ಮತ್ತೆ ಟ್ರ್ಯಾಕ್‌ಗೆ ಮರಳುತ್ತಿವೆ ಗೋದಿ ಮೀಡಿಯಾಗಳು: ದ್ವೇಷಿ ನಿರೂಪಕರನ್ನ ಹೊರಗಟ್ಟಿದ ‘ಜೀ ನ್ಯೂಸ್’; ಮೋದಿಯನ್ನು ಪ್ರಶ್ನಿಸುತ್ತಿರುವ ‘ಆಜ್‌ತಕ್‌’

Date:

Advertisements

ಲೋಕಸಭಾ ಚುನಾವಣೆಯ ನಡುವೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಮುಗಿದಿರುವ ಮೂರು ಹಂತದ ಮತದಾನವು ಮೋದಿ ಮತ್ತೆ ಪ್ರಧಾನಿ ಆಗಲಾರರು, ಬಿಜೆಪಿ ಅಧಿಕಾರ ಪಡೆಯದು ಎಂಬುದನ್ನು ಸೂಚಿಸುತ್ತಿವೆ. ಈ ಸೂಚನೆಯ ಬೆನ್ನಲ್ಲೇ ಕೆಲ ಮಾಧ್ಯಮಗಳು ತಮ್ಮ ವರಸೆ ಬದಲಿಸುತ್ತಿವೆ. ಮತ್ತೆ, ಪತ್ರಿಕಾ ನೈತಿಕತೆ ಎಡೆಗೆ ಒರಳಲು ಆರಂಭಿಸಿವೆ. ಕಳೆದ 10 ವರ್ಷಗಳಿಂದ ಮೋದಿ ಮತ್ತು ಬಿಜೆಪಿಗೆ ಶರಣಾಗಿದ್ದ ಮಾಧ್ಯಮಗಳು ಈಗ ಮತ್ತೆ ತಲೆ ಎತ್ತಲು ಆರಂಭಿಸಿವೆ. ಅದರಲ್ಲೂ, ಗೋದಿ ಮೀಡಿಯಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಆಜ್‌ತಕ್ ಮತ್ತು ಜೀ ನ್ಯೂಸ್‌ಗಳ ಅಚ್ಚರಿಯನ್ನು ಮೂಡಿಸಿವೆ. ಜೀನ್ಯೂಸ್‌ ತನ್ನ ಇಬ್ಬರು ದೈತ್ಯ ದ್ವೇಷದ ನಿರೂಪಕರಾದ ದೀಪಕ್ ಚೌರಾಸಿಯಾ ಮತ್ತು ಪ್ರದೀಪ್ ಭಂಡಾರಿಯನ್ನು ಹೊರಗಟ್ಟಿದೆ.

ಮೋದಿ ಆಡಳಿತದಲ್ಲಿ ಮಾಧ್ಯಮಗಳ ಬಿಜೆಪಿಗೆ ಶರಣಾಗಿ, ತಮ್ಮ ಪೆನ್ನು-ಮೈಕುಗಳಿಗೆ ಕೇಸರಿ ಬಣ್ಣ ಬಳಿದುಕೊಂಡಿದ್ದವು. ಸದಾ ಮೋದಿ ಭಜನೆ ಮಾಡುತ್ತಿದ್ದವು. ಮೋದಿ ಇಲಿ ಹೋಯಿತು ಎಂದರೆ, ಈ ಮಾಧ್ಯಮಗಳು ಹುಲಿಯೇ ಹೋಯಿತು ಎಂಬಂತೆ ಬಿಂಬಿಸಿ, ಅಬ್ಬರಿಸುತ್ತಿದ್ದವು. ಮೋದಿ ಹೆಸರನ್ನು ಪ್ರವರ್ಧಮಾನಕ್ಕೆ ತಂದು, ಮೋದಿ ಇಮೇಜ್‌ಅನ್ನು ದೈತ್ಯವಾಗಿ ಕಟ್ಟಿದ್ದವು. ಅದರಲ್ಲಿ, ಈ ಜೀ ನ್ಯೂಸ್ ಮತ್ತು ಆಜ್‌ತಕ್‌ನ ಪಾತ್ರ ದೊಡ್ಡದೇ ಆಗಿತ್ತು.

