ಕೊಪ್ಪಳ ಜಿಲ್ಲೆಯ, ಕಾರಾಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸುಮಾರು 400 ಜನರ ಮನೆಗಳ ಹಕ್ಕ ಪತ್ರ ಯಾವುದು ಸಿಕ್ಕಿಲ್ಲ. ಪ್ರತೀ ನಿತ್ಯ ತಾಲೂಕು ಕಛೇರಿಗೆ ಅಲೆದಾಡುವ ಪರಿಸ್ಥಿತಿ ಇದ್ದು ಆದಷ್ಟು ಬೇಗ, ಹಕ್ಕುಪತ್ರ ಒದಗಿಸಲು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಕೊಪ್ಪಳ ಜಿಲ್ಲಾ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಕುಮಾರ ಕಾರಟಗಿ, ಯಾವುದೇ ಸರ್ಕಾರ ಬಂದರೂ ನಮ್ಮ ಸಮುದಾಯದ ಗೋಳು ಕೇಳುವವರೇ ಇಲ್ಲ. ಆದರೆ, ಈಗಿನ ಸರ್ಕಾರ ನಮ್ಮ ದಲಿತ ಸಮುದಾಯದ ಪರವಾಗಿದ್ದು, ನಮ್ಮ ಸಮುದಾಯದ ಬಹುದೊಡ್ಡ ಸಮಸ್ಯೆ ಎಂದರೆ, ಸದರಿ ಬೂದಗುಂಪಾ ಗ್ರಾಮದಲ್ಲಿ ಜಮೀನು ಸರ್ವೆ ನಂ: 134ರಲ್ಲಿ ಬರುವ 400 ಮನೆಗಳ ಹಕ್ಕು ಪತ್ರ ಅನೇಕ ವರ್ಷಗಳಿಂದ ಕೊಟ್ಟಿಲ್ಲಾ.
ಕಳೆದ 30-40 ವರ್ಷಗಳಿಂದ ದಲಿತ ಸಮುದಾಯಕ್ಕೆ ಮಾತ್ರ ಹಕ್ಕು ಪತ್ರ ಕೊಟ್ಟಿಲ್ಲಾ. ಆದರೆ, ಈ ರಾಜ್ಯ ಸರ್ಕಾರದ ಅವಧಿಯಲ್ಲಿ ನಮ್ಮ ದಲಿತ ಸಮುದಾಯಕ್ಕೆ ಅನ್ಯಾಯವಾಗದಂತೆ ತಾವು ನಮ್ಮ ಸಮುದಾಯದ ಕಾಳಜಿ ವಹಿಸಿ, ಮನೆಗಳು ಹಕ್ಕು ಪತ್ರ ಒದಗಿಸುಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.