ಈದಿನ ಸಮೀಕ್ಷೆ– ಭಾಗ 1 | ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ; ಗ್ಯಾರಂಟಿಗಳಿಗೆ ನಮ್ಮ ಓಟು – ಆದರೆ ಮೋದಿ ಸರ್ಕಾರ ಚೆಂದ ಎಂದ ಜನ

Date:

Advertisements

ಈದಿನ.ಕಾಮ್‌ ರಾಜ್ಯಾದ್ಯಂತ ಫೆಬ್ರವರಿ 15ರಿಂದ ಮಾರ್ಚ್‌ 5ರವರೆಗೆ ನಡೆಸಿದ ಬೃಹತ್‌ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶದ ಮೊದಲ ಕಂತು ಪ್ರಕಟವಾಗಿದೆ. ಸಮೀಕ್ಷೆಯಲ್ಲಿ ಹೊರಬಂದ ಅಂಶಗಳನ್ನು ಇಲ್ಲಿ ಮುಂದಿಡಲಾಗುತ್ತಿದೆ. ಅದಕ್ಕೆ ಮುಂಚೆ, ಸಮೀಕ್ಷೆಯ ವಿಧಾನದ ಕುರಿತು ಕೆಲವು ಮಾಹಿತಿಗಳು.

ಒಟ್ಟು ಸ್ಯಾಂಪಲ್‌: 52500
ಸಮೀಕ್ಷೆ ನಡೆಸಿದ ವಿಧಾನ: ಮತದಾರರ ಮನೆಗಳಲ್ಲಿ ಮುಖಾಮುಖಿ
ಸ್ಯಾಂಪ್ಲಿಂಗ್‌ ವಿಧಾನ: ವೈಜ್ಞಾನಿಕ ರ್‍ಯಾಂಡಂ ಸ್ಯಾಂಪ್ಲಿಂಗ್‌

ಅಂತಿಮವಾಗಿ ಪರಿಶೀಲಿಸಿದಾಗ ಸಮೀಕ್ಷೆಯಲ್ಲಿ ಯಾವ್ಯಾವ ಸಮುದಾಯಗಳನ್ನು ಎಷ್ಟೆಷ್ಟು ಜನರನ್ನು ಮಾತಾಡಿಸಲಾಯಿತು?
ಪುರುಷರು: 55.59% ಮತ್ತು ಮಹಿಳೆಯರು: 44.41%
WhatsApp Image 2024 03 13 at 4.47.25 PM 1

Advertisements

ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ವಯೋಮಾನವಾರು ವಿವರಗಳು ಈ ಕೆಳಗಿನಂತಿವೆ
WhatsApp Image 2024 03 13 at 4.47.25 PM 2

ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದ ವಿವಿಧ ಜಾತಿ ಸಮುದಾಯಗಳ ಪ್ರಮಾಣ ಈ ಕೆಳಗಿನಂತಿವೆ
WhatsApp Image 2024 03 13 at 4.47.23 PM 9

ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ಶೈಕ್ಷಣಿಕ ಹಿನ್ನೆಲೆವಾರು ವಿವರ ಈ ಕೆಳಗಿನಂತಿವೆ
WhatsApp Image 2024 03 13 at 4.47.25 PM 3

 ನಮ್ಮ ಸಮೀಕ್ಷೆಯಲ್ಲಿ ಉತ್ತರಿಸಿದವರ ಉದ್ಯೋಗ/ಕಸುಬಿನ ವಿವರ ಈ ಕೆಳಗಿನಂತಿವೆ.WhatsApp Image 2024 03 13 at 4.47.23 PM 1 1 e1710329553693

ಸಮೀಕ್ಷೆಯ ಆರಂಭದಲ್ಲಿ ಕಳೆದ 10 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಳ್ವಿಕೆಯ ಕುರಿತು, ಆ ಅವಧಿಯಲ್ಲಿ ಜನರನ್ನು ಬಾಧಿಸಿದ ಸಮಸ್ಯೆಗಳೇನು ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಜನರು ಯಾವ ರೀತಿಯಲ್ಲಿ ಉತ್ತರ ನೀಡಿದರು ಎಂಬುದು ಇಲ್ಲಿದೆ.