ಈ ಎರಡೂ ಮಾಧ್ಯಮಗಳೂ ಸೇರಿದಂತೆ, ಪ್ರಮುಖ ಗೋದಿ ಮಾಧ್ಯಮಗಳು, 2020ರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿಗೆ ಆರಂಭದಲ್ಲಿ ಚೀನಾ ಕಾರಣವೆಂದು ಚೀನಾ ಮೇಲೆ ಯುದ್ಧೋಪಾದಿಯಲ್ಲಿ ದಾಳಿ ನಡೆಸಿದ್ದವು. ಬಳಿಕ, ತಬ್ಲಿಗಿಗಳೇ ಕಾರಣವೆಂದು ಮುಸ್ಲಿಮರನ್ನು ದೂಷಿಸಿದ್ದವು. ರೈತ ಹೋರಾಟದ ಸಮಯದಲ್ಲಿ ಅನ್ನ ಹಾಕುವ ರೈತರನ್ನೇ ‘ಖಲಿಸ್ತಾನಿಗಳು, ಭಯೋತ್ಪದಕರು’ ಎಂಬ ಹಣೆಪಟ್ಟಿ ಕಟ್ಟಿ ರೈತರ ವಿರುದ್ಧವೇ ದೇಶಾದ್ಯಂತ ದ್ವೇಷ ಸೃಷ್ಟಿಸಿದ್ದವು.

Advertisements

ಮೋದಿಯ ರಫೇಲ್ ಹಗರಣ, ಕೃಷಿ ವಿರೋಧಿ ನೀತಿಗಳು, ರೈಲ್ವೆ-ವಿಮಾನ ಖಾಸಗೀಕರಣ, ನೋಟ್‌ ಬ್ಯಾನ್‌, ಸಿಎಎಯಂತಹ ಜನವಿರೋಧಿ ನೀತಿಗಳನ್ನು ಸಮರ್ಥಿಸಿಕೊಂಡು, ಪ್ರಶ್ನಿಸಿದವರನ್ನೇ ದೇಶದ್ರೋಹಿಗಳೆಂದು ಪಟ್ಟಕಟ್ಟುವಲ್ಲಿ ಜೀ, ಆಜ್‌ತಕ್ ಮಾಧ್ಯಮಗಳು ಯಶಸ್ವಿಯಾಗಿದ್ದವು.

ಮಾತ್ರವಲ್ಲದೆ, ಮೋದಿ ಪ್ರಶ್ನಾತೀತ ನಾಯಕ, ಚೌಕಿದಾರ್, ಅಭಿವೃದ್ಧಿಯ ಹರಿಕಾರ, ಪಾಕ್‌-ಚೀನಾಗಳ ಪಾಲಿಗೆ ದುಸ್ವಪ್ನ, ವಿಶ್ವಗುರು, ಭಾರತೀಯರಿಗಾಗಿ ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸಿದ ಮಹಾನ್ ವೀರ ಎಂದೆಲ್ಲ ಬಲೂನಿನಲ್ಲಿ ಗಾಳಿ ತುಂಬಿದಂತೆ, ಮೋದಿ ಇಮೆಜನ್ನ ಉಬ್ಬಿಸಿದ್ದವು.

