ಶಿವಮೊಗ್ಗ | ಮೃತ ಮಂಜುನಾಥ್ ಮನೆಗೆ ಯು ಟಿ ಖಾದರ್ ಭೇಟಿ ಸಾಂತ್ವನ

Date:

Advertisements

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮಂಜುನಾಥ್ ರಾವ್ ಮೃತಪಟ್ಟಿದ್ದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಂದ ಸಭಾಧ್ಯಕ್ಷ ಯು.ಟಿ.ಖಾದ‌ರ್ ಎದುರು ಕಣ್ಣೀರಾಕಿದ್ದಾರೆ.ಮಂಜುನಾಥ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಖಾದರ್ ಸಾಂತ್ವಾನ ಹೇಳಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದು, ಮಂಜುನಾಥ್ ಪತ್ನಿ ಪಲ್ಲವಿಗೆ ಧೈರ್ಯ ಹೇಳಿದ್ದಾರೆ. ಸ್ಪೀಕರ್ ಗೆ ಸಾಥ್ ನೀಡಿದ ಶಾಸಕ ಚನ್ನಬಸಪ್ಪ, ಎಂಎಲ್ಸಿ ಬಲ್ಕಿಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾ‌ರ್, ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸಾತ್ ನೀಡಿದ್ದರು.

ಯುಟಿ ಖಾದರ್ ಮಂದೆ ಮೃತ ಮಂಜುನಾಥ್ ಅವರ ತಾಯಿ ಸುಮತಿ ಕಣ್ಣೀರು ಹಾಕಿದ್ದಾರೆ.ಕಾಶ್ಮೀರಕ್ಕೆ ಪ್ರವಾಸ ಬೇಡ ಎಂದಿದ್ದೆ. ಮಗ ಈಗ ಬೆಂಗಳೂರು ಆದಂತೆ ಕಾಶ್ಮೀರವಾಗಿದೆ. ಮನೆಯ ಸುತ್ತಮುತ್ತಲಿನವರು ಹೋಗಿ ಬಂದಿದ್ದಾರೆ. ನಾನು ಹೋಗಿ ಬರುವೆ ಎಂದು ಹೇಳಿದ್ದ.

ನಾವು ಮಲೆನಾಡಿನವರು ಸಾವಿರ ಕಿಲೋ ಮೀಟ‌ರ್ ವರೆಗೂ ಹೋಗಿ ನನ್ನ ಮಗ ಈ ರೀತಿ ಸಾಯುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ. ನಮಗೆ ದೇವರು ಕೈಹಿಡಿಯಲಿಲ್ಲ. ಇದ್ದ ಬದ್ದ ದೇವರಿಗೆ ಪೂಜೆ ಮಾಡಿದ್ದೇವೆ. ಆದರೆ ದೇವರು ಕೈ ಹಿಡಿಯಲಿಲ್ಲ. ಅವರು ಸೇಫ್ ಆಗಿ ಬರಲಿ ಎಂದು ಬಯಸಿದ್ವಿ. ಆದರೆ ದೇವರು ನನ್ನ ಮಗನ್ನು ಉಳಿಸಲಿಲ್ಲ ಎಂದ ತಾಯಿ ಸುಮತಿ ಕಣ್ಣೀರು ಹಾಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X