ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಒಮಾನ್ ವಿರುದ್ಧದ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡವು 21 ರನ್ಗಳ ಜಯ ಪ್ರಯಾಸದ ಗೆಲುವು ಸಾಧಿಸಿತು.
ವಿಶ್ವದ ನಂಬರ್ ಒನ್ ಟಿ20 ತಂಡವಾಗಿರುವ ಭಾರತದ ವಿರುದ್ಧ ದಿಟ್ಟ ಆಟ ಪ್ರದರ್ಶಿಸಿದ ಕ್ರಿಕೆಟ್ ಶಿಶುಗಳಾದ ಒಮಾನ್ ತಂಡ ಪಂದ್ಯ ಸೋತರೂ ಎಲ್ಲರ ಮನಸ್ಸು ಗೆದ್ದಿತು. ಏಕಪಕ್ಷೀಯ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ‘ಅನನುಭವಿ’ ಒಮಾನ್ ಸುಲಭವಾಗಿ ಮಣಿಯಲಿಲ್ಲ.
ಶುಕ್ರವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಕೊನೆಗೆ 21 ರನ್ಗಳ ಪ್ರಯಾಸದ ಜಯ ಗಳಿಸಿತು. ಈ ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಅಜೇಯವಾಗಿ ಸೂಪರ್ 4ರ ಹಂತವನ್ನು ಪ್ರವೇಶಿಸಿದೆ.
ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಎ ಬಣದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕುತ್ತರವಾಗಿ ಒಮಾನ್ ತಂಡ 20 ಓವರ್ ಗಳು ಮುಗಿದಾಗ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದೊಂದು ವಿಕೆಟ್ಗೂ ಭಾರತದ ಬೌಲಿಂಗ್ ಪಡೆಯನ್ನು ಪರದಾಡುವಂತೆ ಮಾಡಿದ ಒಮಾನ್ ಬ್ಯಾಟಿಂಗ್ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಆಮಿರ್ ಕಲೀಂ ಮತ್ತು ಹಮೀದ್ ಮಿರ್ಝಾ ಜೋಡಿಯು ಭಾರತದ ಪಾಲಿಗೆ ಅಕ್ಷರಶಃ ಸೋಲಿನ ರುಚಿ ತೋರಿಸಲು ಹೊರಟ ಹಾಗಿತ್ತು. ಇವರಿಬ್ಬರು 2ನೇ ವಿಕೆಟ್ ಗೆ 93 ರನ್ ಗಳ ಜೊತೆಯಾಟವಾಡಿದರು. ಕೊನೆಯ 3 ಓವರ್ ಗಳಲ್ಲಿ ಒಮಾನ್ ಗೆ ಬೇಕಿದ್ದುದ್ದು 48 ರನ್ ಗಳು . ಈ ಹಂತದಲ್ಲಿ ಆಮೀಕ್ ಕಲೀಂ ಅವರು ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ನಿರಂತರ 2 ಬೌಂಡರಿ ಹೊಡೆದು ಒಮಾನ್ ಪಾಳಯದಲ್ಲಿ ಹರ್ಷ ತುಂಬಿದ್ದರು. ಆದರೆ 4ನೇ ಎಸೆತದಲ್ಲಿ ಕಲೀಂ ಅವರು ಹೊಡೆದ ಚೆಂಡನ್ನು ಲೆಗ್ ಲಾಂಗ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಫೀಲ್ಡೀಂಗ್ ಮೂಲಕ ಕ್ಯಾಚ್ ಹಿಡಿದರು. ಅಲ್ಲಿಗೆ ಒಮಾನ್ ಗೆಲುವಿನ ನಿರೀಕ್ಷೆಗೆ ಬಲ ಬರಲೇ ಇಲ್ಲ.
ಭಾರತ ತಂಡವು ಈ ಮೊದಲೇ ಸೂಪರ್ ಫೋರ್ ಹಂತಕ್ಕೆ ಸ್ಥಾನ ಕಾಯ್ದಿರಿಸಿತ್ತು. ಹೀಗಾಗಿ ಸೂರ್ಯಕುಮಾರ್ ಅವರು ಬ್ಯಾಟಿಂಗ್ಗೆ ಇಳಿಯದೆ ಉಳಿದ ಆಟಗಾರರಿಗೆ ‘ಅಭ್ಯಾಸ’ಕ್ಕೆ ಅವಕಾಶ ಮಾಡಿಕೊಟ್ಟರು. ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿತ್ತು.