ಅದರಲ್ಲೂ, ಜೀ ವಾಹಿನಿಯಲ್ಲಿ ಪ್ರದೀಪ್ ಭಂಡಾರಿ ಮತ್ತು ದೀಪಕ್ ಚೌರಾಸಿ ಅವರು ‘ಜನ್ ಕಿ ಬಾತ್’, ‘ತಾಲ್ ತೊಕ್ಕೆ’, ‘ಅಪ್ನಾ ಸವಾಲ್’, ‘24ಕಿ ಸರ್ಕಾರ್’ ಹೆಸರಿನಲ್ಲಿ ಪ್ರೈಮ್‌ ಟೈಮ್ ಕಾರ್ಯಕ್ರಮಗಳ ಮೂಲಕ ಮೋದಿ ಬಗ್ಗೆ ಕೊಂಡಾಡುವ ಅಥವಾ ಕಾಂಗ್ರೆಸ್‌ ಮತ್ತು ಮುಸ್ಲಿಮರ ದ್ವೇಷದ ಬಿತ್ತುವ ಕಾರ್ಯಕ್ರಮಗಳನ್ನೇ ನಡೆಸುತ್ತಿದ್ದರು.

ಅಂತಹ, ದ್ವೇಷ ಬಿತ್ತುವ ಮಹಾನ್ ನಿರೂಪಕರಗಳನ್ನು ಇದೀಗ, ಜೀ ವಾಹಿನಿ ದಿಢೀರ್ ಬೆಳವಣಿಗೆಯಲ್ಲಿ ಸಂಸ್ಥೆಯಿಂದ ಹೊರಹಾಕಿದೆ. ಮಾಧ್ಯಮಗಳಿಂದಲೇ ವಿಶ್ವಗುರುವಾಗಿದ್ದ ಮೋದಿ ಪರವಾಗಿದ್ದ ಹಲವಾರು ಪತ್ರಕರ್ತರನ್ನು ಮನೆಗೆ ಕಳಿಸಲು ಜೀ ನ್ಯೂಸ್ ಮುಂದಾಗಿದೆ. ಅಲ್ಲದೆ, ಬಿಜೆಪಿ ಮತ್ತು ಮೋದಿ ಪರವಾದ ಎಲ್ಲ ಪ್ರಸಾರಗಳನ್ನು ನಿರ್ಬಂಧಿಸಿದೆ. ನೆಲದ ವಾಸ್ತವತೆಯನ್ನು ತೋರಿಸಲು ಪ್ರಾರಂಭಿಸಿದೆ.

ಅದೇ ರೀತಿ, ಆಜ್‌ ತಕ್‌ನಲ್ಲಿ ಪ್ರೈಮ್‌ಟೈಮ್ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ, ಕೋಮು ದ್ವೇಷ ಬಿತ್ತುವ ಮೂಲಕ, ಮೋದಿ ಭಜನೆ ಮಾಡುತ್ತಿದ್ದ ಸುದೀರ್ ಚೌದರಿ ಮತ್ತು ಅಜಂನಾ ಓಂ ಕಷ್ಯಪ್‌ ಅವರು ಈಗ ದ್ವೇಷ ವಿಷಯದಲ್ಲಿ ಮೌನವಾಗಿದ್ದಾರೆ. ಮೋದಿಯೇ ಖುದ್ದು ದ್ವೇಷದ ಭಾಷಣ ಮಾಡಿದರೂ, ಅದರ ಬಗ್ಗೆ ಚರ್ಚೆ ಮಾಡುವುದನ್ನೂ ನಿಲ್ಲಿಸಿದ್ದಾರೆ.

ಬದಲಾಗಿ, ಸುದೀರ್ ಚೌದರಿ ಅವರು ತಮ್ಮ ಅದೇ ಪ್ರೈಮ್‌ಟೈಮ್‌ ಕಾರ್ಯಕ್ರಮದಲ್ಲಿ ಮೋದಿಯ ದ್ವೇಷ ಭಾಷಣ ಮತ್ತು ಸುಳ್ಳುಗಳ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುತ್ತಿದ್ದಾರೆ. ಮೋದಿ ಹೇಳಿದ ಸುಳ್ಳಿನ ಹಿಂದಿನ ಸತ್ಯವೇನು? ಅಸಲಿಯತ್ತೇನು? ಎಂಬುದನ್ನು ಬಿಚ್ಚಿಡುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಪ್ರಶ್ನಿಸುತ್ತಿದ್ದಾರೆ.

