ಉತ್ತರ ಕನ್ನಡ | ಮೀನುಗಾರರ ಬಲೆಗೆ ಸಿಕ್ಕ ಅಪರೂಪದ ‘ವೈಡ್‌ನೋಸ್ ಗಿಟಾರ್‌ಫಿಶ್’ ಮತ್ತೆ ಸಮುದ್ರಕ್ಕೆ!

Date:

Advertisements

ಕಾರವಾರ ಪ್ರಾದೇಶಿಕ ಕೇಂದ್ರದ ಐಸಿಎಆರ್–ಸೆಂಟ್ರಲ್ ಮೆರೈನ್ ಫಿಷರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CMFRI) ವಿಜ್ಞಾನಿಗಳ ಕಾಳಜಿ ಹಾಗೂ ನಶಿಸಿ ಹೋಗುತ್ತಿರುವ ಮೀನುಗಳ ಬಗ್ಗೆ ಮೀನುಗಾರರರಲ್ಲಿ ಮೂಡಿಸಿದ ಜಾಗೃತಿಯ ಹಿನ್ನಲೆಯಲ್ಲಿ, ಸಮುದ್ರ ಮೀನುಗಾರಿಕೆಯಲ್ಲಿ ಆಕಸ್ಮಿಕವಾಗಿ ಸೆರೆ ಸಿಕ್ಕ ಅಪರೂಪದ ವೈಡ್‌ನೋಸ್ ಗಿಟಾರ್‌ಫಿಶನ್ನು  (Glaucostegus obtusus) ಜೀವಂತವಾಗಿ ಮತ್ತೆ ಸಮುದೃಕ್ಕೆ  ಬಿಡಲಾಯಿತು.

1000189841

2022ರಲ್ಲಿ ತಿದ್ದುಪಡಿಗೊಂಡ ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಅನುಸೂಚಿ–Iರಲ್ಲಿ ಈ ಮೀನಿನ ಪ್ರಜಾತಿಯನ್ನು ಸೇರಿಸಲಾಗಿದೆ. ಈ ಪ್ರಭೇದಗಳ ಸಂಖ್ಯೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ಪ್ರಭೇದಗಳನ್ನು ಸಂರಕ್ಷಿಸಲು ಸರ್ಕಾರ ನೂತನ ವನ್ಯಜೀವಿ ಕಾನೂನನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಮೀನುಗಾರರ ಬಲೆಗೆ ಸಿಕ್ಕಿಬಿದ್ದ ಈ ಗಿಟಾರ್‌ಫಿಶ್‌ಗಳನ್ನು ಸ್ಥಳೀಯ ವಿಜ್ಞಾನಿಗಳಾದ ಐಸಿಎಆರ್–ಸಿಎಮ್‌ಎಫ್‌ಆರ್‌ಐ ಸಿಬ್ಬಂದಿ ಮಧ್ಯಸ್ಥಿಕೆಯಿಂದ ಮೀನುಗಾರರು ಜೀವಂತವಾಗಿಯೇ ಬಿಡುಗಡೆ ಮಾಡಿದ್ದಾರೆ. ಸಮುದ್ರ ತೀರದ ಮೀನುಗಾರ ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಪರಿಣಾಮವೇ ಇದು ಸಾಧ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಏಕಕಾಲಕ್ಕೆ ಹೊನ್ನಾವರ-ಅಂಕೋಲಾ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Advertisements

“ಮೀನುಗಾರಿಕೆಯಲ್ಲಿ ಆಕಸ್ಮಿಕವಾಗಿ ಸೆರೆ ಸಿಕ್ಕ ಅಪರೂಪದ ಗಿಟಾರ್‌ಫಿಶ್ ಪ್ರಜಾತಿಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯ. ಮೀನುಗಾರರ ಸಹಕಾರದಿಂದ ನಾವು ಈ ಪ್ರಜಾತಿಯನ್ನು ಉಳಿಸಲು ಸಾಧ್ಯವಾಗುತ್ತಿದೆ” ಎಂದು  ಡಾ. ಮಹೇಶ್ ವಿ., ಕೃಷಿ ಸಂಶೋಧನಾ ಸೇವೆಯ ವಿಜ್ಞಾನಿ, ಕಾರವಾರ ಪ್ರಾದೇಶಿಕ ಕೇಂದ್ರ, ಐಸಿಎಆರ್–ಸಿಎಮ್‌ಎಫ್‌ಆರ್‌ಐ ಅವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

Download Eedina App Android / iOS

X