ಚಿಕ್ಕಮಗಳೂರು | ಒಪ್ಪತ್ತಿನ ಗಂಜಿಗೂ ಪರದಾಡುತ್ತಿದೆ ಆಸೀನಾ ಕುಟುಂಬ

Date:

Advertisements

ಸುಮಾರು 25 ವರ್ಷಗಳಿಂದ ಅಕ್ಕಿಪಿಕ್ಕಿ ಸುಮುದಾಯದ 45 ಕುಟುಂಬಗಳ ಜನರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲೇನಹಳ್ಳಿ ಬಳಿಯ ಅಕ್ಕಿಪಿಕ್ಕಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಈ ವರೆಗೆ ಆ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ದೂರದ ಊರುಗಳಿಗೆ ಹೋಗಿ, ಕೂಲಿ ಮಾಡಿ, ಈ ಕುಟುಂಬಗಳು ಜೀವನ ನಡೆಸುತ್ತಿವೆ.

45 ಅಕ್ಕಿಪಿಕ್ಕಿ ಕುಟುಂಬಗಳಲ್ಲಿ ಆಸೀನಾ ಅವರ ಕುಟುಂಬವೂ ಒಂದು. ಆಕೆ ಗಂಡ ಅನಾರೋಗ್ಯಕ್ಕೆ ತುತ್ತಾಗಿ, ಮೂಲೆ ಸೇರಿದ್ದಾರೆ. ಅವರು ನಾಲ್ಕು ಮಕ್ಕಳು ಅಪ್ರಾಪ್ತರು. ಆರು ಮಂದಿಯ ಕುಟುಂಬವನ್ನು ಆಸೀನಾ ಅವರೇ ಸಲಹುತ್ತಿದ್ದಾರೆ. ಕಾಡು-ಮೇಡು ಅಲೆದು, ಕೂಲಿ ಮಾಡಿ, ಕುಟುಂಬವನ್ನು ದೂಡುತ್ತಿದ್ದಾರೆ. ಒಂದು ದಿನ ಕೂಲಿ ಸಿಗದಿದ್ದರೂ, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಆ ಕುಟುಂಬಕ್ಕಿದೆ.

ತಮ್ಮ ಸಂಕಷ್ಟಗಳ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಆಸೀನಾ, “ಅಕ್ಕಿಪಿಕ್ಕಿ ಕಾಲೋನಿಯಲ್ಲಿ ಗುಡಿಸಿಲು ಕಟ್ಟಿಕೊಂಡು ಬದುಕುತ್ತಿದ್ದೆವು. ಎರಡ್ಮೂರು ವರ್ಷಗಳ ಹಿಂದೆ ಬೆಂಕಿ ತಗುಲಿ, ಗುಡಿಸಲು ಸುಟ್ಟು ಕರಕಲಾಯಿತು. ಆ ಸಮಯದಲ್ಲಿ ನಮ್ಮ ಕ್ಷೇತ್ರದಲ್ಲಿ ಸಿ.ಟಿ ರವಿ ಶಾಸಕರಾಗಿದ್ದರು. ಪರಿಹಾರಕ್ಕೆಂದು ಅವರ ಕಚೇರಿಗೆ ಹೋದರೆ, 2,000 ರೂ. ಕೊಟ್ಟು ಹೊರಗೆ ಕಳಿಸು ಅಂದಿದ್ರು. ನಮ್ಮ ಕಷ್ಟಕ್ಕೆ ಕಿಂಚಿತ್ತು ಕರುಣೆ ತೋರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements

ಮನೆ1

“ಕುಟುಂಬ ನಿರ್ವಹಣೆಗೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೂ ನಮಗೆ ಆಗುತ್ತಿಲ್ಲ. ಪ್ರತಿ ತಿಂಗಳಿಗೆ 3 ಕೆಜಿ ಆಕ್ಕಿ ಕೊಡುತ್ತಾರೆ. ಅದು ಸಾಕಾಗುವುದಿಲ್ಲ. ಸರ್ಕಾರದಿಂದ ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಡೋದಾಗಿ ಗ್ರಾಮ ಪಂಚಾಯತಿಯವರು ಹೇಳಿದ್ರು, ಅರ್ಧ ಕಾಮಗಾರಿ ಮಾಡಿದ್ದಾರೆ” ಎಂದರು.

“ಮಳೆ ಬಂದರೆ ಮನಿಯೊಳಗೆ ನೀರು ನುಗ್ಗುತ್ತದೆ. ಛಾವಣಿಯೂ ಸೋರುತ್ತದೆ. ನನಗೂ ನನ್ನ ಗಂಡನಿಗೆ ಆರೋಗ್ಯ ಸರಿ ಇಲ್ಲ. ಒಂದಿನ ಕೆಲಸಕ್ಕೆ ಹೋದ್ರೆ ಇನ್ನೊಂದು ದಿನ ಹೋಗಲು ಆಗುವುದಿಲ್ಲ. ಮಕ್ಕಳಿಗೆ ಒಂದೊಪ್ಪತ್ತಿನ ಗಂಜಿಗೂ ನರಕಯಾತನೆ ಆಗುತ್ತಿದೆ” ಎಂದು ಹೇಳಿದರು.

ಸಂಬಂಧಪಟ್ಟ ಅಧಿಕಾರಿಗಳು ಮನೆ ಕಾಮಗಾರಿಯನ್ನ ಪೂರ್ಣಗೊಳಿಸಿಕೊಡಬೇಕು. ತಮ್ಮ ಕುಟುಂಬಕ್ಕೆ ನೆರವು ನೀಡಬೇಕೆಂದು ಆಸೀನಾ ಕುಟುಂಬ ಎದುರು ನೋಡುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X