ಕಲಬುರಗಿ | ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ; ಶಾಲಾ ಸಂಸತ್ ರಚನೆ

Date:

Advertisements

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ ನಡೆಸುವ ಮೂಲಕ 2024-25ನೇ ಶೈಕಣಿಕ ಸಾಲಿನ ಶಾಲಾ ಸಂಸತ್ ರಚನೆ ಮಾಡಿದರು.

ಚುನಾವಣಾ ಅಧಿಸೂಚನೆ ಹೊರಡಿಸಿ ನಾಮಪತ್ರ ಸಲ್ಲಿಸುವುದು, ವಾಪಸ್ ತೆಗೆದುಕೊಳ್ಳುವುದು, ಅಣುಕು ಮತದಾನ, ತೋರು ಬೆರಳಿಗೆ ಶಾಹಿ ಹಚ್ಚುವುದು ಸೇರಿದಂತೆ ಚುನಾವಣೆಯಲ್ಲಿ ಅನುಸರಿಸುವ ಬಹುತೇಕ ವಿಧಾನಗಳನ್ನು ಅನುಸರಿಸಿದರು. ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಇವಿಎಂ ಆ್ಯಪ್ ಮೂಲಕ ಮತ ಚಲಾಯಿಸಿದರು. ಹೊಸ ಮತದಾರರು(6ನೇ ತರಗತಿ) ಉತ್ಸಾಹದಿಂದ ಮತದಾನ ಮಾಡುವುದು ಕಂಡುಬಂದಿತು.‌

ವಸತಿ ಶಾಲೆಯಲ್ಲಿ ಚುನಾವಣೆ

ಪ್ರಾಚಾರ್ಯ ಡಾ ರಾಜಶೇಖರ ಮಾಂಗ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿವಾನಂದ ಬೀಳಗಿ, ನಾಗಶೆಟ್ಟಿ, ಅಶೋಕ, ತುಕಾರಾಮ, ಮಹಾನಂದ, ರೇಖಾ, ಸಾಲೇಹ ಫರೀನ್, ಶಿವಕುಮಾರ ಹಿರೇಮಠ, ಮಹೇಶ ಎಸ್ ಜಿ, ಬಸವರಾಜ, ಭಾಗ್ಯ ಜ್ಯೋತಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಂತರ ಮತ ಎಣಿಕೆ ನಡೆದು ಮಂತ್ರಿಮಂಡಲ ರಚಿಸಿದರು.

Advertisements
ವಸತಿ ಶಾಲೆಯಲ್ಲಿ ಚುನಾವಣೆ
ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ

ಈ ಸುದ್ದಿ ಓದಿದ್ದೀರಾ ಹಾವೇರಿ | ಲಿಡ್ಕರ್ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ದಸಂಸ ಒತ್ತಾಯ

ಮಂತ್ರಿ ಮಂಡಲ ವಿವರ:

  • ಗೀತಾ ಭೀಮಸಿಂಗ್ – ಪ್ರಧಾನಿ,
  • ಅನುರಾಧಾ, ಪ್ರಿಯಾ – ಶಿಕ್ಷಣ ಮಂತ್ರಿ
  • ನಾವಿನ್ಯ ಸೂರ್ಯಕಾಂತ – ಆರೋಗ್ಯ ಮಂತ್ರಿ
  • ರಂಜಿತಾ ವೆಂಕಟೇಶ, ಪ್ರಜ್ಞಾ ಪರಮೇಶ್ವರ – ಆಹಾರ ಮಂತ್ರಿಗಳು
  • ಕೀರ್ತಿ ಲೋಕೇಶ್, ಸ್ನೇಹಾ ಅಶೋಕ – ಶಿಸ್ತು ಮತ್ತು ಸ್ವಚ್ಚತಾ ಮಂತ್ರಿಗಳು
  • ಶೃತಿ ಸೂರ್ಯಕಾಂತ, ಐಶಾ ಸಂತೋಷ – ಸಾಂಸ್ಕೃತಿಕ ಮಂತ್ರಿಗಳು
  • ಲಕ್ಷ್ಮೀಬಾಯಿ ಶಿವರಾಮ, ಅನುಶ್ರೀ ನರಸಪ್ಪ – ಕ್ರೀಡಾ ಮಂತ್ರಿಗಳು
  • ಶಾಲಿನಿ ದಶರಥ – ಪರಿಸರ ಮತ್ತು ಅರಣ್ಯ ಮಂತ್ರಿ
  • ಕಾವೇರಿ ತುಕಾರಾಮ – ಪ್ರವಾಸ ಮಂತ್ರಿ
  • ಕರೀನಾ ತುಕಾರಾಮ, ಶಿಲ್ಪಾ ನಾಗೇಂದ್ರಪ್ಪ – ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಗಳಾಗಿ ನೇಮಕಗೊಂಡರು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X