  1. ಕಳೆದ 10 ವರ್ಷಗಳಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚಾಗಿದೆ ಎಂದು ಹೇಳಿದವರೇ ಹೆಚ್ಚು
    WhatsApp Image 2024 03 13 at 4.47.24 PM
  2. ಕಳೆದ 10 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಭ್ರಷ್ಟಾಚಾರವೂ ಹೆಚ್ಚಾಗಿದೆ ಎಂದು ಕರ್ನಾಟಕದ ಜನರು ಅಭಿಪ್ರಾಯ ಪಡುತ್ತಾರೆ
    WhatsApp Image 2024 03 13 at 4.47.24 PM 3
  3. ಕರ್ನಾಟಕದ ಮುಕ್ಕಾಲು ಭಾಗದ ಜನರು ಈ 10 ವರ್ಷಗಳಲ್ಲಿ ಬೆಲೆ ಏರಿಕೆಯು ಹೆಚ್ಚಾಗಿದೆ ಎನ್ನುತ್ತಾರೆ
    WhatsApp Image 2024 03 13 at 4.47.23 PM 3
  4. ಅರ್ಧಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎನ್ನುತ್ತಾರೆ
    WhatsApp Image 2024 03 13 at 4.47.23 PM 2
  5. ಅದೇ ಸಂದರ್ಭದಲ್ಲಿ ಅರ್ಧದಷ್ಟು ಜನರು ವಿಶ್ವ ಮಟ್ಟದಲ್ಲಿ ಭಾರತದ ಇಮೇಜು ಹಿಗ್ಗಿದೆ ಎನ್ನುತ್ತಾರೆ
    WhatsApp Image 2024 03 13 at 4.47.24 PM 2
  6. ಬಡವರ ಪರವಾದ ಕಾರ್ಯಕ್ರಮಗಳ ಕುರಿತು ಮಿಶ್ರ ಪ್ರತಿಕ್ರಿಯೆ ಇದೆ
    WhatsApp Image 2024 03 13 at 4.47.23 PM 10
  7. ಸಮುದಾಯಗಳ ನಡುವಿನ ಸಾಮರಸ್ಯ ಕದಡಿದೆ ಎಂದು ಹೇಳಿದವರ ಪ್ರಮಾಣ, ಸಾಮರಸ್ಯ ಚೆನ್ನಾಗಿ ಆಗಿದೆ ಎಂದು ಹೇಳಿದವರಿಗಿಂತ ಸ್ವಲ್ಪ ಹೆಚ್ಚು
    WhatsApp Image 2024 03 13 at 4.47.25 PM 4

ಕರ್ನಾಟಕ ಸರ್ಕಾರದ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಗಳ ತುಲನೆಯನ್ನು ಕರ್ನಾಟಕದ ಮತದಾರರು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಸಮೀಕ್ಷೆಯಲ್ಲಿ ಅರಿಯುವ ಪ್ರಯತ್ನ ಮಾಡಲಾಯಿತು. ಆಗ ಅವರುಗಳು ನೀಡಿದ ಉತ್ತರಗಳು ಈ ಕೆಳಗಿನಂತಿವೆ.

  1. ಮತ ನೀಡುವಾಗ ಕರ್ನಾಟಕ ಸರ್ಕಾರವು ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕಾರಣಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಕುರಿತು ಆಲೋಚಿಸಿದ್ದೀರಾ ಎಂದಾಗ ಹೌದು ಎಂದವರು ಅರ್ಧಕ್ಕೂ ಹೆಚ್ಚು ಜನ
    WhatsApp Image 2024 03 13 at 4.47.23 PM 4
  2. ಮಹಿಳೆಯರು ಪುರುಷರಿಗಿಂತ 6% ಹೆಚ್ಚು ಈ ವಿಚಾರದಲ್ಲಿ ಕಾಂಗ್ರೆಸ್‌ ಪರವಾಗಿದ್ದಾರೆ
    WhatsApp Image 2024 03 13 at 4.47.23 PM 6
  3. ಮೋದಿ ಸರ್ಕಾರದ ಯೋಜನೆಗಳಿಗಿಂತ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನೇ ಎತ್ತಿ ಹಿಡಿದಿದ್ದು ಎರಡು ಪಟ್ಟು ಹೆಚ್ಚು ಜನರು. ಎರಡೂ ಸಹಾಯಕ ಎಂದವರು ಕಾಲು ಭಾಗಕ್ಕಿಂತ ಹೆಚ್ಚು
    WhatsApp Image 2024 03 13 at 4.47.26 PM

