ಭೂಕುಸಿತ | ‘ಆಸೆಯ ದುಃಖ’: ವರ್ಷದ ಹಿಂದೆ ಬಾಲಕಿ ಬರೆದಿದ್ದ ಕಥೆಗೆ ವಯನಾಡ್ ಈಗ ಸಾಕ್ಷಿಯಾಗಿದೆ

Date:

Advertisements

ಕೇರಳದ ಶಾಲಾ ವಿದ್ಯಾರ್ಥಿನಿಯೊಬ್ಬಳು ಬರೆದ ಕಥೆಯು ಕೇರಳದ ವಯನಾಡ್‌ನಲ್ಲಿ ಸುಮಾರು 300 ಜನರು ಸಾವನ್ನಪ್ಪಿದ, 200ಕ್ಕೂ ಹೆಚ್ಚು ಜನರು ಗಾಯಗೊಂಡ ಭಾರೀ ಭೂಕುಸಿತದ ಬಗ್ಗೆ ಮುನ್ಸೂಚನೆ ನೀಡಿದಂತಿದೆ. “ಮಳೆ ಬಂದರೆ, ಭೂಕುಸಿತ ಸಂಭವಿಸುತ್ತವೆ. ನದಿಗಳಿಗೆ ಅಪ್ಪಳಿಸುತ್ತವೆ. ಮಾನವ ಜೀವಿಗಳು ಸೇರಿದಂತೆ ಎಲ್ಲವನ್ನೂ ನುಂಗಿ ಹಾಕುತ್ತವೆ” ಎಂದು ಕಳೆದ ವರ್ಷ ತನ್ನ ಶಾಲಾ ಮ್ಯಾಗಜೀನ್‌ಗಾಗಿ ಬರೆದಿದ್ದ ಕಥೆಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. ಆಕೆಯ ಕಥೆ ಭವಿಷ್ಯವಾಣಿಯಂತೆ ವಾಯನಾಡ್‌ನಲ್ಲಿ ಗೋಚರಿಸುತ್ತಿದೆ.

ಲಯಾ ಎಂಬ ವಿದ್ಯಾರ್ಥಿನಿ ಬರೆದಿದ್ದ ಕಥೆಯಂತೆಯೇ ಈಗ ವಿನಾಶಕಾರಿ ಭೂಕುಸಿತವು ಆಕೆಯ ನಿವಾಸವಿರುವ ಚೂರಮಲಾ ಪ್ರದೇಶವನ್ನು ನೆಲಸಮಗೊಳಿಸಿದೆ. ದುರಂತ ಘಟನೆಯಲ್ಲಿ ಬಾಲಕಿ ತನ್ನ ತಂದೆಯನ್ನೂ ಕಳೆದುಕೊಂಡಿದ್ದಾಳೆ. ಆಕೆ ಓದುತ್ತಿರುವ ಚೂರಮಲಾ ವೆಲ್ಲರ್ಮಲಾದಲ್ಲಿರುವ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ವಿದ್ಯಾರ್ಥಿನಿ ಲಯಾ ತಮ್ಮ ಶಾಲೆಯ ಡಿಜಿಟಲ್ ಮ್ಯಾಗಜಿನ್ ‘ವೆಲ್ಲಾರಂ ಕಲ್ಲುಕಲ್’ಗಾಗಿ ‘ಆಗ್ರಹತಿಂತೆ ದುರಾನುಭವಂ’ (ಆಸೆಯ ದುಃಖ) ಕಥೆಯನ್ನು ಬರೆದಿದ್ದರು. ಕತೆಯಲ್ಲಿ ಸಂಭಾವಿತ ದುರಂತವನ್ನು ವಿವರಿಸಿದ್ದಳು. ಮಾತ್ರವಲ್ಲದೆ, ಸನ್ನಿಹಿತ ಅಪಾಯದ ಬಗ್ಗೆ ಇಬ್ಬರು ಸ್ನೇಹಿತೆರಿಗೆ ಎಚ್ಚರಿಕೆ ನೀಡುವುದನ್ನೂ ಉಲ್ಲೇಖಿಸಿದ್ದಳು.

Advertisements

ಕಥೆಯಲ್ಲಿ, ಇಬ್ಬರು ಸ್ನೇಹಿತೆಯರು – ಅನಸ್ವರ ಮತ್ತು ಅಲಂಕೃತ – ತಮ್ಮ ಪೋಷಕರಿಗೆ ಹೇಳದೆ ಜಲಪಾತವನ್ನು ನೋಡಲು ಹೋಗುತ್ತಾರೆ. ಶೀಘ್ರದಲ್ಲೇ, ಹಕ್ಕಿ ಹುಡುಗಿಯರನ್ನು ಸಮೀಪಿಸುತ್ತದೆ. ‘ಈಗ ಹೊರಡಿ ಮಕ್ಕಳೇ, ಮುಂದೆ ಅಪಾಯ ಸಂಭವಿಸಲಿದೆ’ ಎಂದು ಹೇಳುತ್ತದೆ. ಮಕ್ಕಳು ತಕ್ಷಣ ಓಡಿ ಹೋಗುತ್ತಾರೆ. ಬಳಿಕ, ಹಕ್ಕಿಯು ಹುಡುಗಿಯಾಗಿ ರೂಪಾಂತರಗೊಳ್ಳುವುದನ್ನು ಅವರು ದೂರದಿಂದ ನೋಡುತ್ತಾರೆ.

ವಯನಾಡ್ ಭೂಕುಸಿತ

ಆಕೆಯ ಕತೆ ಈಗ ವಯನಾಡ್‌ ಜಿಲ್ಲೆಯಲ್ಲಿ ನಿಜವಾಗಿ ಗೋಚರಿಸುತ್ತಿದೆ. ಮಂಗಳವಾರ ಮುಂಜಾನೆ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿತ್ತು. ಬಳಿಕ, 4:10ಕ್ಕೆ ಮತ್ತೊಂದು ಭೂಕುಸಿತ ಸಂಭವಿಸಿತು. ಮೆಪ್ಪಾಡಿ, ಮುಂಡಕ್ಕೈ, ಚೂರಮಲಾ ಸೇರಿದಂತೆ ಹಲವು ಪ್ರದೇಶಗಳು ಭೂಕುಸಿತದಿಂದ ನಾಶವಾಗಿವೆ. ಮನೆಗಳು, ರಸ್ತೆಗಳು ಕೊಚ್ಚಿಹೋಗಿವೆ. ಈವರೆಗೆ, 300ಕ್ಕೂ ಅಧಿಕ ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ರಾತ್ರಿ ವಯನಾಡಿನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಶೀಘ್ರವೇ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ವಯನಾಡ್‌ಗೆ ಭೇಟಿ ನೀಡಿದ್ದು, ಭೂಕುಸಿತವನ್ನು ‘ಭಯಾನಕ ದುರಂತ’ ಎಂದು ಬಣ್ಣಿಸಿದ್ದಾರೆ. ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯಾದಗಲೂ ಇಷ್ಟೊಂದು ನೋವಾಗಿರಲಿಲ್ಲ. ಈಗ ತುಂಬಾ ನೋವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಅಲ್ಲದೆ, ವಯನಾಡ್‌ನಲ್ಲಿ ಸಂತ್ರಸ್ತರಿಗಾಗಿ ಕಾಂಗ್ರೆಸ್‌ 100 ಮನೆಗಳನ್ನು ನಿರ್ಮಾಣ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X