ಚಾಮರಾಜನಗರ | ಮುಸ್ಲಿಂ ಬಾಂಧವರಿಂದ ಸಂವಿಧಾನ ದಿನಾಚರಣೆ ಮತ್ತು ಜನ ಜಾಗೃತಿ ಸಮಾವೇಶ

Date:

Advertisements

ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಶಾಲೆ ಆವರಣದಲ್ಲಿರುವ ಮಾತೇ ಸಾವಿತ್ರಿಬಾಯಿ ಪುಲೆ ರಂಗವೇದಿಕೆಯಲ್ಲಿ ಕೊಳ್ಳೇಗಾಲ ತಾಲೂಕಿನ ಮುಸ್ಲಿಂ ಬಾಂಧವರು ಬುಧವಾರದಂದು (ಜ.31) 75ನೇ ಸಂವಿಧಾನ ದಿನಾಚರಣೆ ಮತ್ತು ಜನ ಜಾಗೃತಿ ಸಮಾವೇಶ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಂವಿಧಾನ ಓದು ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು ಸಂವಿಧಾನ ಪೀಠಿಕೆ ಹೇಳುವುದರ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಲಿತ ಮತ್ತು ಮೈನರಿಟಿ ಸೇನೆ ರಾಜ್ಯದ್ಯಕ್ಷ ಎ.ಜೆ. ಖಾನ್ ಮಾತನಾಡಿ, ಭಾರತ ದೇಶವನ್ನು ಕಟ್ಟಿ ಬೆಳೆಸಿದ ಮೂಲನಿವಾಸಿಗಳು ನಾವು. ದೇಶದ ಜಾತಿವಾದಿಗಳ ಸೇವಕರಲ್ಲ ನಾವುಗಳು ಇತಿಹಾಸವನ್ನು ನೋಡಿದಾಗ ಹಿಂದಿನ ಕಾಲದಿಂದಲೂ ಕೂಡ ಬುದ್ಧರ ಜೊತೆ ಬಾಬಾಸಾಹೇಬರ ಜೊತೆ ಸಾವಿತ್ರಿ ಬಾಯಿಪುಲೆ ಅವರ ಜೊತೆ ಮುಸಲ್ಮಾನ ಸಮುದಾಯದ ಜನರು ಜೊತೆ ಜೊತೆಯಾಗಿ ನಿಂತು ಕೆಲಸ ಮಾಡಿದ್ದಾರೆ. ಸಮ ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ.

Advertisements

ಹಿಂದೆ  ನಮ್ಮ ಪೂರ್ವಜರು ದಲಿತರೇ ಆಗಿದ್ದೇವು ಕಾರಣಾಂತರಗಳಿಂದ ಸವರ್ಣಿಯರು ನೀಡುತ್ತಿದ್ದ ಕಿರುಕುಳ, ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ತಾಳಲಾರದೆ ಮುಸ್ಲಿಮರಾಗಿದ್ದಾರೆ ಮತ್ತು ಕ್ರೈಸ್ತರಾಗಿದ್ದಾರೆ. ಇತಿಹಾಸ ತೆಗೆದು ನೋಡಿದರೆ ನಾವೆಲ್ಲ ಮೂಲ ದಲಿತರು ಮುಸಲ್ಮಾನರು ಮತ್ತು ದಲಿತರ ರಕ್ತ ಒಂದೇ ಆಗಿದೆ. ಮಾತೇತ್ತಿದರೆ ಮನುವಾದಿಗಳು ಮುಸಲ್ಮಾನರು ಬೇರೆಯವರು ಹೊರಗಡೆಯವರು ಡಿಎನ್ಎ ಚೆಕ್ ಮಾಡಿ ಅಂತ ಹೇಳ್ತಾರೆ. ಆದರೆ, ಅವರ ಡಿಎನ್ಎ ಚೆಕ್ ಮಾಡಿದರೆ ವಿದೇಶದಿಂದ ದನ ಮೇಯಿಸಲು ಬಂದವರು ಯಾರು ಭಾರತದ ಮೂಲನಿವಾಸಿಗಳು ಯಾರು ಅಂತ ಗೊತ್ತಾಗುತ್ತದೆ ಎಂದರು.

