ಕೆಎಸ್ಆರ್ಟಿಸಿ ಬಸ್ನ ಚಾರ್ಸಿ ತುಂಡಾಗಿದ್ದು, ಚಲಿಸುತ್ತಿದ್ದ ಬಸ್ನ ಒಂದು ಬದಿ ನೆಲಕ್ಕೆ ಕುಸಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ, ಸರ್ಕಾರಿ ಸಾರಿಗೆ ಬಸ್ಗಳಿಗೆ ಪ್ರತಿ ವರ್ಷ ಫಿಟಿಂಗ್ ಸರ್ಟಿಫಿಕೇಟ್ ಪಡೆಯಬೇಕು. ಉತ್ತಮವಾಗಿಲ್ಲ ಅಥವಾ ನಿರ್ದಿಷ್ಟ ಕಿಲೋಮೀಟರ್ ಓಡಿದ ಬಸ್ಗಳನ್ನು ರಸ್ತೆಗೆ ಇಳಿಸಬಾರದು ಎಂದು ನಿರ್ದೇಶಿಸಿದೆ. ಆದರೂ, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದ ಬಸ್ಅನ್ನು ರಸ್ತೆಗಿಳಿಸಿದ್ದ ಪರಿಣಾಮ ಅವಘಡ ನಡೆದಿದೆ ಎಂದು ಹೇಳಲಾಗಿದೆ.
ಕಾರವಾದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮಾರ್ಗ ಮಧ್ಯೆ ಚಾರ್ಸಿ ತುಂಡಾಗಿ ಕುಸಿದಿದೆ. ಬಸ್ಸಿನಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರಲ್ಲಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.