ಸ್ವಂತ ಗುರುತಿನ ಮೇಲೆ ಭೂಮಿ ಖರೀದಿಸಿದ ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತ

Date:

Advertisements

ಕೇರಳದ ತ್ರಿಶೂರ್‌ನ ಚಾವಕ್ಕಾಡ್‌ನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಣ್ಣ ತುಂಡು ಭೂಮಿಯನ್ನು ನೋಂದಾಯಿಸಿಕೊಂಡಿದ್ದು, ಲಿಂಗತ್ವ ಅಲ್ಪಸಂಖ್ಯಾತ (ಟಿಜಿ) ಗುರುತಿನ ಅಡಿಯಲ್ಲಿ ಭೂಮಿ ನೋಂದಣಿ ಮಾಡಿಕೊಂಡ ದೇಶದ ಮೊದಲಿಗರಾಗಿದ್ದಾರೆ.

38 ವರ್ಷ ವರ್ಷದ ಲೈಂಗಿಕ ಅಲ್ಪಸಂಖ್ಯಾತರಾದ ಫೈಸಲ್ ಫೈಸು ಅವರು ತಮ್ಮ ಸ್ವಂತ ಲಿಂಗತ್ವದ ಗುರುತಿನ ಅಡಿಯಲ್ಲಿ ತಾವು ಕೊಂಡುಕೊಂಡ ಭೂಮಿಯನ್ನು ನೋಂದಾಯಿಸಬೇಕಾದರೆ ಸಮುದಾಯದ ಇತರ ಸದಸ್ಯರು ಎದುರಿಸುತ್ತಿರುವ ಹಲವು ತೊಂದರೆಗಳನ್ನು ಇವರು ಎದುರಿಸಬೇಕಾಯಿತು.

ಏಕೆಂದರೆ ಆನ್‌ಲೈನ್‌ ವ್ಯವಸ್ಥೆಯ ಲಿಂಗದ ವಿಭಾಗದಲ್ಲಿ ‘ಪುರುಷ’ ಅಥವಾ ‘ಮಹಿಳೆ’ ಎಂದು ನಮೂದಿಸಲು ಮಾತ್ರ ನಿಬಂಧನೆಗಳಿತ್ತು.

Advertisements

ಫೈಸು ಅವರು ತಾವು ಕೊಂಡುಕೊಳ್ಳುವ ಭೂಮಿಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಲು ಬಯಸಿದ್ದರು. ಅದೇ ಸಮಯದಲ್ಲಿ, ಲೈಂಗಿಕ ಅಲ್ಪಸಂಖ್ಯಾತ ಗುರುತನ್ನು ಉಳಿಸಿಕೊಳ್ಳಲು ಬಯಸಿದ್ದರು. ಮೇಲಾಗಿ, ಆಧಾರ್ ಕಾರ್ಡ್ ಸೇರಿದಂತೆ ಇತರ ಎಲ್ಲ ದಾಖಲೆಗಳಲ್ಲಿ “ಟಿಜಿ”(ಲಿಂಗತ್ವ ಅಲ್ಪಸಂಖ್ಯಾತ) ಲಿಂಗದ ಗುರುತನ್ನು ಇವರು ಹೊಂದಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?

ಫೈಸು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಕೊಂಡೊಯ್ದರು. ಮೂರು ವಾರಗಳಲ್ಲಿ ‘ಟಿಜಿ’ ಲಿಂಗವನ್ನು ನಮೂದಿಸುವ ಕಾನೂನು ಇರುವುದಾಗಿ ಅವರಿಗೆ ಮನವರಿಕೆ ಮಾಡಿದರು.

ಅಂತಿಮವಾಗಿ, ಫೈಸು ಅವರ ಆಶಯದಂತೆ ಚಾವಕ್ಕಾಡ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸುಮಾರು ಐದು ಸೆಂಟ್ಸ್ ಜಮೀನನ್ನು ನೋಂದಾಯಿಸಿಕೊಂಡರು.

“ಟಿಜಿ ಸಮುದಾಯದ ವ್ಯಕ್ತಿಯೊಬ್ಬರು ‘ಟಿಜಿ’ ಗುರುತನ್ನು ನಮೂದಿಸುವ ಮೂಲಕ ಭೂಮಿಯನ್ನು ನೋಂದಣಿ ಮಾಡಿಸಿಕೊಂಡಿರುವುದು ದೇಶದಲ್ಲಿ ಇದೇ ಮೊದಲಾಗಿದೆ. ಈ ಹಿಂದೆ ಕೇರಳ ಸರ್ಕಾರದ ‘ಲೈಫ್ ಮಿಷನ್ ಯೋಜನೆಯಡಿ’ಯಲ್ಲಿ ಮನೆ ಮಂಜೂರು ಮಾಡಿದ ಟಿಜಿ ಸಮುದಾಯದ ಸದಸ್ಯರು ಹಲವು ತೊಂದರೆಗಳಿಂದಾಗಿ ನೋಂದಣಿ ಸಮಯದಲ್ಲಿ ಲಿಂಗವನ್ನು ‘ಪುರುಷ’ ಎಂದು ನಮೂದಿಸಬೇಕಾಗಿತ್ತು” ಎಂದು ಫೈಸು ತಿಳಿಸುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X