ಉಡುಪಿ | ಭಾರತ ಜನಮನಗೆದ್ದ ಜಾಗತಿಕ ಶಾಂತಿ ರೂಪಕವಾದ ಗಾಂಧಿ : ಡಾ. ದಿನೇಶ ಹೆಗ್ದೆ

Date:

Advertisements

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ – ಗಾಂಧಿ ಭಾರತ – ವಿಶೇಷ ಉಪನ್ಯಾಸ – ಸಾಕ್ಷ್ಯಚಿತ್ರ ಪ್ರದರ್ಶನ ” ಗಾಂಧಿ ಮತ್ತು ಹಿಂದ್ ಸ್ವರಾಜ್.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ಮತ್ತು ರಾಜ್ಯ ಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಹಾಗೂ ಗಾಂಧಿ ಭಾರತದ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ” ಗಾಂಧಿ ಮತ್ತು ಹಿಂದ್ ಸ್ವರಾಜ್ ” ಗುರುವಾರ ನಡೆಯಿತು.

ನಿವೃತ್ತ ಪ್ರಾಂಶುಪಾಲರಾದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ದಿನೇಶ ಹೆಗ್ಡೆ ವಿಶೇಷ ಉಪನ್ಯಾಸ ನೀಡಿ ಗಾಂಧಿ ಸ್ವರಾಜ್ಯದ ಪರಿಕಲ್ಪನೆ ಪೂರ್ಣ ಪ್ರಮಾಣದ ಸ್ವಾವಲಂಬಿ, ಸ್ವತಂತ್ರ ದೇಶ ನಿರ್ಮಾಣವೇ ಹೊರತು ಸ್ವದೇಶಿ ಮತ್ತು ಬಂಡವಾಳಿಗರ ಅವಲಂಬನೆ ಅಲ್ಲ. ವಸ್ತು ಮತ್ತು ವಿಚಾರಗಳೇಡರಲ್ಲೂ ಯಾರನ್ನೂ ಅವರು ಅವಲಂಬಿಸದೆ ಪೂರ್ಣ ಸ್ವಾಯತ್ತತೆಯನ್ನು ಗಳಿಸಿಕೊಳ್ಳುವುದಕ್ಕೆ ಭೂಮಿಯಕೆಯಾಗಿ ಅಹಿಂಸೆ, ಶಾಂತಿ ಮತ್ತು ಮತರೂಪಗಳ ಗೋಡೆಗಳನ್ನು ದಾಟಿ ಸಾಧಿಸುವ ಸಾಮರಸ್ಯವನ್ನು ಅಳವಡಿಸಿಕೊಳ್ಳುವುದೇ ಆಗಿದೆ ಎಂದು ಪ್ರತಿಪಾದಿಸಿದ ರಾಜಕೀಯ ಸಂತ ಗಾಂಧಿ ಆಗಿದ್ದರು ಎಂದು ಡಾ. ಹೆಗ್ಡೆ ಅಭಿಪ್ರಾಯಪಟ್ಟರು.

Advertisements
WhatsApp Image 2025 10 03 at 10.21.07 AM

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ ಶೆಟ್ಟಿ ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ ಏಕಕಾಲದಲ್ಲಿ ಅನೇಕ ಧರ್ಮಗಳನ್ನು ಬದುಕಿದ ಗಾಂಧಿಗೆ, ಸತ್ಯವೇ ದೇವರಾಗಿತ್ತಲ್ಲದೆ, ದೇವರೇ ಸತ್ಯ ಎಂಬ ಮಾನಸಿಕ ಕುರುಡು ಅವರಲ್ಲಿರಲಿಲ್ಲ. ಧರ್ಮ ಅವರಿಗೆ ಎದೆಯ ಭಾಗವಾಗಿತ್ತಲ್ಲದೆ, ನೆತ್ತಿಯ ನಂಜು ಆಗಿರಲಿಲ್ಲ ಎಂದು ತಿಳಿಸಿದರು.

ಕನ್ನಡ ಉಪನ್ಯಾಸಕ ರಾಮಾಂಜಿ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಪ್ರೋ. ನಂದೀಶ್ ಕುಮಾರ್ ಕೆ.ಸಿ, ವಿದ್ಯಾರ್ಥಿ ನಾಯಕ ಈರಬಸು, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ, ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಖ್ಯಾತ್ ಗಾಂಧಿಪ್ರಿಯ ಮಂತ್ರ ಪಠಣ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣಾ ಕೆಯು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಶ್ವಿನಿ ಡಿ.ಎಸ್ ನಿರೂಪಿಸಿ, ಸಂತೋಷ್ ವಂದಿಸಿ, ದೀಕ್ಷಾ ಸ್ವಾಗತಿಸಿದರು.

WhatsApp Image 2025 10 03 at 10.21.08 AM 1
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರ ರಾಜಕಾರಣದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಸ್ಥಾನ

ಹಾಸನ ಲೋಕಸಭಾ ಕ್ಷೇತ್ರದ ಯುವ ಸಂಸದ ಶ್ರೇಯಸ್ ಎಂ. ಪಟೇಲ್ ಅವರು...

ಬೀದರ್‌ | ಬಸವಾದಿ ಶರಣರ ತ್ಯಾಗ,ಬಲಿದಾನ ಮರೆಯದಿರಿ : ಬಸವಲಿಂಗ ಪಟ್ಟದ್ದೇವರು

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟಿದ್ದರು ಎಂದು...

Download Eedina App Android / iOS

X