ಜೊತೆಗೆ ಮೊನ್ನೆಯಷ್ಟೇ ನಡೆದ ಮಂದಿರ ಉದ್ಘಾಟನೆಯನ್ನು ಸರ್ಕಾರದ ಕಾರ್ಯಕ್ರಮದಂತೆ ಬಿಂಬಿಸಿ ಮಾಡಿದ್ದಾರೆ ಮತ್ತು ಜನವರಿ 22 ನಮ್ಮ ದೇಶಕ್ಕೆ ಬಾಬಾಸಾಹೇಬರು ಸಂವಿಧಾನವನ್ನು ಬರೆದು ನಿರ್ಣಯ ಮಾಡಿದ ದಿನದಂದೆ  ಮಂದಿರ ಉದ್ಘಾಟನೆ ಮಾಡಿದ್ದಾರೆ ಎಂದರೆ, ಇದರ ಹಿಂದೆ ಎಂತಹ ಷಡ್ಯಂತ್ರ ಇರಬಹುದು ಎಂಬುದನ್ನು ನಾವು ಗಮನಿಸಬೇಕು. ಹಾಗಾಗಿ ನಾವೆಲ್ಲರೂ ಸಂವಿಧಾನದ ಸಂಪುಟಗಳನ್ನು ಓದಬೇಕು ಬಾಬಾಸಾಹೇಬರ ವಿಚಾರದಾರೆಗಳನ್ನು ತಿಳಿದುಕೊಂಡು ನಮ್ಮ ದೇಶದ ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾವುಗಳು ಅಲ್ಪ ಸಂಖ್ಯಾತರಾಗಿ ಉಳಿದರೆ ನಮ್ಮ ಮೇಲೆ ದೌರ್ಜನ್ಯ ದಬ್ಬಾಳಿಕೆ ತಪ್ಪಿದ್ದಲ್ಲ ನಾವು ಬಹು ಸಂಖ್ಯಾತರಾಗಲು ಸಾಧ್ಯ ಇದೆ ನಾವೆಲ್ಲ ದಲಿತರು ಮತ್ತು ಶೋಷಿತ  ಸಮುದಾಯಗಳ ಜೊತೆ ಸೇರಿ ಒಗ್ಗಟ್ಟಾಗಿ ಸೇರಿ ನಮ್ಮ ದೇಶದ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳೋಣ ಮತ್ತು ನಾಲ್ವಡಿ ಕೃಷ್ಣ ರಾಜ ಒಡೆಯರ ಭಾವಚಿತ್ರ ಮುಸಲ್ಮಾನರು ತಮ್ಮ ಮನೆಯಲ್ಲಿ ಇತ್ತು ಗೌರವಿಸಬೇಕು ಅಂತಹ ವಿಶೇಷ ಕೊಡುಗೆಯನ್ನು ನಮ್ಮ ಸಮುದಾಯಕ್ಕೆ ನೀಡಿದ್ದಾರೆ ಎಂದು ಹೇಳಿದರು.

ಹಿಂದೆ ಇದ್ದ ಸರ್ಕಾರ ಮುಸಲ್ಮಾನರ ಶೇ.4 ಮೀಸಲಾತಿಯನ್ನು ರದ್ದೂಗೋಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮುಸಲ್ಮಾನರು ಕಪ್ಪು ಪಟ್ಟಿ ಧರಿಸಿ ಮತದಾನ ಬಹಿಸ್ಕಾರ ಮಾಡಬೇಕು ದಲಿತರು ನಮಗೆ ಸಹಕಾರ ನೀಡುತ್ತಾರೆ.  ಜನಸಂಖ್ಯೆಗೆ ಅನುಗುಣವಾಗಿ ನಮಗೆ ಶೇ.14 ಮೀಸಲಾತಿ ನೀಡಬೇಕು. ಜಾತಿಜನಗಣತಿ ವರದಿ ನೀಡಲು ಸರ್ಕಾರಗಳು ಮೀನಾ ಮೇಷ ಹೇನಿಸುತ್ತಿವೆ ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ ಬಾಬಾಸಾಹೇಬರು ನೀಡಿರುವಂತಹ ನಮ್ಮ ಸಂವಿಧಾನ ಬದ್ದ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆದುಕೊಳ್ಳೋಣ.

ಟಿಪ್ಪು ಸುಲ್ತಾನ್,ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿ ಬಾಪುಲೆ,ಮಾನ್ಯವರ್ ಕಾಂನ್ಸಿರಾಮ್, ರವರ ಬಗ್ಗೆ ಬಹಳ ವೈಚಾರಿಕವಾಗಿ ವಿಚಾರ ಮಂಡನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಮ್ಜದ್ ಪಾಷ, ಸಮಿವುಲ್ಲಾ, ಆರೀಫ್ ವುಲ್ಲ, ಆಯಾಜ್ ಕನ್ನಡಿಗ, ಜುನೈದ್ ಉಲ್ಲಾ, ಮತಿನ್, ತವಾಬ್, ಹಜರತ್, ಸೊಹೇಬ್, ಜಕ್ಕವುಲ್ಲ, ಜೆ ನಿಂಗರಾಜು, ನಟರಾಜು, ಕಮಲ್, ಚಿಕ್ಕರಾಜು, ಸರ್ವಧರ್ಮದ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X