ಬೆಂ. ಗ್ರಾ | ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ರೈತರ ವಿರುದ್ಧ ಮೊಕದ್ದಮೆ; ಡಿಸಿಪಿ ಕಚೇರಿಗೆ ಹಾಜರಾದ ರೈತರು

Date:

Advertisements
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ವಿರುದ್ಧ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ರೈತರು ಬೆಂಗಳೂರು ನಗರದ ಡಿಸಿಪಿ ಕಚೇರಿಯಲ್ಲಿ ಹಾಜರಾದರು.

ಆಗಸ್ಟ್‌ 27ರ ಬೆಳಿಗ್ಗೆ ಕಾಮ್ರೇಡ್ ಶರತ್ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ ಡಿಸಿಪಿ ಕಚೇರಿಗೆ ತೆರಳಿದ ರೈತರು, “ರೈತರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಅಧಿಕಾರಿಗಳಿಗು ಮತ್ತು ರೈತರು ನಂಬಿದ ರಾಜಕಾರಣಿಗಳಿಗೂ ರೈತ ಕೋಟಿಯ ಅಭಿನಂದನೆಗಳು” ಎಂದು ರೈತರು ಅತ್ಯಂತ ವಿಷಾದಪೂರ್ವಕ ವ್ಯಂಗ್ಯವಾಡಿದ್ದಾರೆ.

“ಬೆಂಗಳೂರು ನಗರದಲ್ಲಿ ಈಗಾಗಲೇ ಜನಸಾಮಾನ್ಯರು ತಮಗೆ ಅನ್ಯಾಯ ಎಸಗಿದ ಕಚೇರಿಗಳ ಅಥವಾ ಮಂತ್ರಿಗಳ ಮುಂದೆ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಅವಕಾಶವನ್ನು ನಿರಾಕರಿಸಲಾಗಿದೆ. ಏನು ಪ್ರತಿಭಟಿಸುವುದಿದ್ದರೂ ಯಾರೂ ಕೇಳಿಸಿಕೊಳ್ಳದ ಫ್ರೀಡಂ ಪಾರ್ಕ್‌ನಲ್ಲೇ ಮಾಡಬೇಕು ಎಂಬುದು ಬೆಂಗಳೂರು ಪೊಲೀಸ್ ರಾಜ್ಯ ಮತ್ತು ಅದಕ್ಕೆ ಹೂಂಗುಟ್ಟುವ ಕರ್ನಾಟಕದ ಪ್ರಜಾರಾಜ್ಯದ ತುಘಲಕ್ ಆದೇಶವಾಗಿದೆ. ಇದೇ ನಿರಾಕರಣೆಯನ್ನು ಬೆಂಗಳೂರಿನಿಂದ 35 ಕಿಮೀ ದೂರದ ದೇವನಹಳ್ಳಿಗೂ ವಿಸ್ತರಿಸಲಾಗಿದೆ”.” ಎಂದು ಟೀಕಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್‌ ಭವನ ನಿರ್ಮಾಣದ ನಿವೇಶನ ಅತಿಕ್ರಮಣ; ಆರೋಪ

Advertisements

“ದೇವನಹಳ್ಳಿಯ ರೈತರು ತಮ್ಮ ಮೇಲಿನ ಆನ್ಯಾಯಗಳ ವಿರುದ್ಧ ಹೋರಾಡಬೇಕಿದ್ದಲ್ಲಿ 35 ಕಿಮೀ ದೂರವಿರುವ ಬೆಂಗಳೂರಿಗೆ ಬಂದು ಫ್ರೀಡಂ ಪಾರ್ಕಿನಲ್ಲೇ ಬಸವಳಿಯಬೇಕಾಗಿದೆ. ರೈತರ ಏಕೈಕ ಜೀವನಾಧಾರವಾಗಿರುವ ಅವರ ಫಲವ್ತಾದ ಭೂಮಿಯನ್ನು ಭೂಗಳ್ಳರ ಲಾಭಿಗೋಸ್ಕರ ಸರ್ಕಾರ ಕಸಿದುಕೊಳ್ಳುತ್ತಿರುವುದೇ ಅಲ್ಲದೆ, ಅದನ್ನು ವಿರೋಧಿಸುತ್ತಿರುವುದಕ್ಕೆ ರೈತರ ಮೇಲೆಯೇ ಮೊಕದ್ದಮೆಯ ಮೇಲೆ ಮೊಕದ್ದಮೆ ದಾಖಲಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ” ಎಂದು ರೈತರು ಪ್ರತಿಭಟಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X