1ಲಕ್ಷ ರೂ. ಹೂಡಿಕೆಯಿಂದ 17 ಲಕ್ಷ ರೂ. ಲಾಭ ಪಡೆದ ಹೂಡಿಕೆದಾರರು; ಯಾವುದು ಆ ಕಂಪನಿ?

Date:

Advertisements

ಸರಿಯಾದ ಹಣಕಾಸು ಜ್ಞಾನ ಮತ್ತು ನಿರಂತರ ಅನ್ವೇಷಣೆಯೊಂದಿದ್ದರೆ ಅತ್ಯಲ್ಪ ಹೂಡಿಕೆಯಿಂದಲೂ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು ಎಂಬುದಕ್ಕೆ ಈ ಮಾಹಿತಿ ಒಂದು ಉದಾಹರಣೆ. ಕಳೆದ ಐದು ವರ್ಷಗಳ ಕೆಳಗೆ ಇಡೀ ಜಗತ್ತನ್ನೇ ಆವರಿಸಿಕೊಂಡಿದ್ದ ಕೋವಿಡ್‌ ವೈರಸ್‌ ಎಲ್ಲರನ್ನು ನಿತ್ರಾಣಗೊಳಿಸಿತ್ತು. ಸಾಮಾನ್ಯ ಜನರ ಕೆಲಸಗಳು ಮತ್ತು ಸಣ್ಣ ಉಧ್ಯಮಗಳು ನಿಂತುಹೋದವು. ಅಂತಹ ಸಮಯದಲ್ಲಿ ಷೇರು ಮಾರುಕಟ್ಟೆಯೂ ಪಾತಾಳ ಕಚ್ಚಿತ್ತು. ಆದರೆ, ಆ ಸನ್ನಿವೇಶವೂ ಇಂದು ಕೆಲವರ ಆದಾಯಕ್ಕೆ ಸುಗಮವಾಗಿದೆ ಎಂಬುದನ್ನು ಗಮನಿಸಬೇಕು.

Genesys International Corporation Ltd ಕಂಪನಿಯು 2019-2020ರ ಒಂದೇ ವರ್ಷದಲ್ಲಿ ಕೋವಿಡ್‌ ಕಾರಣದಿಂದ ಭಾರೀ ಹಿನ್ನೆಡೆ ಕಂಡಿತ್ತು. ಈ ಅವದಿಯಲ್ಲಿ ಸುಮಾರು 78% ಕುಸಿತದಿಂದ ತನ್ನ ಒಟ್ಟು ಬಂಡವಾಳದಲ್ಲಿ ಸಾಕಷ್ಟು ನಷ್ಟ ಅನುಭವಿಸಿತ್ತು. 2017ರಲ್ಲಿ ಪ್ರತಿ ಷೇರಿನ ಬೆಲೆ ಗರಿಷ್ಟ 400 ರೂ. ಇತ್ತು. ಕೋವಿಡ್‌ ಆಕ್ರಮಿಸಿಕೊಂಡ 2020ರ ವೇಳೆಗೆ ಕಂಪನಿಯ ಪ್ರತಿ ಷೇರಿನ ಬೆಲೆ ಕೇವಲ 30ರೂ.ಗೆ ಕುಸಿದಿತ್ತು.

2020ರ ಕೋವಿಡ್‌ ಸಂದರ್ಭ ಮತ್ತು ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಆ ಕಂಪನಿಯ ಮೇಲೆ ಹೂಡಿಕೆ ಮಾಡಿದ್ದವರಿಗೆ ಇಂದು ಕಂಪನಿಯು 1880%ರಷ್ಟು ಆದಾಯವನ್ನು ಗಳಿಸಿಕೊಟ್ಟಿದೆ.

Advertisements

2020ರಲ್ಲಿ ಇಂತಿಷ್ಟು ಹೂಡಿಕೆ ಮಾಡಿದ್ದರೆ ಎಷ್ಟು ಗರಿಷ್ಠ ಪ್ರಮಾಣದಲ್ಲಿ ಆದಾಯ ಗಳಿಸಬಹುದಿತ್ತು ಎಂಬುದನ್ನು ಈ ಕೆಳಕಂಡಂತೆ ಅಂದಾಜು ಮಾಡಬಹುದು;

 Genesys International Corporation Ltd 
ಹೂಡಿಕೆ ಮೊತ್ತ2020ರಲ್ಲಿ ಸಿಗುತ್ತಿದ್ದ ಷೇರುಗಳ ಸಂಖ್ಯೆ (30 ರೂ ನಂತೆ)ಇಂದಿನ ಬೆಲೆ (710 ರೂ)
10,0003332,36,430
‌50,0001,66611,82,860
1,00,0003,33323,66,430
1,50,0005,00035,50,000
10,00,00033,3332,36,66,430

ವಿಶೇಷ ಸೂಚನೆ: ಷೇರು ಮಾರುಕಟ್ಟೆಯು ಹಲವು ಏರಿಳಿತಗಳಿಂದ ಕೂಡಿರುವ ವೇದಿಕೆಯಾಗಿದೆ. ಇಲ್ಲಿನ ಮಾಹಿತಿಗಳನ್ನು ಕಲಿಕೆಯ ಉದ್ದೇಶದಿಂದ ಮಾತ್ರ ಪ್ರಕಟಿಸಲಾಗಿದೆ. ಹೂಡಿಕೆ ಮಾಡುವುದು ಮತ್ತು ಹಣಕಾಸು ನಿರ್ವಹಣೆಯನ್ನು ಸ್ವತಃ ಅಧ್ಯಯನ ನಡೆಸಿ ಮಾಡುವುದು ಉತ್ತಮ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಜನಿಕಾಂತ ಚಟ್ಟೇನಹಳ್ಳಿ
ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ...

ಮುಂಬೈ | ಭಾರೀ ಮಳೆಗೆ ಹಳಿಯಲ್ಲೇ ಸಿಲುಕಿದ ಎರಡು ಮೊನೋ ರೈಲು: 782 ಪ್ರಯಾಣಿಕರ ರಕ್ಷಣೆ

ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ನೀರು ತುಂಬಿದೆ, ಸಂಚಾರ ಅಸ್ತವ್ಯಸ್ತವಾಗಿದೆ....

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X