ತುಮುಲ್ ಖುರ್ಚಿ ಪ್ರಕರಣ | ಕೊನೆಗೂ ದಲಿತ ಅಧಿಕಾರಿಗೆ ಚೇರ್ ವ್ಯವಸ್ಥೆ

Date:

Advertisements

ತುಮಕೂರು ಹಾಲು ಒಕ್ಕೂಟದಲ್ಲಿ ಹಣಕಾಸು ವಿಭಾಗದ ಅಧಿಕಾರಿ ವಿನಯ್ ಎಂಬುವವರಿಗೆ  ಚೇರ್ ನೀಡಿಲ್ಲ ಎಂದು ಚೀಲದ ಮೇಲೆ ಕುಳಿತು ಕೆಲಸ ಮಾಡುವುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ವಿನಯ್ ಅವರಿಗೆ ಸೂಕ್ತ ಚೇರು, ಟೆಬಲ್, ಕ್ಯಾಬಿನ್ ವ್ಯವಸ್ಥೆ ಮಾಡಿಕೊಡಲಾಗಿದೆ.

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮುಂದೆ ನಿಂತು ವಿನಯ್ ಅವರಿಗೆ ಸುಸಜ್ಜಿತ ಚೇಂಬರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿನಯ್ ಪರಿಸ್ಥಿತಿಯನ್ನರಿತ ತುಮುಲ್ ಎಂಡಿ ಇವತ್ತು ತಾನೇ ವಿನಯ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನರಿತು ವಿನಯ್ ಗೆ ಚೆನ್ನಾಗಿರುವ ಚೇಂಬರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೇ ಬೇರೆ ಏನಾದರು ಸಮಸ್ಯೆ ಇದ್ಯಾ ಎಂದು ವಿಚಾರಿಸಿಕೊಂಡಿದ್ದಾರೆ.   ಇದೊಂದು ಸಣ್ಣ ವಿಚಾರ, ಕೂತು ಬಗೆಹರಿಸಿಕೊಳ್ಳಬಹುದಿತ್ತು,  ನಡೆದೋಗಿದೆ‌ ಇನ್ನು ಮುಂದೆ  ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಜೊತೆಗೆ ವಿನಯ್ ಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾದ ಮಂಜುನಾಥ್ ಎಂಬ ಅಧಿಕಾರಿ ವಿರುದ್ಧ ಆಡಳಿತ ಮಂಡಳಿ ಗಮನಕ್ಕೆ ತಂದು  ಕ್ರಮ ಕೈಗೊಳ್ಳಲಾಗುವುದು ಎಂದು ತುಮುಲ್ ಎಂಡಿ ಶ್ರೀನಿವಾಸನ್ ಈದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದರು.

1002115385

 ಈಗಾಗಲೆ ಎಂಡಿಯವರು ನನ್ನನ್ನ ಕರೆಸಿ ಮಾತನಾಡಿದ್ದಾರೆ. ನಡೆದಿದ್ದೆಲ್ಲಾ ನಮ್ಮ ಎಂಡಿ ಆವರ ಬಳಿ ಹೇಳಿದ್ದೇನೆ, ಈಗ ತಾತ್ಕಾಲಿಕವಾಗಿ ಚೇಂಬರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಾಳೆ ಸಂಪೂರ್ಣವಾಗಿ ದೊಡ್ಡ ಟೇಬಲ್ ಹಾಗೂ,‌ ಕುರ್ಚಿಗಳನ್ನು ಕೊಡುತ್ತಾರೆ ಎಂದು ವಿನಯ್ ಹೇಳಿದ್ದಾರೆ

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಂಚ ಗ್ಯಾರಂಟಿ ಮೂಲಕ ದೇಶದಲ್ಲಿ ಮಹಿಳಾ ಕ್ರಾಂತಿ : ಸೌಮ್ಯಾ ರೆಡ್ಡಿ ಹೇಳಿಕೆ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ದೇಶದಲ್ಲಿ ಮಹಿಳೆಯರಿಂದ...

ಬೀದರ್‌ | ಭಾರಿ ಮಳೆ : ಒಡೆದ ಐತಿಹಾಸಿಕ ತ್ರಿಪುರಾಂತ ಕೆರೆ

ಜಿಲ್ಲಾದ್ಯಂತ ಎರಡ್ಮೂರು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಬಸವಕಲ್ಯಾಣ ನಗರದಲ್ಲಿರುವ ಐತಿಹಾಸಿಕ ತ್ರಿಪುರಾಂತ...

ಬೆಂಗಳೂರಿಗೆ ಇಬ್ಬರು ಪೊಲೀಸ್ ಕಮಿಷನರ್ ನೇಮಕಕ್ಕೆ ಚಿಂತನೆ: ಸಚಿವ ಜಿ ಪರಮೇಶ್ವರ

ಬೆಂಗಳೂರು ನಗರಕ್ಕೆ ಇಬ್ಬರು ಪೊಲೀಸ್ ಕಮಿಷನರ್ ನೇಮಕ ಮಾಡುವ ಬಗ್ಗೆ ಚಿಂತನೆ...

ವಿಜಯಪುರ | ಭೀಮಾನದಿ ಪ್ರವಾಹ: ಗರ್ಭಿಣಿಯರು ಸೇರಿ 10 ಮಂದಿ ರಕ್ಷಣೆ; 600ಕ್ಕೂ ಹೆಚ್ಚು ಮಂದಿಗೆ ಆಶ್ರಯ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ...

Download Eedina App Android / iOS

X