ಉಡುಪಿ | ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನಿಖಿಲ್ ಕುಮಾರಸ್ವಾಮಿ ನೈತಿಕ ಬೆಂಬಲ ಸೂಚಿಸಲಿ

Date:

Advertisements

ನಿಖಿಲ್ ಕುಮಾರ ಸ್ವಾಮಿಯವರೇ ನೀವು ನಿಜವಾಗಿಯೂ ನೈತಿಕ ಬೆಂಬಲ ಸೂಚಿಸ ಬೇಕಾಗಿರುವುದು ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳಾ ಸಂತ್ರಸ್ತ್ರರಿಗೆ, ಯಾಕಂದ್ರೆ ಅಲ್ಲಿ ಅವರನ್ನು ಕಾಪಾಡಲು ಅಣ್ಣಪ್ಪ ಸ್ವಾಮಿಯೂ ಇಲ್ಲಾ ಹಾಗೇ ಮಂಜುನಾಥ ಸ್ವಾಮಿಯೂ ಇಲ್ಲಾ, ಇಲ್ಲಿ ನೀವು ಹೇಳಿದ ಧರ್ಮಾಧಿಕಾರಿಯವರನ್ನು ಕಾಪಾಡಲು ಪಕ್ಕದಲ್ಲೇ ಅಣ್ಣಪ್ಪ ಸ್ವಾಮಿಯೂ ಇದ್ದಾನೆ ಮತ್ತೆ ಮಂಜುನಾಥ ಸ್ವಾಮಿಯೂ ಇದ್ದಾನೆ. ಹಾಗಾಗಿ ಸದಾ ಅವರನ್ನು ಕಾಪಾಡುತ್ತಾರೆ ಎಂದು ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

ನಿನ್ನೆ ದಿನ ಧರ್ಮಸ್ಥಳದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡ ಧರ್ಮಸ್ಥಳ ಯಾತ್ರೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸತ್ಯ ಯಾತ್ರೆ ಹೊಳೆನರಸೀಪುರಕ್ಕೆ ಯಾಕೆ ಹೋಗಿಲ್ಲಾ ? ಅನ್ಯಾಯವಾಗಿ ಬಡವರ, ದುರ್ಬಲರ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಮ್ಮ ಕಾಲ ಬುಡದಲ್ಲೇ ಆಯಿತಲ್ಲಾ ಅದು ತಮಗೆ ಕಾಣಿಸಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಆ ಅಮಾಯಕ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಲು, ಸಾಂತ್ವಾನ ಹೇಳಲು ತಾವು ಯಾವ ಯಾತ್ರೆ ಕೈಗೊಂಡಿರಿ ? ಹಾಗೆಯೇ ಧರ್ಮಾಧಿಕಾರಿಗಳು ನೊಂದಿದ್ದಾರೆ ಅವರಿಗೆ ನೖತಿಕ ಬೆಂಬಲ ಸೂಚಿಸಲು ಬಂದಿದ್ದೇವೆ ಎಂದಿರಲ್ಲಾ.
ಅಲ್ಲಿ ನಿಮ್ಮ ದೊಡ್ಡಪ್ಪ ಮಗನಿಂದಾಗಿ ತುಂಬಾ ನೊಂದಿದ್ದಾರೆ, ನೋವಿನ ಕೊರಗಿನಲ್ಲೇ ಕಾಲ ಕಳೆಯುತ್ತಿದ್ದಾರೆ ಅವರಿಗೇಕೆ ನೖತಿಕ ಬೆಂಬಲ ತುಂಬಲು ತಮ್ಮ ಸತ್ಯ ಯಾತ್ರೆ ಹೋಗಿಲ್ಲಾ ? ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X