ಇವೆಲ್ಲಾ ಪ್ರಶ್ನೆಗಳ ನಂತರ ನರೇಂದ್ರ ಮೋದಿ ಆಡಳಿತದ ಕುರಿತಂತೆ ಪ್ರಶ್ನೆಯನ್ನು ಕೇಳಲಾಯಿತು. ಆಗ ಬಂದ ಉತ್ತರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇಲ್ಲ ಎಂಬುದನ್ನು ಗಮನಿಸಬಹುದು.

ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತ ಅತ್ಯುತ್ತಮ ಎಂದವರು ಮೂರನೇ ಒಂದು ಭಾಗ. ಹೆಚ್ಚು ಕಡಿಮೆ ಅಷ್ಟೇ ಜನ ಅದನ್ನು ಸಾಧಾರಣ ಎಂದಿದ್ದಾರೆ. ನಿರಾಶೆ ಹೊಂದಿದವರು ಶೇ.21ರಷ್ಟು ಮಾತ್ರ.
WhatsApp Image 2024 03 13 at 4.47.24 PM 4 1

ಈ ನಂತರ ಸಮೀಕ್ಷೆಯಲ್ಲಿ ಜನರು ಯಾವ ಸಂಗತಿಗಳ ಆಧಾರದ ಮೇಲೆ ಮತ ಚಲಾವಣೆ ಮಾಡಲು ಬಯಸುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. (ಇಡೀ ಸಮೀಕ್ಷೆಯ ಅಂತಿಮ ಪ್ರಶ್ನೆ ʼನಾಳೆಯೇ ಲೋಕಸಭಾ ಚುನಾವಣೆ ನಡೆದರೆ ನೀವು ಯಾರಿಗೆ ಮತ ಹಾಕುತ್ತೀರಿ?ʼ ಎಂದು ಕೇಳಿದಾಗ ಬರುವ ಉತ್ತರವೂ ಇದೇ ಒಂದೇ ಆಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.) ಅವುಗಳಲ್ಲಿ 5 ಪ್ರಶ್ನೆಗಳಿಗೆ ಕರ್ನಾಟಕದ ಮತದಾರರು ಏನು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ನೋಡಬಹುದು. ಈ ಪ್ರಶ್ನೆಗಳನ್ನು ಕೇಳಿದಾಗ ಅವರಲ್ಲಿ ಪ್ರತಿಯೊಂದು ಸಮಸ್ಯೆಯೂ ಅವರನ್ನು ಎಷ್ಟು ಪ್ರಮಾಣದಲ್ಲಿ (ಹೆಚ್ಚು, ಮಧ್ಯಮ, ಕಡಿಮೆ) ಬಾಧಿಸುತ್ತದೆ ಎಂಬವುಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಲಾಗಿತ್ತು.

