ಯಾದಗಿರಿ | ಮಕ್ಕಳ ಕಲಿಕೆಗೆ ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮುಖ್ಯ: ಸಿಆರ್‌ಪಿ ಜಿ ಗುಂಡೂರಾವ್

Date:

Advertisements

ಮಗುವಿನ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಪೋಷಕರೇ ಅವರ ಮೊದಲ ಶಿಕ್ಷಕರು. ಮಗುವಿನ ವ್ಯಕ್ತಿತ್ವ, ಸ್ವಭಾವ, ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ ಇತ್ಯಾದಿಗಳನ್ನು ರೂಪಿಸುವಲ್ಲಿ ಪಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ಸಿಆರ್‌ಪಿ ಗುಂಡೂರಾವ್ ಮಕ್ಕಳ ಪೋಷಕರಿಗೆ ಕಿವಿಮಾತು ಹೇಳಿದರು.

ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಯಾವುದೇ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿಯಲು ಆ ಶಾಲೆ ಶಿಕ್ಷಕರ ಜೊತೆಗೆ ತಂದೆ-ತಾಯಿ ಅವರ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಅವರಿಗೆ ಬೆಂಬಲವನ್ನು ನೀಡಬೇಕು. ಮನೆಯ ಮೊದಲ ಗುರು ಎಂದರೆ ಅದು ತಂದೆ ತಾಯಿ. ಹಾಗಾಗಿ ಶಾಲೆಯಿಂದ ಬಂದ ಮಕ್ಕಳನ್ನು ತಾವೂ ಕೂಡ ಮಕ್ಕಳ ನಡವಳಿಕೆ ಮುಕ್ತವಾಗಿ ಆಲಿಸಬೇಕು. ಮಕ್ಕಳ ಕಲಿಕೆ ಮತ್ತು ಅವರನ್ನು ಗಮನಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಕರ ಜೊತೆಗೆ ಪೋಷಕರ ಅರ್ಧ ಪಾತ್ರವಿದೆ” ಎಂದು ಹೇಳಿದರು.

Advertisements

ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್‌ ಮಾತನಾಡಿ, “ನಿಮ್ಮ ಮಕ್ಕಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನಾಗಿ ಮಾಡಲು ಪೋಷಕರು ಪಣತೊಡಬೇಕು. ಮಕ್ಕಳನ್ನು ಎಲ್ಲ ರಂಗದಲ್ಲಿ ಬೆಳೆಸಲು ಪೋಷಕರ ಸಹಕಾರ ಕೂಡಾ ಇದೆ. ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಪೋಷಕರೂ ಕೂಡ ಕೈ ಜೋಡಿಸಿದಾಗ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಹಾಗಾಗಿ ನೀವು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಿಮ್ಮ ಮಕ್ಕಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಕಲೆ ನೋಡಿ ನೀವು ತುಂಬಾ ಖುಷಿಯಾಗಿದ್ದೀರಿ. ನಮಗೂ ಕೂಡ ಪುಟ್ಟ ಮಕ್ಕಳ ಕಲೆ ನೋಡಿ ತುಂಬಾ ಖುಷಿ ತಂದಿದೆ. ಹೀಗೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶಾಲೆಯ ಹೆಸರು ಮತ್ತು ತಂದೆ ತಾಯಿ ಹೆಸರು ತರಬೇಕೆಂಬುದು ನಮ್ಮ ಆಶಯ” ಎಂದು ಬಿ ಶ್ಯಾಮವೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳ ನೃತ್ಯಕ್ಕೆ ಪೋಷಕರ ಮೆಚ್ಚುಗೆ

ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ನೃತ್ಯ ಮಾಡಿದ ಕಲೆ ನೋಡಿ ಶಿಕ್ಷಕರು ಮತ್ತು ಪೋಷಕರು ಖುಷಿಪಟ್ಟರು.

ಪೋಷಕರ ಮನಸ್ಸು ಸೆಳೆದ ಪುಟಾಣಿ ಮಕ್ಕಳು

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ ಪುಟಾಣಿ ಮಕ್ಕಳು ಪೋಷಕರು ಉಬ್ಬೇರುಸುವಂತೆ ಮಾಡಿದರು. ಇದೇ ವೇಳೆ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಕಪ್ ಮತ್ತು ವಿಜೇತ ಪತ್ರ ವಿತರಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ನ್ಯಾ. ಶಾಂತಾರಾಮ್ ಶೆಟ್ಟಿಗೆ ‘ಅಲೆವೂರು ಗ್ರೂಪ್ ಪ್ರಶಸ್ತಿ’ ಪ್ರದಾನ

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಫಾದರ್ ಜಾನ್ ವೆಸ್ಲಿ, ಮಲ್ಲಣ್ಣ ದಾಸನಕೇರಿ, ಸಲೋಚನ್, ಸೌಮ್ಯಶ್ರಿ, ಪೀಭ್ಭ, ನಾಗಪ್ಪ, ರಷೀಮಿ, ಸೈಲಾಜ, ಸುನೀತಾ, ಗೀತಾಂಜಲಿ, ಅಂಬಿಕಾ, ಯೋಸುರಾಜ, ಅಂಜನಾ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X