ಐಪಿಎಲ್‌ 2024 | ‘200+ ಸಾಧ್ಯವಿತ್ತು’: ಆರ್‌ಸಿಬಿಯನ್ನು ಟ್ರೋಲ್‌ ಮಾಡಿತಾ ಆರ್‌ಆರ್‌?

Date:

Advertisements

ಐಪಿಎಲ್‌-2024ರ ಟೂರ್ನಿಯಲ್ಲಿ ಶನಿವಾರ ನಡೆದ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 113 ರನ್ ಗಳಿಸಿದರು. ಆದರೂ, ಆರ್‌ಆರ್‌ ಎದುರು ಆರ್‌ಸಿಬಿ ಮಂಡಿಯೂರಿ ಸೋಲುಂಡಿತು. ಶನಿವಾರದ ಪಂದ್ಯದಲ್ಲಿ ಉಭಯ ತಂಡಗಳು ಒಂದೊಂದು ಶತಕಗಳನ್ನು ಗಳಿಸಿದವು. ಕೊಹ್ಲಿ 113ರನ್‌ ಗಳಿಸಿದರೆ,  ಆರ್‌ಆರ್‌ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ 100 ರನ್‌ಗಳನ್ನು ಗಳಿಸಿದರು. ಇದೆಲ್ಲದರ ನಡುವೆ, ಮೊದಲು ಇನ್ನಿಂಗ್ಸ್‌ ಶುರು ಮಾಡಿದ ಆರ್‌ಸಿಬಿ 200+ ರನ್‌ಗಳನ್ನು ಗಳಿಸಬಹುದೆಂದು ಭಾವಿಸಿದ್ದಾಗಿ ಆರ್‌ಆರ್‌ ಹೇಳಿದೆ. ಆದರೆ, ಆರ್‌ಸಿಬಿ ಕೇವಲ 183 ರನ್‌ಗಳನ್ನು ಮಾತ್ರವೇ ಕಲೆ ಹಾಕಿತು.

ಸಾಮಾಜಿಕ ಜಾಲತಾಣದಲ್ಲಿ ರನ್‌ಗಳ ಬಗ್ಗೆ ಪೋಸ್ಟ್‌ ಮಾಡಿರುವ ಆರ್‌ಆರ್‌, “200+ ರನ್‌ಗಳು ಸಾಧ್ಯವಿರುವ ದಿನದಲ್ಲಿ 184 ರನ್‌ಗಳು ಆರಾಮದಾಯ” ಎಂದಿದೆ. ಅದೂ, ಆರ್‌ಆರ್‌ ಬ್ಯಾಟಿಂಗ್‌ ಆರಂಭಿಸುವ ಮುನ್ನವೇ ಈ ಪೋಸ್ಟ್‌ ಹಾಕಲಾಗಿದೆ. ಆ ಮೂಲಕ ಆರ್‌ಸಿಬಿಯನ್ನು ಆರ್‌ಆರ್‌ ಟ್ರೋಲ್ ಮಾಡಲು ಯತ್ನಿಸಿದೆ ಎಂದು ಹಲವರು ಭಾವಿಸಿದ್ದಾರೆ.

 

ಪಂದ್ಯದ ನಂತರ ಮಾತನಾಡಿದ ಕೊಹ್ಲಿ, “ಪಿಚ್ ಸಮತಟ್ಟಾಗಿರುವ ಇರುವಂತೆ ಕಾಣುತ್ತದೆ. ಆದರೆ, ಅದು ಆ ರೀತಿಯಲ್ಲಿಲ್ಲ. ಆದ್ದರಿಂದ, ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಲು ಕಷ್ಟವಾಯಿತು” ಎಂದಿದ್ದಾರೆ.

Advertisements

“ಪಿಚ್‌ನಲ್ಲಿ ಚೆಂಡಿನ ವೇಗ ಬಹಳ ಬೇಗನೆ ಬದಲಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ಗುರಿ ಆರಂಭದಲ್ಲಿ 190, 195 ಆಗಿತ್ತು. ಆದರೆ, ಪಿಚ್‌ನಲ್ಲಿ ಅದು ನಿಧಾನವಾಯಿತು. ಆದರೂ, 180-185 ರನ್‌ಗಳನ್ನು ನಾವು ಕಲೆಹಾಕಿದ್ದೇವೆ. ಇದು ಈ ಪಿಚ್‌ನಲ್ಲಿ ಅತ್ಯಂತ ಪರಿಣಾಮಕಾರಿ ಮೊತ್ತವೆಂದು ನಾನು ಭಾವಿಸುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಆರ್‌ಆರ್‌ ತಂಡವು ಐಪಿಎಲ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ದೋಷ: ಮತ್ತೊಂದು ಏರ್‌ ಇಂಡಿಯಾ ವಿಮಾನ ರದ್ದು, ವಾರದಲ್ಲೇ ಮೂರನೇ ಘಟನೆ

110 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮುಂಬೈನಿಂದ ಜೋಧ್‌ಪುರಕ್ಕೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವನ್ನು...

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

ಹಿಂದೂ ಧರ್ಮ ಪ್ರಚಾರಕ ಪ್ರೇಮಾನಂದರಿಗೆ ತನ್ನ ಕಿಡ್ನಿ ದಾನ ಮಾಡಲು ಮುಂದಾದ ಮುಸ್ಲಿಂ ಯುವಕ

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು...

2025ರ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರ

2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ....

Download Eedina App Android / iOS

X