್ನು ಬೇರ್ಪಡಿಸುವ ಹುನ್ನಾರ ನಡೆಯುತ್ತಿದೆ.ರಾಜಮಹಾರಾಜರುಗಳ ಕಾಲದಿಂದ ಜಾನುವಾರುಗಳಿಗೆ ಕಾಡು-ಮೇಡು ಆಹಾರಕ್ಕೆ ಆದಾರವಾಗಿದೆ.ಕಾಡಿನ ಮೇವು ತಿಂದು ತಿರುಗಾಟದಿಂದ ಸಂಜೆ ಮನೆಗೆ ಆಗಮಿಸುವ ಜಾನುವಾರುಗಳು ಮತ್ತು ಕುರಿಗಳ ಹಾಲು ಹಾಗೂ ಸಗಣಿ ಅತ್ಯಂತ ಔಷಧ ಪೌಷ್ಠಿಕವಾಗಿರುತ್ತದೆ ಎಂಬ ಪ್ರತೀತಿಯಿದೆ ಎಂದರು.

ಕಾಡಿಗೆ ಜಾನುವಾರುಗಳು ಹೋಗುವುದರಿಂದ ಕಾಡಿನ ಅಂಚಿನಲ್ಲಿರುವ ಹುಲುಸಾಗಿ ಬೆಳೆದಿರುವ ಹಸಿರು ಹುಲ್ಲು ತಿನ್ನುವ ಮೂಲಕ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವ(ಕಾಡ್ಗಿಚ್ಚಿನ) ಅಪಾಯ ತಪ್ಪುತ್ತದೆ. ಹೈನುಗಾರಿಕೆಗೆ ಜಾನುವಾರುಗಳ ಕಾಡಿನ ಸಂಪರ್ಕಕ್ಕೆ ಯಾವುದೇ ನಿರ್ಬಂದ ಹೇರಬಾರದು ಎಂದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾಗರದ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್ ಅವರನ್ನು ಉದ್ದೇಶಿಸಿ ಮನವಿ ಮಾಡಿದ ರೈತಮುಖಂಡರು, ಮಲೆನಾಡಿನ ಜಾನುವಾರುಗಳಿಗೆ ಕಾಡು-ಮೇಡುಗಳಲ್ಲಿ ಮೇಯಲು ಯಾವುದೇ ನಿರ್ಬಂದ ಹೇರದೆ ಮುಕ್ತ ಅವಕಾಶ ಕಲ್ಪಿಸಬೇಕು.ಅರಣ್ಯ ಇಲಾಖೆ ರೈತರ ಪರವಾಗಿ ಸ್ಪಂದಿಸಬೇಕು.ಆನಂದಪುರಂ ಹೋಬಳಿ ಮಲ್ಲಂದೂರು ರೈತರುಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಅಡಚಣೆಗಳಿಗೆ ಕಡಿವಾಣ ಹಾಕಬೇಕು.ರೈತರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಾನುವಾರುಗಳ ಮುಖಕ್ಕೆ ಅರಣ್ಯ ಸಚಿವರ ಮುಖವಾಡ ಅಳವಡಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

Download Eedina App Android / iOS

X