ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರಿಗೆ ಆನ್ಲೈನ್ ನೋಂದಣಿ ಕಡ್ಡಾಯ. ಹಾಗಾಗಿ ಪ್ರವಾಸಕ್ಕೆ ಬರುವವರು ಆನ್ಲೈನ್ ಮೂಲಕ ಕಾಯ್ದಿರಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯು ಗಿರಿಶ್ರೇಣಿಗಳ ಪರ್ವತಗಳಿಂದ ಕಂಗೊಳಿಸುತ್ತಿವೆ. ಇಲ್ಲಿ ನೋಡುಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮಳೆಗಾಲ ಬಂದರೆ ಪ್ರವಾಸಿಗರಿಗೆ ರೋಮಾಂಚನವಾಗುತ್ತದೆ. ಯಾಕೆಂದರೆ ಇಲ್ಲಿ ಮಳೆ ಬೀಳುವ ಸಮಯದಲ್ಲಿ ಸುತ್ತಲೂ ಗಾಳಿಯ ವೇಗ ಹಾಗೂ ಮಂಜು ಮುಸುಕಿರುವ ಹಿಮದ ರಾಶಿಯೊಂದಿಗೆ ಕೂಡಿದೆ.
ಬೇರೆ ಬೇರೆ ರಾಜ್ಯ, ಜಿಲ್ಲೆ ಹಾಗೂ ದೇಶ ವಿದೇಶಗಳಿಂದಲೂ ಬರುವವವರ ಸಂಖ್ಯೆ ಹೆಚ್ಚಿದೆ. ಚಿಕ್ಕಮಗಳೂರಿನ ಅನೇಕ ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟು ಅದೇ ಮಾರ್ಗವಾಗಿ ಚಿಕ್ಕಮಗಳೂರಿನಿಂದ ಸುಮಾರು 25-30 ಕಿಲೋಮೀಟರ್ ದೂರವಿರುವ ಮುಳ್ಳಯ್ಯನ ಗಿರಿ ಹಾಗೂ ಬಾಬಾ ಬುಡನ್ ಗಿರಿಗೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಕಾಯ್ದಿರಿಸಬೇಕೆಂಬ ತೀರ್ಮಾನವನ್ನು ಜಿಲ್ಲಾಡಳಿತ ಹೊರಡಿಸಿದೆ.
ಜಿಲ್ಲೆಯ ಎತ್ತಿನ ಭುಜ, ಕೆಮ್ಮಣ್ಣು ಗುಂಡಿ, ಹೊನ್ನಮ್ಮನಹಳ್ಳ ಸೇರಿದಂತೆ ಹಲವು ಪ್ರವಾಸಿತಾಣಗಳಿಗೆ ಹಾಗೂ ಗಿರಿಶ್ರೇಣಿಗಳಿಗೆ ಬರುವ ಪ್ರವಾಸಿಗರಿಗೆ ಆನ್ಲೈನ್ ಮೂಲಕ ವ್ಯವಸ್ಥೆ ಮಾಡಿದರೆ ತುಂಬಾ ಕಷ್ಟವಾಗುತ್ತದೆ.
ಜನಪರ ವಾದಿ ಗೌಸ್ ಮೊಹಿದ್ದೀನ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಆನ್ಲೈನ್ ಮೂಲಕ ಕಾಯ್ದಿರಿಸಿದ ಸಂಖ್ಯೆಯಲ್ಲಿ ಜನರು ಬರುವುದಕ್ಕೆ ಮಾತ್ರ ಅವಕಾಶ ಎಂದಾದರೆ ಪ್ರವಾಸ ನೋಡುಗರ ಸಂಖ್ಯೆ ಕಡಿಮೆ ಆಗುತ್ತದೆ. ಕೆಲವರು ಓದಿರುತ್ತಾರೆ, ವಿದ್ಯಾವಂತರಾಗಿರುತ್ತಾರೆ. ಇನ್ನೂ ಕೆಲವರಿಗೆ ಆನ್ಲೈನ್ ಬಳಸುವುದು ಹೇಗೆಂದು ಗೊತ್ತಿರುವುದಿಲ್ಲ. ಅನಕ್ಷರಸ್ಥರಿಗೆ ಹಾಗೂ ಇನ್ನೂ ಕೆಲವು ಜನರಿಗೆ ಆನ್ಲೈನ್ ಬಳಕೆ ಮಾಡುವುದು ಗೊತ್ತಾಗುವುದಿಲ್ಲ. ಅಂಥವರಿಗೆಲ್ಲ ತುಂಬಾ ತೊಂದರೆಯಾಗುತ್ತದೆ. ಈ ಬಗ್ಗೆ ಎರಡು ದಿನದ ಹಿಂದೆ ಪತ್ರಿಕಾಗೋಷ್ಟಿ ನಡೆಸಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿಯಲ್ಲಿ ಮುಂದುವರೆದ ಮಳೆಯ ಆರ್ಭಟ: ನೆರೆಯಿಂದಾಗಿ ಮನೆಯಲ್ಲೇ ಸಿಲುಕಿದ್ದ ಹಲವರ ರಕ್ಷಣೆ
“ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನೇಕ ಧಾರ್ಮಿಕ ಸ್ಥಳಗಳಿದ್ದು, ಆನ್ಲೈನ್ ಮೂಲಕ ನೋಂದಣಿ ಮಾಡುವ ನಿರ್ಧಾರದಿಂದ ಸ್ಥಳೀಯ ಭಕ್ತರಿಗೆ ತೊಂದರೆಯಾಗುತ್ತದೆ. ಕೂಡಲೇ ಇದನ್ನು ತಡೆಯಬೇಕು. ಇದರ ಬದಲು ರಸ್ತೆಗಳು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಹೆಚ್ಚಿಸಲು ಗಮನ ವಹಿಸಿಸಬೇಕು” ಎಂದು ಆನಲೈನ್ ವ್ಯವಸ್ಥೆ ಬಗ್ಗೆ ಚಿಕ್ಕಮಗಳೂರಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.
Hi hello.
Actually good Idea.
Because pollution Avoid, traffic avoid, drank and drive Avoid, mountain overload avoid, accident avoid.then police also relax.
Because almost people L board drive one of the most Accident in hill Area.
Please request;
Above 5 years driving Experience only Allowed in hill road.
Totally good idea.
Thanks thanks Lot chika Mangalore .
Rong booking madkonda baroda agalla yavdo places hodaga a place barthivi nodavanecmadkoloke agalla kasta agathe