ತುಮಕೂರು | ಜಮೀನು ಮಾರಾಟ ನಿಲ್ಲಿಸಿ ಒಕ್ಕಲುತನ ಉಳಿಸಿ: ಆದಿ ಚುಂಚನಗಿರಿ ಶ್ರೀ ಕರೆ

Date:

Advertisements

ಗ್ರಾಮ ಹಾಗೂ ಕೃಷಿ ತೊರೆದು ನಗರದತ್ತ ಹೋಗುವ ಬದಲು ನಮ್ಮ ಒಕ್ಕಲುತನ ಉಳಿಸಿ ಬೆಳೆಸಿ ಧರ್ಮಾಚರಣೆ ಜೊತೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮೊದಲು ಜಮೀನು ಮಾರುವ ಪ್ರವೃತ್ತಿ ಬಿಡಬೇಕು ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಗುಬ್ಬಿ ತಾಲೂಕಿನ ಕಸಬ ಹೋಬಳಿ ಎಸ್ ಕೊಡಗೀಹಳ್ಳಿ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿದರು.

“ಜಮೀನು ಮಾರಿ ನಗರ ಸೇರಿದ ಬಳಿಕ ಕೆಲ ಹಳ್ಳಿಗಳು ವೃದ್ಧಾಶ್ರಮದಂತೆ ಕಾಣುತ್ತಿವೆ. ಕೃಷಿ ನಡೆಸಲು ಹಿಂದೇಟು ಹಾಕುವ ಯುವ ಸಮುದಾಯ ಆಧುನಿಕತೆಗೆ ಜೋತು ಬಿದ್ದಿವೆ” ಎಂದರು.

Advertisements

“ಗ್ರಾಮಗಳಿಂದ ಆರಂಭವಾದ ಕೃಷಿ ದೇಶದ ಆರ್ಥಿಕ ಸುಸ್ಥಿತಿಗೆ ಕಾರಣವಾಗಿದೆ ಎಂಬುದು ಯುವ ಸಮುದಾಯ ಮನಗಾಣಬೇಕಿದೆ. ಕೃಷಿಯೇ ಅತ್ಯುತ್ತಮ ಉದ್ಯೋಗ ಎನಿಸುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಜಮೀನು ಮಾರುವ ಚಿಂತನೆ ಬಿಟ್ಟು ಗ್ರಾಮೀಣ ಭಾಗದಲ್ಲಿ ಯುವಕರು ಉದ್ಯೋಗ ಸೃಷ್ಠಿ ಮಾಡಬೇಕು” ಎಂದು ಕರೆ ನೀಡಿದರು.

“ಕೃಷಿ ಶಿಕ್ಷಣ ಅವಶ್ಯವಾಗಿ ಬೇಕಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೂಡಾ ಬಂದೇ ಬರುತ್ತದೆ. ಈ ನಿಟ್ಟಿನಲ್ಲಿ ಒಕ್ಕಲಿಗರು ಒಕ್ಕಲುತನ ಸಂಪ್ರದಾಯಬದ್ಧವಾಗಿ ಮುನ್ನಡೆಸುವುದೂ ಕೂಡಾ ಒಂದು ಧರ್ಮದ ಕೆಲಸ” ಎಂದರು.

“ಪ್ರತಿಯೊಂದು ಜೀವಿಯಲ್ಲಿ ಕಾಣುವ ನಾಲ್ಕು ಅವಶ್ಯವಾದ ಆಹಾರ, ನಿದ್ರೆ, ಭಯ ಹಾಗೂ ಮೈಥುನ ನಿಯಮಿತವಾಗಿ ಪ್ರಕ್ರಿಯೆ ನಡೆಯುತ್ತದೆ. ಹಾಗೆಯೇ ಬದುಕು ಕಟ್ಟಿಕೊಳ್ಳಲು ಅವಶ್ಯ ಉದ್ಯೋಗ ಆಯ್ಕೆ ಮಾಡಬೇಕಿದೆ. ಮೊದಲು ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಇಂದಿಗೂ ಶೇ.70ರಷ್ಟು ಕೃಷಿಕ ವರ್ಗವಿದೆ. ಮನುಷ್ಯ ಜನ್ಮ ಮುಕ್ತಿಗಾಗಿ ಎಂಬ ನಂಬಿಕೆ ನಮ್ಮಲ್ಲಿದೆ. ಆ ಕಾರಣ ಮನುಷ್ಯತ್ವದ ಜೀವನ ಸಾಗಿಸಲು ಧಾರ್ಮಿಕಾಚರಣೆ ನಡೆಸಿ ನೆಮ್ಮದಿ ಕಾಣಬೇಕು” ಎಂದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, “ಸಂಬಂಧಕ್ಕೆ ಬೆಲೆ ಇಲ್ಲವಾದ ಈ ಕಾಲದಲ್ಲಿ ಅರ್ಧ ದಿನದ ಮದುವೆ ನಡೆಯುತ್ತಿದೆ. ಆದರೂ ಆಡಂಬರ ಮಾತ್ರ ಎಂದಿಗೂ ಬಿಟ್ಟಿಲ್ಲ. ಪ್ರತಿಷ್ಠೆ ಪ್ರದರ್ಶನ ಮಾಡುವ ಮದುವೆಗಳು ಎಂದಿಗೂ ಸರಳ ವಿವಾಹ ಆಗಲಾರದು. ಕಲ್ಯಾಣ ಮಂಟಪ ಗ್ರಾಮದಲ್ಲಿ ಉಪಯೋಗವಾಗಲಿ ಎಂಬ ಹಾರೈಕೆ ನಮ್ಮದು. ಆಧುನಿಕತೆ ಹಿಂದೆ ಓಡುವ ನಮ್ಮ ಇಂದಿನ ಸಮಾಜ ಕೇವಲ ತೋರಿಕೆಗೆ ಸೀಮಿತವಾಗುತ್ತದೆ. ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮಗಳಲ್ಲಿ ನಿರಂತರ ನಡೆಯಲಿ” ಎಂದು ಹಾರೈಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ; ಪ್ರಣಾಳಿಕೆ ಬಿಡುಗಡೆ

ವೇದಿಕೆಯಲ್ಲಿ ಮಂಗಳನಾಥ ಸ್ವಾಮೀಜಿ, ಮಾಜಿ ಶಾಸಕ ಎಚ್ ನಿಂಗಪ್ಪ, ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಯೋಜನಾಧಿಕಾರಿ ರಾಜೇಶ್, ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ ಸಮಿತಿಯ ಎ ಗೋವಿಂದರಾಜು, ಕೆ ಎನ್ ವೆಂಕಟೇಗೌಡ, ಮುಖಂಡರಾದ ಗಿರೀಶ್, ಬಸವರಾಜು, ಪ್ರತಾಪ್, ವೆಂಕಟೇಶ್ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X