ವಯನಾಡು ದುರಂತದಲ್ಲಿ ಬದುಕುಳಿದವರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗಾಗಿ ಮೈಸೂರು ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(ಸಿಎಫ್ಟಿಆರ್ಐ)ದಿಂದ ಮೂರು ಹಂತದಲ್ಲಿ ಪೌಷ್ಟಿಕ ಆಹಾರ ಸರಬರಾಜು ಮಾಡಲಾಗಿದೆ.
ಮೊದಲಿಗೆ ಆಗಸ್ಟ್ 2 ಹಾಗೂ 7ರಂದು ಆಹಾರ ಸರಬರಾಜು ಮಾಡಿದ್ದು, ಸಂತ್ರಸ್ತರಿಗೆ ಬುಧವಾರ ಮತ್ತಷ್ಟು ಆಹಾರವನ್ನು ಪೂರೈಕೆ ಮಾಡಿದ್ದಾರೆ.
“ಕೇರಳದ ಬೇಡಿಕೆಯಂತೆ ಹೆಚ್ಚು ದಿನಗಳ ಕಾಲ ಉಪಯೋಗಿಸಲು ಸಾಧ್ಯವಾಗುವ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಒದಗಿಸಲಾಗುತ್ತಿದೆ” ಎಂದು ಸಂಸ್ಥೆಯ ನಿರ್ದೇಶಕಿ ಡಾ ಶ್ರೀದೇವಿ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕೃಷಿ ಕುಟುಂಬದ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು: ಈಶಪ್ಪ ಭೊತೆ
“ಸಂತ್ರಸ್ತರಿಗೆ ಕಳುಹಿಸಿರುವ ಆಹಾರದಲ್ಲಿ ಚಿಕ್ಕಿ (ನ್ಯೂಟ್ರಾ ಸ್ಪಿರ್ಯೂಲಿನಾ), ಮ್ಯಾಂಗೋ ಬಾರ್, ಮಕ್ಕಳಲ್ಲಿ ಶಕ್ತಿ ಹಾಗೂ ಪೌಷ್ಟಿಕಾಂಶ ಹೆಚ್ಚಿಸುವ ಬರ್ಫಿ, ರಾಗಿ ಬಿಸ್ಕತ್ತು, ರಾಗಿ ಮಿಶ್ರಿತ ಪಾನೀಯ, ಕೋಕಮ್ ಫ್ರೂಟ್ ಬಾರ್, ಆಮ್ಲಾ ಕ್ಯಾಂಡಿ, ಹುಣಸೆ ಮಿಠಾಯಿ, ಪ್ರೋಟೀನ್ ರಸ್ಕ್ಗಳು, ಸಾಂಬಾರ್ ಮಿಕ್ಸ್, ಸಾಂಬಾರ್ ಹುಡಿ, 6ರಿಂದ 10 ತಿಂಗಳ ವಯಸ್ಸಿನ ಶಿಶುಗಳ ಆಹಾರವೂ ಇದೆ” ಎಂದು ತಿಳಿಸಿದ್ದಾರೆ.
