ಕಾಂಗ್ರೆಸ್‌ 5ನೇ ಪಟ್ಟಿ ಬಿಡುಗಡೆ : ಪುಲಿಕೇಶಿ ನಗರಕ್ಕೆ ಎ ಸಿ ಶ್ರೀನಿವಾಸ್‌, ಮುಳಬಾಗಿಲಿಗೆ ಮುದ್ದುಗಂಗಾಧರ್‌

Date:

Advertisements
  • ಐದನೇ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರಗಳ ಘೋಷಣೆ ಮಾಡಿದ ಕಾಂಗ್ರೆಸ್‌
  • ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡ ಕೈ ಪಡೆ

ಕಾಂಗ್ರೆಸ್‌ನ ಬಹು ನಿರೀಕ್ಷಿತ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಯಾಗಿದ್ದು, ನಾಲ್ಕು ಕ್ಷೇತ್ರಗಳ ಉಮೇದುವಾರರನ್ನು ಕೈ ಪಕ್ಷ ಘೋಷಿಸಿದೆ.

ವಿವಾದಿತ ಪುಲಿಕೇಶಿನಗರವನ್ನೂ ಒಳಗೊಂಡಂತೆ ಇತರೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕೈ ಪಡೆ ಇನ್ನೂ ನಾಲ್ಕು ಕ್ಷೇತ್ರಗಳ ಉಮೇದುವಾರಿಕೆಯನ್ನು ಕುತೂಹಲದಲ್ಲಿಟ್ಟಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಪ್ರಭಲ ಅಭ್ಯರ್ಥಿ ಹಾಕುವುದಾಗಿ ಹೇಳಿದ್ದ ಕಾಂಗ್ರೆಸ್‌ ಇಲ್ಲಿ ಹೊಸ ಮುಖ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌ ಅವರನ್ನು ಕಣಕ್ಕಿಳಿಸಿದೆ.

Advertisements

ಇದಕ್ಕೂ ಮೊದಲು ಈ ಕ್ಷೇತ್ರದಿಂದ ಮೊಹ್ಮದ್‌ ಯೂಸೂಪ್‌ ಸುರಾನಾ ಅವರನ್ನು ಕಣಕ್ಕಿಳಿಸಿತು. ಈಗ ಅವರನ್ನು ಬದಲಾಯಿಸಿ ಹೊಸ ಅಭ್ಯರ್ಥಿ ಯಾಸಿರ್‌ಗೆ ಅವಕಾಶ ನೀಡಿದೆ. ನಾಲ್ಕನೇ ಪಟ್ಟಿ

ಪುಲಿಕೇಶಿನಗರಕ್ಕೆ ನೆಡೆದಿದ್ದ ಟಿಕೆಟ್‌ ಗುದ್ದಾಟದಲ್ಲಿ ಅಖಂಡ ಶ್ರೀನಿವಾಸ್‌ ಮೂರ್ತಿ ಮೀರಿಸಿ ಟಿಕೆಟ್‌ ಪಡೆಯುತ್ತಾರೆಂದು ಬಿಂಬಿತವಾಗಿದ್ದ ಮಾಜಿ ಮೇಯರ್‌ ಸಂಪತ್‌ ಕುಮಾರ್‌ ಅವರಿಗೂ ಟಿಕೆಟ್‌ ತಪ್ಪಿದ್ದು, ಈ ಹಿಂದೆ ಮಹದೇವಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎ ಸಿ ಶ್ರೀನಿವಾಸ್‌ಗೆ ಇಲ್ಲಿನ ಟಿಕೆಟ್‌ ನೀಡಲಾಗಿದೆ.

ಹಾಗೆಯೇ ಎಲ್ಲರ ಕುತೂಹಲ ಕಾಯಿಸಿದ್ದ ಮುಳಬಾಗಿಲು ಕ್ಷೇತ್ರಕ್ಕೂ ಕಾಂಗ್ರೆಸ್‌ ಹೊಸ ಮುಖ, ಪಕ್ಷದ ಕಾರ್ಯಕರ್ತ ಡಾ. ಮುದ್ದುಗಂಗಾಧರ್‌ ಅವರನ್ನು ಕಣಕ್ಕಿಳಿಸಿದೆ.ನಾಲ್ಕನೇ ಪಟ್ಟಿ

ಮುದ್ದುಗಂಗಾಧರ್‌ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಪ್ತ, ಸಂವಿಧಾನ ಕರಡು ಸಮಿತಿ ಸದಸ್ಯರಾಗಿದ್ದ ಟಿ ಚೆನ್ನಯ್ಯನವರ ಮೊಮ್ಮಗ.

ಉಳಿದಂತೆ ಕೆ ಆರ್‌ ಪುರಕ್ಕೆ ಡಿ ಕೆ ಮೋಹನ್‌ ಅವರನ್ನು ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X