ಎಂಡಿಹೆಚ್, ಎವರೆಸ್ಟ್ ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆಯಾಗಿಲ್ಲ: ಎಫ್ಎಸ್ಎಸ್ಎಐ

Date:

Advertisements

ಎಂಡಿಎಚ್ ಮತ್ತು ಎವರೆಸ್ಟ್‌ನ ಸಾಂಬಾರ್ ಪದಾರ್ಥಗಳ ಮಾದರಿಗಳಲ್ಲಿ ಹಾನಿಕಾರಕ ಎಥಿಲೀನ್ ಆಕ್ಸೈಡ್‌ನ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು 28 ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ತಿಳಿಸಿದೆ.

ಎಫ್‌ಎಸ್‌ಎಸ್‌ಎಐ ವರದಿಯ ಪ್ರಕಾರ, ಆರು ಇತರ ಪ್ರಯೋಗಾಲಯಗಳ ವರದಿಗಳು ಇನ್ನೂ ಬಾಕಿ ಉಳಿದಿವೆ.

ಎಂಡಿಎಚ್ ಮತ್ತು ಎವರೆಸ್ಟ್‌ ಮಸಾಲಾ ಪದಾರ್ಥಗಳನ್ನು ನಿಷೇಧಿಸಿದ ನಂತರ ಗುಣಮಟ್ಟದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಎಂಡಿಎಚ್ ಮತ್ತು ಎವರೆಸ್ಟ್‌ ಸೇರಿದಂತೆ ಎಲ್ಲ ಬ್ರಾಂಡ್‌ಗಳ ಪುಡಿ ರೂಪದಲ್ಲಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳಲು ಎಫ್‌ಎಸ್‌ಎಸ್‌ಎಐ ಪ್ರಾರಂಭಿಸಿತು.

Advertisements

ಎಂಡಿಹೆಚ್‌ನ ಮದ್ರಾಸ್ ಕರಿ ಪೌಡರ್, ಎವರೆಸ್ಟ್ ಫಿಶ್ ಕರಿ ಮಸಾಲಾ, ಎಂಡಿಹೆಚ್ ಸಾಂಬಾರ್ ಮಸಾಲಾ ಮಿಶ್ರಿತ ಮಸಾಲಾ ಪುಡಿಯನ್ನು ಮಾದರಿಗೆ ತೆಗೆದುಕೊಳ್ಳಲಾಗಿತ್ತು.

ಮೂಲಗಳ ಪ್ರಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು ಮತ್ತು ಎಫ್‌ಎಸ್‌ಎಸ್‌ಎಐ ಪ್ರಾದೇಶಿಕ ನಿರ್ದೇಶಕರ ಮೂಲಕ ಏಪ್ರಿಲ್ 22 ರಂದು ಪರೀಕ್ಷಿಸಲು ಆದೇಶಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ

ಎವರೆಸ್ಟ್ ಮಸಾಲೆಗಳ ಮಾದರಿಗಳನ್ನು ಸಂಸ್ಥೆಯ ಎರಡು ಉತ್ಪಾದನಾ ಘಟಕಗಳಿಂದ ತೆಗೆದುಕೊಳ್ಳಲಾಗಿದೆ.ಎಂಡಿಹೆಚ್‌ನಿಂದ 25 ಮಾದರಿಗಳನ್ನು ಎಫ್ಎಸ್ಎಸ್ಎಐ ತಮ್ಮ 11 ಉತ್ಪಾದನಾ ಘಟಕಗಳಿಂದ ತೆಗೆದುಕೊಳ್ಳಲಾಗಿದೆ.

ಕೀಟನಾಶಕಗಳ ಅಂಶಗಳು ಸೇರಿದಂತೆ ವಿವಿಧ ಗುಣಮಟ್ಟ ಮತ್ತು ಸುರಕ್ಷತಾ ನಿಯತಾಂಕಗಳ ಅನುಸರಣೆಗಾಗಿ ಮಾದರಿಯ ಪ್ರತಿಯೊಂದು ಉತ್ಪನ್ನಗಳನ್ನು ವಿಶ್ಲೇಷಿಸಲಾಗಿದೆ. ಈ ಮಾದರಿಗಳನ್ನು ಎಫ್ಎಸ್ಎಸ್ಎಐ ಸೂಚಿಸಿದ ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಎಥಿಲೀನ್ ಆಕ್ಸೈಡ್‌ ಕುರುವಿಗಾಗಿ ವಿಶ್ಲೇಷಿಸಲಾಗಿದೆ.

ಇದುವರೆಗೆ ಬಂದಿರುವ ಪ್ರಯೋಗಾಲಯ ವರದಿಗಳನ್ನು ಎಫ್ಎಸ್ಎಸ್ಎಐ ವೈಜ್ಞಾನಿಕ ಸಮಿತಿಯು ಪರಿಶೀಲಿಸಿದ್ದು , ಮಾದರಿಗಳಲ್ಲಿ ಎಥಿಲೀನ್ ಆಕ್ಸೈಡ್‌ನ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಅಂತೆಯೇ, ಇತರ ಬ್ರಾಂಡ್‌ಗಳ ಮಸಾಲೆಗಳ 300 ಮಾದರಿಗಳ ಪರೀಕ್ಷಾ ವರದಿಗಳನ್ನು ಸಹ ವೈಜ್ಞಾನಿಕ ಸಮಿತಿಯು ಪರಿಶೀಲಿಸಿದೆ ಮತ್ತು ಅವುಗಳಲ್ಲೂ ಎಥಿಲೀನ್ ಆಕ್ಸೈಡ್‌ ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ವೈಜ್ಞಾನಿಕ ಸಮಿತಿಗಳು ಕೇರಳದ ಭಾರತೀಯ ಮಸಾಲೆ ಸಂಶೋಧನಾ ಸಂಸ್ಥೆ, ಹರಿಯಾಣದ ಎನ್‌ಐಎಫ್‌ಟಿಇಎಂ, ಮುಂಬೈನ ಬಿಎಆರ್‌ಸಿ, ಲಖನೌದ ಸಿಎಂಪಿಎಪಿ, ಅಸ್ಸಾಂನ ಡಿಆರ್‌ಡಿಒ ಒಳಗೊಂಡಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X