ಅಂಜನಾ ಕಷ್ಯಪ್ ಅವರು ಗ್ರೌಂಡ್ ರಿಪೋರ್ಟ್‌ ಮಾಡುತ್ತಿದ್ದಾರೆ. ದೇಶದ ಜನರು ವಾಸ್ತವವಾಗಿ ಏನು ಹೇಳುತ್ತಿದ್ದಾರೆ ಎಂಬುದನ್ನು ವರದಿ ಮಾಡಿ, ಪ್ರಸಾರ ಮಾಡುತ್ತಿದ್ದಾರೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ.

ಈ ಮೂಲಕ ಆಜ್ ತಕ್ ಮತ್ತು ಜೀ ನ್ಯೂಸ್‌ – ಎರಡು ಅಗ್ರ ಗೋದಿ ಮೀಡಿಯಾಗಳು ಮರಳಿ ಟ್ರ್ಯಾಕ್‌ಗೆ ಬರುತ್ತಿವೆ. ಇದಕ್ಕೆ, ಮೂಲ ಕಾರಣ, ಬಿಜೆಪಿಯ ಹೀನಾಯ ಸೋಲನ್ನು ಈ ಮಾಧ್ಯಮಗಳು ಗ್ರಹಿಸಿವೆ. ಹೀಗಾಗಿಯೇ, ಚುನಾವಣೆ ಮುಗಿಯುವ ವೇಳೆಗೆ ಗೋದಿ ಮೀಡಿಯಾ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಈ ಎರಡೂ ಚಾನೆಲ್‌ಗಳು ಯತ್ನಿಸುತ್ತಿವೆ. ಇನ್ನು, ಕೆಲವೇ ದಿನಗಳಲ್ಲಿ ಉಳಿದ ಮಾಧ್ಯಮಗಳೂ ಟ್ರ್ಯಾಕ್‌ಗೆ ಮರಳುವ ಸಾಧ್ಯತೆಗಳಿವೆ. ಇದು, ಇವತ್ತಿನ ಪರಿಸ್ಥಿತಿಯಲ್ಲಿ ಉತ್ತಮ ಬೆಳೆವಣಿಗೆಯೇ ಆಗಿದೆ.

ಏನೇ ಇರಲಿ, ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆದಾಗಲೇ ಬಿಜೆಪಿ ಸೋಲು ಖಚಿತ ಎಂಬುದು ಬಹುತೇಕ ಸ್ಪಷ್ಟವಾಗಿತ್ತು. 2ನೇ ಮತ್ತು 3ನೇ ಹಂತದ ಮತದಾನವು ಬಿಜೆಪಿ ಸೋಲುತ್ತದೆ ಎಂಬ ಸಂದೇಶವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಜೆಪಿ ಸೋಲು, ವಿಪಕ್ಷಗಳ ಮೈತ್ರಿ ಅಧಿಕಾರಕ್ಕೆ ಬಂದರೆ, ತಮ್ಮ ಪತ್ರಿಕಾ ಧೋರಣೆ ಪ್ರಶ್ನೆಗೆ ಸಿಲುಕುತ್ತದೆ ಎಂಬುದನ್ನು ಅರಿತಿರುವ ಮಾಧ್ಯಮಗಳು ಈಗಲೇ ತಮ್ಮ ವರಸೆಗಳನ್ನು ಬದಲಿಸುತ್ತಿವೆ. ಆದರೆ, ಜೂನ್ 4ರಂದು ಫಲಿತಾಂಶ ಏನಾಗಲಿದೆ. ನಂತರದಲ್ಲಿ ಈ ಮಾಧ್ಯಮಗಳ ವರಸೆ ಹೇಗಿರಲಿದೆ. ಕಾದು ನೋಡೋಣ…

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X