ತುಮಕೂರು | ಕೆ ಬಿ ಸಿದ್ದಯ್ಯ ಅವರ ಕಾವ್ಯ ಸೆಕ್ಯುಲರ್ ಕಾವ್ಯ: ಅಗ್ರಹಾರ ಕೃಷ್ಣಮೂರ್ತಿ

Date:

Advertisements

ಕಾವ್ಯ‌ ಆಧ್ಯಾತ್ಮಿಕ ಮತ್ತು ರಾಜಕೀಯವಾಗಿರಬೇಕೆಂಬುದು ಕೆ ಬಿ ಸಿದ್ದಯ್ಯ ಅವರ ನಿಲುವಾಗಿತ್ತು. ಹಾಗಾಗಿ ಅವರ ಕಾವ್ಯ ಸೆಕ್ಯುಲರ್ ಕಾವ್ಯ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತುಮಕೂರು ನಗರದ ಕನ್ನಡ ಭವನದಲ್ಲಿ ಚಲನ ಪ್ರಕಾಶನ ಸಹಕಾರಿ ಮತ್ತು ಕೆ ಬಿ ಗೆಳೆಯರ ಬಳಗದ ವತಿಯಿಂದ ಕೆ ಬಿ ಸಿದ್ದಯ್ಯ ಅವರ ‘ತೊಗಲ ಮಂಟಪ’ ಖಂಡಕಾವ್ಯ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕೆ ಬಿ ಸಿದ್ದಯ್ಯ ಅವರು ಕೆ ಬಿ ಕಾವ್ಯಕ್ಕೆ ವಿಮರ್ಶಕರು ನ್ಯಾಯ ಒದಗಿಸಿಲ್ಲ. ರವಿಕುಮಾರ್ ನೀಹ ವಿಮರ್ಶೆಯಲ್ಲಿ ಸಿದ್ದಯ್ಯ ಅವರ ಕಾವ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ಕೆ ಬಿ ಸಿದ್ದಯ್ಯ ಕಾವ್ಯ ರಚನೆಯ ಆರಂಭದಲ್ಲೇ ಭಿನ್ನ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ಅನುಭವ ನೆಲೆಯಲ್ಲಿ ಹುಡುಕಾಟ ನಡೆಸುವ ಮೂಲಕ ಕುಲಮೂಲ ಭಾಷೆ ಬಳಸಿದ್ದಾರೆ. ಕೆ ಬಿ ಕಾವ್ಯ ಹಲವರನ್ನು ಪ್ರಭಾವಿಸಿದೆ” ಎಂದರು.

Advertisements

ರಂಗಕರ್ಮಿ ಕೋಟಾಗನಹಳ್ಳಿ ರಾಮಯ್ಯ ಮಾತನಾಡಿ, “ಕೆ ಬಿ ಸಿದ್ದಯ್ಯ ಕಾವ್ಯದ ಮಣೆಗಾರ. ವಿಮರ್ಶೆ ಮತ್ತು ಸ್ಥಾನಮಾನಗಳನ್ನು ಮೀರುವ ಶಕ್ತಿ ಕೆ ಬಿ ಕಾವ್ಯಕ್ಕಿದೆ” ಎಂದರು.

ಐಜಿಪಿ ರವಿಕಾಂತೇಗೌಡ ಮಾತನಾಡಿ, “ಕೆ ಬಿ ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವಂತಹ ಸಿದ್ದತೆ ಕನ್ನಡದ ಕಾವ್ಯ ವಿಮರ್ಶಕರಿಗೆ ಪ್ರಾಪ್ತವಾಗಿಲ್ಲ. ಕಾವ್ಯ ಮತ್ತು ಕವಿಯ ಜತೆ ವಿಮರ್ಶೆ ನಡೆಯಬೇಕು. ಕೆ ಬಿ ಸಿದ್ದಯ್ಯ ಲೋಕ ನೀತಿಗೆ ವಿರುದ್ಧವಾಗಿ ಯೋಚಿಸಿದವರು” ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾರ್ಮಿಕ ವಿರೋಧಿ ನೀತಿ: ವಾಡಿ ಎಸಿಸಿ ಕಾರ್ಖಾನೆ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ ಎಂ ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ್, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ಚರಕ ಆಸ್ಪತ್ರೆಯ ಡಾ ಬಸವರಾಜು, ಗಂಗರಾಜಮ್ಮ ಕೆ ಬಿ ಸಿದ್ದಯ್ಯ, ಕೊಟ್ಟಶಂಕರ್ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X