ಬೀದರ್‌ | ಪ್ರಗತಿಶೀಲ ಚಳುವಳಿಯ ಪ್ರಖರ ಧ್ವನಿ ʼನಿರಂಜನʼ

Date:

Advertisements

ಖ್ಯಾತ ಬರಹಗಾರ, ಲೇಖಕ ನಿರಂಜನ ಅವರು ಕನ್ನಡದ ಅನನ್ಯ ಪ್ರತಿಭೆ. ಸಾಹಿತ್ಯ ಮತ್ತು ರಾಜಕಾರಣವನ್ನು ಬೇರೆಯಾಗಿ ಕಾಣದ ಹಲವು ಲೇಖಕರಲ್ಲಿ ನಿರಂಜನರು ಒಬ್ಬರು ಎಂದು ಬಾಗಲಕೋಟೆ ಅಧ್ಯಾಪಕ ರೇವಣಸಿದ್ದಪ್ಪ ದೊರೆಗಳ್ ಹೇಳಿದರು.

ಬಸವಕಲ್ಯಾಣ ನಗರದ ಸಂಜೀವಿನಿ ಆಸ್ಪತ್ರೆ ಸಭಾಂಗಣದಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ನಿರಂಜನ ಜನ್ಮ ಶತಮಾನೋತ್ಸವ ಪ್ರಯುಕ್ತ ನಿರಂಜನರ ಸಾಹಿತ್ಯದ ತಾತ್ವಿಕತೆ ಕುರಿತು ಪ್ರತಿಷ್ಠಾನದ 81ನೇ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ʼಬರಹದಿಂದಲೇ ಬದುಕುತ್ತೇನೆ ಎಂದು ನಂಬಿದ ಬಹುದೊಡ್ಡ ಬರಹಗಾರ ನಿರಂಜನ. ಕನ್ನಡದ ಹಲವು ಲೇಖಕರು ಪತ್ರಕರ್ತರಾಗಿದ್ದರು. ಅವರ ಬರಹ ಪತ್ರಿಕೆ ಬರಹ, ಅಂಕಣ ಹಾಗೂ ಸೃಜನಶೀಲ ಬರಹವು ಬರೆಯುತ್ತಿದ್ದರು. ನಿರಂಜನರು ಹಾಗೂ ಅವರ ಪತ್ನಿ ಅನುಪಮಾ ನಿರಂಜನ ಕನ್ನಡದ ಶ್ರೇಷ್ಠ ಬರಹಗಾರ ದಂಪತಿ. ಬಾಲ್ಯದಲ್ಲಿ ಕತೆಗಳು ಬರೆದ ನಿರಂಜನರು ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದರುʼ ಎಂದರು.

Advertisements

ನಿರಂಜನರು ಬರೆದ ‘ಕೊನೆಯ ಗಿರಾಕಿ’ ಕತೆಯನ್ನು ಕಲಬುರ್ಗಿಯ ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಅವರು ವಿಮರ್ಶಿಸಿ, ʼನಿರಂಜನರ ಅವರ ಕತೆ ಮಾತು ಬಾರದ, ಅಸಹಾಯಕ, ಬಡ ಹುಡುಗಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಎಸಗಿದ ದೌರ್ಜನ್ಯ ಹಾಗೂ ದಾರುಣತೆಯನ್ನು ಬಿಂಬಿಸುತ್ತದೆ. ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ಈ ಕತೆ ಸಮಾಜದ ವಿಕೃತ ಮುಖವನ್ನು ಅನಾವರಣಗೊಳಿಸುತ್ತದೆʼ ಎಂದು ವಿಶ್ಲೇಷಿಸಿದರು.

ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಜನ ಚಳುವಳಿ ಹಾಗೂ ಸಾಮಾಜಿಕ ಬದುಕಿನ ನೋವಿನ, ಅಸಹಾಯಕತೆ, ಸಂಘರ್ಷದ ಹಲವು ಮುಖಗಳು ನಿರಂಜನರ ಸೃಜನಶೀಲ ಕೃತಿಗಳಲ್ಲಿ ಅಡಕಗೊಂಡಿವೆ. ಕನ್ನಡದ ಪ್ರಗತಿಶೀಲ ಚಳುವಳಿಯ ಪ್ರಮುಖ ಧ್ವನಿ ನಿರಂಜನರುʼ ಎಂದು ಹೇಳಿದರು.

ರಂಗಕರ್ಮಿ ಉಮೇಶ ಪಾಟೀಲ ನಿರಂಜನರ ʼಕೊನೆಯ ಗಿರಾಕಿʼ ಕತೆಯನ್ನು ನಾಟಕೀಯವಾಗಿ ಓದಿದರು. ನಾಗೇಂದ್ರ ಬಿರಾದಾರ ರಂಗಗೀತೆ ಹಾಡಿ ಸಭಿಕರನ್ನು ರಂಜಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸರಳ ಸಾಮೂಹಿಕ ವಿವಾಹ : ದಾಂಪತ್ಯಕ್ಕೆ ಕಾಲಿಟ್ಟ 138 ಜೋಡಿಗಳು

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ, ಪ್ರತಿಷ್ಠಾನದ ನಿರ್ದೇಶಕ ಬಕ್ಕಯ್ಯ ಸ್ವಾಮಿ, ಭೀಮಾಶಂಕರ ಮಾಶಾಳಕರ, ನಾಗಪ್ಪ ನಿಣ್ಣೆ, ಬಸವಣ್ಣಪ್ಪ ನೆಲೋಗಿ, ವೀರಶೆಟ್ಟಿ ಪಾಟೀಲ್, ಶಿವಪುತ್ರ ಸಂಗನಬಸವ, ಸೋಮನಾಥ ಡೊಣಗಾರೆ, ಶಿವಪುತ್ರ ಮಿರಾಜದಾರ ಮೊದಲಾದವರು ಇದ್ದರು. ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಶರಣಬಸವ ಬಿರಾದಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X