- ಮಿಲಿಟರಿ ನಾಯಕ ಬುರ್ಹಾನ್ ಹಾಗೂ ರಾಜಧಾನಿಯ ವಿಮಾನ ನಿಲ್ದಾಣದ ಬಳಿ ಗುಂಡಿನ ದಾಳಿ
- ಸೇನೆ ನಾಯಕ ಮತ್ತು ಅರೆಸೇನಾ ಪಡೆಯ ಕಮಾಂಡರ್ ನಡುವೆ ಉಂಟಾಗಿದ್ದ ಉದ್ವಿಗ್ನತೆ
ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನೆ ನಡುವೆ ಘರ್ಷಣೆ ಉಂಟಾಗಿರುವ ಕಾರಣ ಎಲ್ಲಾ ಭಾರತೀಯರು ಮನೆಯಿಂದ ಹೊರಗೆ ಬರದಂತೆ ಹಾಗೂ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸುಡಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.
ಸುಡಾನ್ನಲ್ಲಿ ಅರೆಸೇನಾ ಪಡೆ ಮತ್ತು ನಿಯಮಿತ ಸೇನೆಯು ಪರಸ್ಪರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಸುಡಾನ್ ರಾಜಧಾನಿ ಖಾರ್ಟೂಮ್ನಲ್ಲಿ ಅನೇಕ ಸ್ಫೋಟಗಳು ಮತ್ತು ಗುಂಡಿನ ದಾಳಿ ನಡೆಯುತ್ತಿರುವ ಕಾರಣ ಸುರಕ್ಷಿತವಾಗಿ ಆಶ್ರಯ ಪಡೆಯಲು ಭಾರತೀಯರಿಗೆ ತಿಳಿಸಲಾಗಿದೆ.
“ವರದಿಯಾಗಿರುವ ಸ್ಫೋಟಗಳು ಮತ್ತು ಘರ್ಷಣೆಗಳ ಕಾರಣದಿಂದ, ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯೊಳಗೆ ಇರಲು ಮತ್ತು ತಕ್ಷಣದ ಪರಿಣಾಮದೊಂದಿಗೆ ಹೊರಗೆ ಹೋಗುವ ಸಾಹಸ ಮಾಡುವುದನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ದಯವಿಟ್ಟು ಶಾಂತವಾಗಿರಿ ಮತ್ತು ಹೆಚ್ಚಿನ ಮಾಹಿತಿ ನಿರೀಕ್ಷಿಸಿ” ಎಂದು ಖಾರ್ಟೂಮ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ನಲ್ಲಿ ತಿಳಿಸಿದೆ.
ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೇನಾ ಪಡೆಯ ಕಮಾಂಡರ್ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವೆ ಕೆಲವು ವಾರಗಳ ಹಿಂದೆ ಭಾರಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಆದರೆ ಇದೀಗ ಈ ಉದ್ವಿಗ್ನ ಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ.
ಈ ಘರ್ಷಣೆಯಿಂದ ರಾಜಧಾನಿಯಲ್ಲಿ ಅನೇಕ ಸ್ಫೋಟಗಳು ಮತ್ತು ದಕ್ಷಿಣ ಖಾರ್ಟೂಮ್ನ ಆರ್ಎಸ್ಎಫ್ ಸಮುಚ್ಛಯದ ಬಳಿ ಗುಂಡಿನ ದಾಳಿಗಳು ವರದಿಯಾಗಿದೆ. ಸುಡಾನ್ ವಿಮಾನ ನಿಲ್ದಾಣದ ಕಾಂಪೌಂಡ್ಗೆ ಟ್ರಕ್ಲೋಡ್ಗಳ ಫೈಟರ್ಗಳು ದಾಳಿ ಮಾಡುತ್ತಿದೆ. ಇದೀಗ ತನ್ನ ಒಂದು ಸೇನೆ ಪಡೆ ಖಾರ್ಟೂಮ್ ವಿಮಾನ ನಿಲ್ದಾಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಆರ್ಎಸ್ಎಫ್ ಹೇಳಿದೆ.
ಖಾರ್ಟೂಮ್ನ ವಿಮಾನ ನಿಲ್ದಾಣ ಹಾಗೂ ಬುರ್ಹಾನ್ ನಿವಾಸದ ಬಳಿ ಗುಂಡಿನ ದಾಳಿ ನಡೆಯುತ್ತಿದೆ. ಒಂದು ಕಡೆ ಗುಂಡಿನ ದಾಳಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ನಾಗರಿಕರ ರಕ್ಷಣೆ ಕಾರ್ಯ ನಡೆಯುತ್ತಿದೆ. ಕ್ಷಿಪ್ರ ಬೆಂಬಲ ಪಡೆಗಳ ಯೋಧರು ಖಾರ್ಟೂಮ್ ಮತ್ತು ಸುಡಾನ್ ಸುತ್ತಮುತ್ತಲಿನ ಹಲವಾರು ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ. ಸುಡಾನ್ನಲ್ಲಿ ಘರ್ಷಣೆಗಳು ನಡೆಯುತ್ತಿದ್ದರೂ ಮತ್ತು ದೇಶವನ್ನು ರಕ್ಷಿಸಲು ಸೇನೆಯು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ” ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಬಿಲ್ ಅಬ್ದಲ್ಲಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.