ಸಮಸಮಾಜ ನಿರ್ಮಾಣವಾಗಬೇಕು. ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಗುಂಡ್ಲುಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್
ಜಿಲ್ಲಾ ಪಂಚಾಯತ್ ಜಿಲ್ಲಾಡಳಿತ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ ತಾಲೂಕು ಪಂಚಾಯತ್ ತಾಲೂಕು ಆಡಳಿತ, ಗುಂಡ್ಲುಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಹಾಗೂ ಪ್ರಿಯ ಫೌಂಡೇಶನ್ ಗುಂಡ್ಲುಪೇಟೆ ಇವರ ಸಹಭಾಗಿತ್ವದೊಂದಿಗೆ ನಡೆದ ಅಸ್ಪೃಶ್ಯತಾ ನಿಷೇಧ ಮತ್ತು ನಿಯಂತ್ರಣ ಎಸ್ಸಿ/ಎಸ್ಟಿ ಕಾಯ್ದೆಯ ಮಹತ್ವ ಕುರಿತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.
“ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯವರು ಹುಟ್ಟಿದ ನೆಲದಲ್ಲಿ ಜಾತಿ ವಿನಾಶವಾಗಬೇಕು. ತಂತ್ರಜ್ಞಾನ ಬೆಳೆದು ಚಂದ್ರಲೋಕಕ್ಕೆ ಮುಟ್ಟಿರುವ ಇಂತಹ ಸಂದರ್ಭದಲ್ಲೂ ನಮಗೆ ನಮ್ಮ ಅಕ್ಕ ಪಕ್ಕದವರನ್ನು ಪ್ರೀತಿಸುವ ಗುಣವೇ ಇಲ್ಲ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಸನ್ನಿವೇಶವು ಸಂಪೂರ್ಣವಾಗಿ ಅಂದಿನಂತೆ ಇಲ್ಲ. ಅಸ್ಪೃಶ್ಯರಾಗಿ ಅನೇಕ ಸೂಚಿತ ಸಮುದಾಯಗಳಿಗೆ ಸಿಕ್ಕಿದ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಗೆ ಗಮನಾರ್ಹ ಬದಲಾವಣೆಯನ್ನು ತಂದಿರುವುದು ನಿಜ. ಆದರೆ ಜಾತಿ ಎನ್ನುವುದು ಸಂಪೂರ್ಣವಾಗಿ ಹೋಗಿಲ್ಲ” ಎಂದು ಹೇಳಿದರು.
“ಸಾರ್ವಜನಿಕ ಬದುಕಿನಲ್ಲಿ ಅಸ್ಪೃಶ್ಯ ಎಂಬ ಅಂತರ ಕಡಿಮೆಯಾದಂತೆ ಕಾಣುತ್ತದೆ. ಆದರೆ ನಮ್ಮಂತೆ ಇರುವ ಮನುಷ್ಯರನ್ನೇಕೆ ತಾರತಮ್ಯದಿಂದ ನೋಡುತ್ತೇವೆ. ಶಾಲೆ, ಅಂಗನವಾಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ತಿಳಿದ ಗ್ರಾಮದಲ್ಲಿ ಸೌಹಾರ್ದ ಜೀವನ ನಡೆಸಿದರೆ ಜನ್ಮ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ತ್ವರಿತ ಗತಿಯಲ್ಲಿ ಬರನಿರ್ವಹಣಾ ಕೆಲಸ ನಿರ್ವಹಿಸಬೇಕು: ಸಚಿವ ಕೆ ವೆಂಕಟೇಶ್
“ಕ್ರಿಯಾ ಪೌಂಡೇಶನ್ ಉತ್ತಮ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ” ಎಂದು ತೆರಕಣಾಂಬಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೀನಾ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಶಾ ಕಾರ್ಯಕರ್ತರು ಗ್ರಾಮದ ಮುಖಂಡರು ಸೇರಿದಂತೆ ಇತರರು ಇದ್ದರು.