  1. ಬೆಲೆ ಏರಿಕೆಯು ನಮ್ಮ ಮನಸ್ಸಿನಲ್ಲಿ ಇರುತ್ತದೆ ಎಂದು ಹೇಳಿದವರು ಮೂರನೇ ಎರಡು ಭಾಗ
    WhatsApp Image 2024 03 13 at 4.47.24 PM 1
  2. ಕರ್ನಾಟಕದ ಮತದಾರರಲ್ಲಿ ಅರ್ಧಕ್ಕೂ ಕಡಿಮೆ ಭಾಗ ಉದ್ಯೋಗ ಸೃಷ್ಟಿ ನಮ್ಮ ಮನಸ್ಸಿನಲ್ಲಿ ಇರುತ್ತದೆ ಎಂದಿದ್ದಾರೆ
    WhatsApp Image 2024 03 13 at 4.47.23 PM
  1. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಮನಸ್ಸಿನಲ್ಲಿ ಇರುತ್ತವೆ ಎಂದವರು ಅರ್ಧದಷ್ಟು ಮತದಾರರು
    WhatsApp Image 2024 03 13 at 4.47.23 PM 7
  2. ಮೂರನೇ ಒಂದಕ್ಕೂ ಸ್ವಲ್ಪ ಹೆಚ್ಚು ಮತದಾರರು ಕೇಂದ್ರದ ಯೋಜನೆಗಳು ನಮ್ಮ ಮನಸ್ಸಿನಲ್ಲೂ ಇರುತ್ತವೆ ಎಂದಿದ್ದಾರೆ
    WhatsApp Image 2024 03 13 at 4.47.23 PM 5
  3. ಶೇ.22ರಷ್ಟು ಜನರು ಮಾತ್ರ ಮತದಾನದ ವೇಳೆ ನಮಗೆ ರಾಜಕೀಯ ಪಕ್ಷಗಳು ಕೊಡುವ ಹಣ ಕೆಲಸ ಮಾಡುತ್ತದೆ ಎಂದಿದ್ದಾರೆ!
    WhatsApp Image 2024 03 13 at 4.47.25 PM 5

ಸಮಕಾಲೀನ ವಿದ್ಯಮಾನಗಳಲ್ಲಿ ಎರಡು ಸಂಗತಿಗಳನ್ನು ಮತದಾರರ ಮುಂದಿಟ್ಟು ಅವರ ಅಭಿಪ್ರಾಯಗಳನ್ನು ಪಡೆಯಲಾಯಿತು. ಈ ಪ್ರಶ್ನೆಗಳನ್ನು ಕೇಳಿದಾಗ ಅವಕ್ಕೂ ಅವರ ರಾಜಕೀಯ ನಿಲುವಿಗೂ ಸಂಬಂಧ ಕಲ್ಪಿಸಿ ಪ್ರಶ್ನೆ ಕೇಳಲಾಗಲಿಲ್ಲ ಎಂಬುದನ್ನು ಗಮನಿಸಬೇಕು. ಹಾಗೆ ಮಾಡಿದಾಗ, ನಮ್ಮ ಅನುಭವದಲ್ಲಿ, ಅವರ ರಾಜಕೀಯ ಒಲವು ಆ ನಿರ್ದಿಷ್ಟ ಸಮಸ್ಯೆಯ ಕುರಿತು ನಿಲುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

  1. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ದೆಹಲಿಯ ಹತ್ತಿರ ರೈತರು ಮಾಡುತ್ತಿರುವ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದವರು ಮೂರನೇ ಎರಡು ಭಾಗಕ್ಕೂ ಹೆಚ್ಚು!
    WhatsApp Image 2024 03 13 at 4.47.23 PM 8
  2. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆಯೇ ಎಂಬ ವಿಚಾರದಲ್ಲಿ ಕರ್ನಾಟಕದ ಮತದಾರರಲ್ಲಿ ಇಲ್ಲ ಎಂದವರಿಗಿಂತ ಹೌದು ಎಂದವರ ಸಂಖ್ಯೆ ಹೆಚ್ಚಾಗಿದೆ. ಈಗಲೂ ಮೂರನೆ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ ಜನರಿಗೆ ಇದರ ಬಗ್ಗೆ ಮಾಹಿತಿಯಿಲ್ಲ.
    WhatsApp Image 2024 03 13 at 4.47.25 PM

ಈದಿನ.ಕಾಮ್‌ನ ಸಮೀಕ್ಷೆಯ ಮುಂದಿನ ಭಾಗದಲ್ಲಿ ವಿವಿಧ ಸಂಸತ್‌ ಸದಸ್ಯರಿಗೆ ಎಷ್ಟು ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ತಿಳಿಸಲಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X