ಶಿವಮೊಗ್ಗ ನಗರದ ಬಿ, ಹೆಚ್, ರಸ್ತೆಯಲ್ಲಿ ಇರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಾಗೂ ರಾಜ ಬಿದಿ ಉತ್ಸವ ನೆನ್ನೆ ದಿವಸ ಗುರುವಾರ ವಿಜಯದಶಮಿ ಸಂಜೆ 5:00ಗೆ ಶ್ರೀ ಮೈಲಾರೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡೆಯಲಾಯಿತು.
ಶುಕ್ರವಾರ ಏಕಾದಶಿ ಬೆಳಿಗ್ಗೆ 5:00 ಗಂಟೆಯಿಂದ ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ಶ್ರೀ ಮೈಲಾರೇಶ್ವರ ದೇವರ ರಾಜಬೀದಿ ಉತ್ಸವ ರಾಜಾ ಬೀದಿ ಉತ್ಸವವು ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದಿಂದ ಹೊರಟು ಬಿ, ಹೆಚ್, ರಸ್ತೆ, ಕೋಟೆ ಪೊಲೀಸ್ ಠಾಣೆ ರಸ್ತೆ, ಕೋಟೆ ರಸ್ತೆ , ತುಂಗಾ ನದಿಯಲ್ಲಿ ಗಂಗೆ ಪೂಜೆ ನಂತರ ಎಸ್, ಪಿ, ಎಂ, ರಸ್ತೆ, ಗಾಂಧಿ ಬಜಾರ್, ಮೂಲಕ ಶಿವಪ್ಪ ನಾಯಕ ಸರ್ಕಲ್, ನಂತರ ಬಿ ,ಹೆಚ್, ರಸ್ತೆ ಮುಖಾಂತರ ದೇವಸ್ಥಾನಕ್ಕೆ ಬರುವುದು ನಂತರ ಶ್ರೀ ದೇವರಿಗೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಮೈಲಾರೇಶ್ವರ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಹೊನ್ನಪ್ಪ, ರಘು ಮತ್ತು ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಏಳುಕೋಟಿ ಶ್ರೀ ಮೈಲಾರೇಶ್ವರ ಗೊರವರ ಅಧ್ಯಕ್ಷರಾದ ಗೊಲ್ಲ ರಾಜಣ್ಣ, ಪ್ರಧಾನ ಕಾರ್ಯದರ್ಶಿಯಾದ ಎನ್ ,ಮಾಲತೇಶ್, ಹರೀಶ್, ಶೇಖರ್, ನಿಂಗಪ್ಪ, ಶಿವಣ್ಣ, ಕೃಷ್ಣಮೂರ್ತಿ, ಹನುಮಂತಪ್ಪ, ಚಂದ್ರು, ಸಂಗಮೇಶ್, ಸಂತೋಷ್, ಇನ್ನು ಮುಂತಾದವರು ಭಾಗವಹಿಸಿದ್ದರು