ಹಣ – ರಕ್ತ ಚಲನೆಯಲ್ಲಿದ್ದರೆ, ವ್ಯಕ್ತಿ ಮತ್ತು ಸಮಾಜ ಆರೋಗ್ಯವಾಗಿರುತ್ತದೆ: ಡಿ.ಕೆ ಶಿವಕುಮಾರ್

Date:

Advertisements

“ಸಾಯಿಬಾಬ ಅವರು ಹಲವಾರು ಬಾರಿ ತಮ್ಮ ಭಾಷಣದಲ್ಲಿ ಹಣ ಮತ್ತು ರಕ್ತ ಸದಾ ಚಲನೆಯಲ್ಲಿರಬೇಕು ಎಂದು ಹೇಳಿದ್ದಾರೆ. ಏಕೆಂದರೆ, ಹಣ ಒಂದೆಡೆ ಇದ್ದರೆ ಆದಾಯ ತೆರಿಗೆ ದಾಳಿ ಆಗುತ್ತೆ, ಇನ್ನು ರಕ್ತ ಒಂದೆ ಕಡೆ ಇದ್ದರೆ ರೋಗಗಳು ಬರುತ್ತವೆ. ಹಾಗಾಗಿ, ಇವೆರಡು ಚಲನೆಯಲ್ಲಿದ್ದರೇ, ವ್ಯಕ್ತಿ ಹಾಗೂ ಸಮಾಜ ಆರೋಗ್ಯವಾಗಿರುತ್ತದೆ” ಎಂದು ಸಾಯಿಬಾಬ ಅವರ ಹಿಂದಿನ ಭಾಷಣದ ಮಾತನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೆಲುಕು ಹಾಕಿದರು.

ಬೆಂಗಳೂರಿನ ವೈಟ್ ಫೀಲ್ಡ್ ನ ಶ್ರೀ ಸತ್ಯಸಾಯಿ ನರ್ಸಿಂಗ್ ಕಾಲೇಜ್‌ನ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಹಿಂದೆ ಸ್ವಾಮೀಜಿಗಳು ಮಠದ ವತಿಯಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರು” ಎಂದು ಹೇಳಿದರು.

“ಸಾಯಿಬಾಬ ಅವರು ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಕುಂಬಳಗೋಡಿಗೆ ಆಗಮಿಸಿದ್ದರು. ಆಗ ಅವರು ಹೈದರಾಬಾದ್ ಕನ್ನಡ, ಮೈಸೂರು ಕನ್ನಡ, ತೆಲುಗು ಕನ್ನಡವನ್ನು ಸೇರಿಸಿ 40 ನಿಮಿಷಗಳ ಕಾಲ ಮಾತನಾಡಿದರು. ಅವರ ಭಾಷಣದ ಸಂದರ್ಭದಲ್ಲಿ ಭಗವದ್ಗೀತೆಯ 8 ಶ್ಲೋಕಗಳನ್ನು ಹೇಳಿದರು. ಅದು ನಾನು ನನ್ನ ಜೀವನದಲ್ಲಿ ಕೇಳಿದ ಅತ್ಯುತ್ತಮ ಆಧ್ಯಾತ್ಮಿಕ ಭಾಷಣವಾಗಿತ್ತು. ನಂತರ ನಾನು ನನ್ನ ಆಪ್ತ ಕಾರ್ಯದರ್ಶಿಗೆ ಹೇಳಿ ಓರ್ವ ಸಂಸ್ಕೃತ ಶಿಕ್ಷಕರನ್ನು ನಿಯೋಜಿಸಿಕೊಂಡೆ. ನಂತರ ಅದು ನನ್ನ ಆಲೋಚನೆ, ಘನತೆ, ವ್ಯಕ್ತಿತ್ವವನ್ನೇ ಬದಲಿಸಿತು” ಎಂದು ತಿಳಿಸಿದರು.

Advertisements

“ಸಾಯಿಬಾಬ ಅವರು ನಮ್ಮ ಜತೆ ಇಲ್ಲದಿದ್ದರೂ ಅವರ ಆಲೋಚನೆ, ದೂರದೃಷ್ಟಿ, ಧಾರ್ಮಿಕ ಶಕ್ತಿ ನಮ್ಮ ಜತೆ ಇದೆ. ಈ ಕಟ್ಟಡದ ವಿನ್ಯಾಸ ನೋಡಿದ ನಂತರ ಇದೇ ವಿನ್ಯಾಸದಲ್ಲಿ ನಾನು ಎಂಜಿನಿಯರಿಂಗ್ ಕಾಲೇಜು ಕಟ್ಟಿದೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದದಂತೆ ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿದ್ದಾರೆ ಅತಿ ಹೆಚ್ಚು ನಕಲಿ ವೈದ್ಯರು: ರೋಗಿಗಳ ಜೀವದ ಜತೆಗೆ ಚೆಲ್ಲಾಟ

“ನೀವು ಮನಶಾಂತಿಗಾಗಿ ಸೇವೆ ಮಾಡುತ್ತಿದ್ದೀರಿ. ಯಶಸ್ವಿ ವ್ಯಕ್ತಿಗಳು ಮುಖದಲ್ಲಿ ನಗು ಹಾಗೂ ಮೌನವನ್ನು ಹೊಂದಿರುತ್ತಾರೆ. ನಗು ಸಮಸ್ಯೆಗಳನ್ನು ಬಗೆಹರಿಸಿದರೆ, ಮೌನ ಸಮಸ್ಯೆಗಳನ್ನು ದೂರವಿಡುತ್ತದೆ. ನಗು ನಿಮ್ಮ ಅಂದವನ್ನು ಹೆಚ್ಚಿಸಿದರೆ, ಪ್ರಾರ್ಥನೆ ನಿಮ್ಮನ್ನು ಶಕ್ತಿಶಾಲಿಯಾಗಿ ಮಾಡುತ್ತದೆ. ಪ್ರೀತಿ ಜೀವನ ಆನಂದಿಸುವಂತೆ ಮಾಡುತ್ತದೆ ಎಂದು ಸಾಯಿಬಾಬ ಅವರು ಹೇಳಿಕೊಟ್ಟಿದ್ದಾರೆ. ನಾನಾ ಜಾತಿ ಹಾಗೂ ಸಮುದಾಯದವರು ಇಲ್ಲಿ ಸೇರಿದ್ದೇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಯಾವುದಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ಅಂತಿಮವಾಗಿ ಮನುಷ್ಯತ್ವ ಹಾಗೂ ಮಾನವೀಯತೆ ಬಹಳ ಮುಖ್ಯ. ಮಾನವನ ಸೇವೆಯೇ ಮಾದವನ ಸೇವೆ” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X