ಸುಡಾನ್‌ | ಅಣೆಕಟ್ಟು ಒಡೆದು ಪ್ರವಾಹ; ಕನಿಷ್ಠ 30 ಮಂದಿ ಸಾವು, ಹಲವರು ನಾಪತ್ತೆ

Date:

Advertisements

ಪೂರ್ವ ಸುಡಾನ್‌ನಲ್ಲಿ ಅಣೆಕಟ್ಟು ಒಡೆದು ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ, ಹಲವರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ.

ಭಾರೀ ಮಳೆಯಿಂದಾಗಿ ಪೋರ್ಟ್ ಸುಡಾನ್‌ನ ಉತ್ತರಕ್ಕೆ 40 ಕಿಲೋಮೀಟರ್ (25 ಮೈಲುಗಳು) ಇರುವ ಅರ್ಬಾತ್ ಅಣೆಕಟ್ಟು ಕುಸಿದಿದೆ. ಈ ಪ್ರವಾಹವು 20 ಹಳ್ಳಿಗಳನ್ನು ನಾಶಮಾಡಿದೆ. ಈಗಾಗಲೇ ಅಂತರ್‌ ಯುದ್ಧದಲ್ಲಿ ಸಿಲುಕಿರುವ ಸುಡಾನ್‌ನಲ್ಲಿ ಈಗ ಪ್ರವಾಹವು ಮತ್ತಷ್ಟು ಸಂಕಷ್ಟ ತಂದಿದೆ.

“ಈ ಪ್ರದೇಶವನ್ನು ಗುರುತಿಸಲಾಗುತ್ತಿಲ್ಲ. ವಿದ್ಯುತ್ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ” ಎಂದು ರೆಡ್ ಸೀ ರಾಜ್ಯದ ಜಲ ಪ್ರಾಧಿಕಾರದ ಮುಖ್ಯಸ್ಥ ಒಮರ್ ಐಸಾ ಹರೌನ್ ತಿಳಿಸಿರುವುದಾಗಿ ವರದಿಯಾಗಿದೆ.

Advertisements

ಈವರೆಗೆ ಕನಿಷ್ಠ 30 ಮಂದಿ ಸಾವನ್ನಪ್ಪಿರುವುದು ದೃಡಪಟ್ಟಿದ್ದು, ಚಿನ್ನದ ಗಣಿಗಾರರು ಸೇರಿದಂತೆ 150ರಿಂದ 200 ಜನರು ಕಾಣೆಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನು ಓದಿದ್ದೀರಾ? ಸುಡಾನ್‌ನಲ್ಲಿ ಸಂಘರ್ಷ: 800 ಮಂದಿ ಹತ್ಯೆ, 48 ಲಕ್ಷ ಜನರ ಸ್ಥಳಾಂತರ

ಈ ಪ್ರವಾಹವು ಸುಮಾರು 50,000 ಜನರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇನ್ನು ಅಣೆಕಟ್ಟಿನ ಪೂರ್ವದ ಪ್ರದೇಶವನ್ನು ಇನ್ನೂ ತಲುಪಲು ಸಾಧ್ಯವಾಗದ ಕಾರಣ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅರ್ಬಾತ್ ಅಣೆಕಟ್ಟು ಪೋರ್ಟ್ ಸುಡಾನ್‌ಗೆ ಪ್ರಮುಖ ನೀರಿನ ಮೂಲವಾಗಿತ್ತು. ಇಲ್ಲೇ ದೇಶದ ಪ್ರಮುಖ ಕೆಂಪು ಸಮುದ್ರ ಬಂದರು ಇತ್ತು ಮತ್ತು ಸಹಾಯ ವಿತರಣೆಯ ಕೇಂದ್ರವಾಗಿತ್ತು. ಅಣೆಕಟ್ಟು ನಾಶವಾಗಿ, ನಗರವು ಈಗ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ಈ ವರ್ಷ ಸುಡಾನ್ ದೇಶದಾದ್ಯಂತ ಪ್ರವಾಹದಲ್ಲಿ 132 ಜನರು ಸಾವನ್ನಪ್ಪಿದ್ದಾರೆ. 118,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಸುಡಾನ್ ಸರ್ಕಾರದ ಅಧಿಕೃತ ಡೇಟಾ ಹೇಳುತ್ತದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X