ಅಮೆರಿಕ | ಮಗನಿಗೆ ಅಚ್ಚೆ ಹಾಕಿದ್ದಕ್ಕೆ ದೇವಸ್ಥಾನದ ವಿರುದ್ಧ 10 ಲಕ್ಷ ಡಾಲರ್ ದಾವೆ

Date:

Advertisements

ತಮ್ಮ 11 ವರ್ಷದ ಮಗನಿಗೆ ಕಬ್ಬಿಣದ ಕಾದ ಸಲಾಕೆಯಿಂದ ಅಚ್ಚೆ ಹಾಕಿದ ದೇವಸ್ಥಾನದ ಮಂಡಳಿಯ ವಿರುದ್ಧ ಭಾರತೀಯ ಮೂಲದ ವ್ಯಕ್ತಿಯೊಬ್ಬರು10 ಲಕ್ಷ ಡಾಲರ್ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಘಟನೆ ಅಮೆರಿಕ ದ ಹ್ಯೂಸ್ಟನ್‌ ನಗರದಲ್ಲಿ ನಡೆದಿದೆ.

ಫೋರ್ಟ್ ಬೆಂಡ್‌ ಕೌಂಟಿ ನಗರ ವಾಸಿಯಾದ ವಿಜಯ್‌ ಚೆರುವು ಅವರು, ತಮ್ಮ ಪುತ್ರನಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಟಾಕ್ಸಸ್‌ನ ಶುಗರ್‌ಲ್ಯಾಂಡ್‌ನ ಅಷ್ಟಲಕ್ಷ್ಮಿ ಹಿಂದೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಮಗನ ಅನುಮತಿಯನ್ನು ಪಡೆಯದೆ ಕಾದ ಕಬ್ಬಿಣದ ಸಲಾಕೆಯಿಂದ ಅಚ್ಚೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಈ ಅಚ್ಚೆಯಿಂದಾಗಿ ತಮ್ಮ ಮಗ ತುಂಬ ನೋವಿನಿಂದ ಬಳಲುತ್ತಿದ್ದು, ಶಾಶ್ವತ ಕಲೆ ಉಂಟಾಗಿದೆ ಎಂದು ಕೋರ್ಟಿನಲ್ಲಿ ಸಲ್ಲಿಸಿರುವ ದಾವೆಯಲ್ಲಿ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ

ಈ ನಷ್ಟವನ್ನು ತುಂಬಿಕೊಡುವ ಸಲುವಾಗಿ ದೇವಸ್ಥಾನ ಹಾಗೂ ಅದರ ಪೋಷಕ ಮಂಡಳಿಯ ವಿರುದ್ಧ ಚೆರುವು ಅವರು ನ್ಯಾಯಾಲಯದಲ್ಲಿ 10 ಲಕ್ಷ ಡಾಲರ್ ದಾವೆ ಹೂಡಿದ್ದಾರೆ.

“ನನಗೆ ಇದರಿಂದ ಆಘಾತ ಉಂಟಾಯಿತು. ಈ ಘಟನೆಯನ್ನು ಹೇಗೆ ನಿರ್ವಹಿಸುವುದೆಂದು ನನಗೆ ಗೊತ್ತಿರಲಿಲ್ಲ. ನನ್ನ ಮೊದಲ ಕಾಳಜಿ ನನ್ನ ಮಗನ ಆರೋಗ್ಯವನ್ನು ನೋಡಿಕೊಳ್ಳುವುದಾಗಿದೆ” ಎಂದು ಚೆರುವು ತಿಳಿಸಿದ್ದಾರೆ.

ಅಚ್ಚೆ ಹಾಕಿದ್ದರಿಂದ ಬಾಲಕನ ಎರಡು ಕೈಗಳಿಗೆ ತೀವ್ರ ಹಾನಿಯಾಗಿ ಶಾಶ್ವತ ಕಲೆಯುಂಟಾಗಿದೆ. ನಂತರದ ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಬಾಲಕ ತಮ್ಮ ತಾಯಿಯ ಜೊತೆ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರಿಗೂ ತಿಳಿಸದಂತೆ ಅಚ್ಚೆ ಹಾಕಲಾಗಿದೆ ಎಂದು ಚೆರುವು ಅವರ ವಕೀಲರು ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X